ಬೆಂಗಳೂರು ;- ಶಾಂತಿನಗರ ಶಾಸಕ ಎನ್.ಎ. ಹ್ಯಾರಿಸ್ ಅವರು ಕರ್ನಾಟಕ ರಾಜ್ಯ ಫುಟ್ಬಾಲ್ ಸಂಸ್ಥೆಯ ಅಧ್ಯಕ್ಷರಾಗಿ ಪುನರಾಯ್ಕೆಯಾಗಿದ್ದಾರೆ
ಬೆಂಗಳೂರು ಫುಟ್ಬಾಲ್ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ರಾಜ್ಯ ಫುಟ್ಬಾಲ್ ಸಂಸ್ಥೆಯ 54ನೇ ಮಹಾಸಭೆಯಲ್ಲಿ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು.
ಉಪಾಧ್ಯಕ್ಷರಾಗಿ ಪಿ.ಎಂ. ಶಕೀಲ್ ಅಬ್ದುಲ್ ರಹಿಮಾನ್, ಬಿ. ಕಮಲ್, ಜಿ.ಆರ್. ಸಂಜಯ್ (ಮೈಸೂರು), ಅಮಿತ್ ಪಾಟೀಲ (ಬೆಳಗಾವಿ) ಮತ್ತು ಇಸ್ಮಾಯಿಲ್ ಮುಸ್ಬಾ (ಉತ್ತರ ಕನ್ನಡ), ಉಪಪ್ರಧಾನ ಕಾರ್ಯದರ್ಶಿಗಳಾಗಿ ಹನೀಫ್ ಮಹಮ್ಮದ್, ಅಸ್ಲಂ ಅಹಮದ್ ಖಾನ್ ಮತ್ತು ಸರವಣನ್ ಧರ್ಮನ್, ಖಜಾಂಚಿಯಾಗಿ ಬಿ.ಕೆ.ಮುನಿರಾಜ್ ಆಯ್ಕೆಯಾದರು.