ನವದೆಹಲಿ:- ಭಯೋತ್ಪಾದಕ ಸಂಘಟನೆ ಲಷ್ಕರ್-ಎ-ತೊಯ್ಬಾ ಬಿಜೆಪಿ ಸಂಸದ, ರಾಜ್ಯ ಖಾತೆ ಸಚಿವರಾಗಿರುವ ಶಾಂತನು ಠಾಕೂರ್ಗೆ ಬೆದರಿಕೆ ಪತ್ರ ಕಳುಹಿಸಿದೆ. ಮುಸ್ಲಿಮರಿಗೆ ತೊಂದರೆ ಆದ್ರೆ ಇಡೀ ದೇಶನೇ ಸುಟ್ಟು ಹಾಕ್ತೀವಿ ಎಂದು ಬರೆದಿದ್ದಾರೆ.
NRC ಜಾರಿಗೆ ಬಂದರೆ ದೇಶವೇ ಹೊತ್ತಿ ಉರಿಯಲಿದೆ. ಮುಸ್ಲಿಂ ಸಮುದಾಯಕ್ಕೆ ಚಿತ್ರಹಿಂಸೆ ನೀಡಿದರೆ ಪರಿಣಾಮ ಎದುರಿಸಬೇಕಾಗುತ್ತೆ ಎಂದು ಉಗ್ರರು ಪತ್ರದಲ್ಲಿ ಬೆದರಿಕೆ ಹಾಕಿದ್ದಾರೆ.
ಉಗ್ರರಿಂದ ಪತ್ರ ಬಂದಿರುವ ಬಗ್ಗೆ ಕೇಂದ್ರ ಬಂದರು, ಹಡಗು ಮತ್ತು ಜಲಮಾರ್ಗ ಸಚಿವಾಲಯದ ರಾಜ್ಯ ಸಚಿವ ಶಾಂತನು ಠಾಕೂರ್ ಅವರು ಆಘಾತ ವ್ಯಕ್ತಪಡಿಸಿದ್ದಾರೆ. ಸಚಿವರಿಗೆ ಕಳುಹಿಸಿರುವ ಪತ್ರದಲ್ಲಿ, ಪಶ್ಚಿಮ ಬಂಗಾಳದಲ್ಲಿ ಎನ್ಆರ್ಸಿ ಜಾರ ಮಾಡಿ ಮುಸ್ಲಿಮರ ಮೇಲೆ ದೌರ್ಜನ್ಯ ನಡೆದರೆ ಬಂಗಾಳ ಮತ್ತು ಭಾರತ ಹೊತ್ತಿ ಉರಿಯುತ್ತದೆ. ನಿಮ್ಮನ್ನು ಉಳಿಸಲು ಯಾರಿಂದಲೂ ಸಾಧ್ಯವಿಲ್ಲ. ಲಷ್ಕರ್-ಎ-ತೈಬಾದ ಹೆಸರನ್ನು ನೀವು ಕೇಳಿದ್ದೀರಾ? ನಾವು ಲಷ್ಕರ್ನ ಸದಸ್ಯರು. ಪಶ್ಚಿಮ ಬಂಗಾಳದಲ್ಲಿ ಎನ್ಆರ್ಸಿ ಜಾರಿಯಾದರೆ ಹಫೀಜ್ ಸಯೀದ್ ಅವರ ಸೂಚನೆಯಂತೆ ತಕ್ಷಣ ನಾವು ನಮ್ಮ ಕೆಲಸವನ್ನು ಪ್ರಾರಂಭಿಸುತ್ತೇವೆ ಎಂದು ಬರೆಯಲಾಗಿದೆ.
ಈ ಪತ್ರವನ್ನು ಯಾರು ಕಳುಹಿಸಿದ್ದಾರೆ, ಎಲ್ಲಿಂದ ಕಳುಹಿಸಲಾಗಿದೆ ಎಂಬ ಎಲ್ಲಾ ಆಯಾಮಗಳಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈ ಪತ್ರವನ್ನು ನಿಜವಾಗಿಯೂ ಲಷ್ಕರ್ ಕಳುಹಿಸಿದ್ದಾರೆಯೇ ಎಂಬ ಬಗ್ಗೆಯೂ ತನಿಖಾ ಸಂಸ್ಥೆಗಳು ತನಿಖೆ ನಡೆಸುತ್ತಿವೆ