PrajatvkannadaPrajatvkannada
  • Home
  • ಬೆಂಗಳೂರು
  • ಜಿಲ್ಲೆ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಲೈಫ್ ಸ್ಟೈಲ್
  • ಚಲನಚಿತ್ರ
  • ಕ್ರೀಡೆ
  • ಗ್ಯಾಲರಿ
  • ವಿಡಿಯೋ
  • ಜೋತಿಷ್ಯ

Subscribe to Updates

Get the latest creative news from FooBar about art, design and business.

What's Hot

ಸ್ಕಾಟ್ಲ್ಯಾಂಡ್ ಪ್ರಧಾನ ಮಂತ್ರಿಯಾಗಿ ಪಾಕ್ ಮೂಲದ ಹಂಝಾ ಯೂಸುಫ್‌ ನೇಮಕ

March 29, 2023

ಕ್ಷಮೆ ಕೇಳದಿದ್ದರೆ ರಾಹುಲ್ ಗಾಂಧಿ ವಿರುದ್ಧ ಮತ್ತೊಂದು FIR ದಾಖಲಿಸುತ್ತೇನೆ: ರಂಜಿತ್ ಸಾವರ್ಕರ್

March 29, 2023

Code Of conduct: ಮಾಜಿ ಸಿಎಂ ಸಿದ್ದರಾಮಯ್ಯ ನೀತಿ ಸಂಹಿತೆ ಉಲ್ಲಂಘಿಸಿದ್ರಾ?! ಏನ್ ಹೇಳಿದ್ರು ಸಿದ್ದು!

March 29, 2023
Facebook Twitter Instagram
Thursday, March 30
Facebook Instagram YouTube
PrajatvkannadaPrajatvkannada
Demo
  • Home
  • ಬೆಂಗಳೂರು
  • ಜಿಲ್ಲೆ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಲೈಫ್ ಸ್ಟೈಲ್
  • ಚಲನಚಿತ್ರ
  • ಕ್ರೀಡೆ
  • ಗ್ಯಾಲರಿ
  • ವಿಡಿಯೋ
  • ಜೋತಿಷ್ಯ
PrajatvkannadaPrajatvkannada
Home » ರಾಜಕೀಯದಿಂದ ದೂರವಿರಲು ಕಾರಣವಾದ ಆ ವ್ಯಕ್ತಿ ಬಗ್ಗೆ ತಿಳಿಸಿದ ರಜನಿಕಾಂತ್
ಚಲನಚಿತ್ರ Prajatv KannadaBy Prajatv KannadaMarch 13, 2023

ರಾಜಕೀಯದಿಂದ ದೂರವಿರಲು ಕಾರಣವಾದ ಆ ವ್ಯಕ್ತಿ ಬಗ್ಗೆ ತಿಳಿಸಿದ ರಜನಿಕಾಂತ್

Facebook Twitter WhatsApp Reddit Email Telegram
Share
Facebook Twitter WhatsApp LinkedIn Email

ಕಾಲಿವುಡ್ ಸೂಪರ್ ಸ್ಟಾರ್ ರಜನಿಕಾಂತ್ ಸದ್ಯ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. 2021 ತಮಿಳುನಾಡು ವಿಧಾನಸಭೆ ಚುನಾವಣೆ ಮೂಲಕ ರಾಜಕೀಯ ಪ್ರವೇಶಿಸಬೇಕಿದ್ದ ರಜನಿಕಾಂತ್ ರಾಜಕೀಯ ರಂಗದಿಂದ ದೂರ ಸರಿದಿದ್ದು ಯಾಕೆ? ಅವರು ಈ ನಿರ್ಧಾರ ಮಾಡಲು ಕಾರಣವೇನು ಎಂಬುದನ್ನ ಇದೀಗ ನಟ ರಿವೀಲ್ ಮಾಡಿದ್ದಾರೆ.

ತಮಿಳು ಚಿತ್ರರಂಗದಲ್ಲಿ ರಜನಿಕಾಂತ್ ಸೂಪರ್ ಸ್ಟಾರ್ ಇದು ಎಲ್ಲರಿಗೂ ತಿಳಿದಿರುವ ವಿಚಾರ. ಸಿನಿಮಾ ಬಿಟ್ಟು ಸಮಾಜಮುಖಿ ಕಾರ್ಯಗಳ ಮೂಲಕ ಕೂಡ ರಜನಿಕಾಂತ್ ಗುರುತಿಸಿಕೊಂಡಿದ್ದಾರೆ. ತಮ್ಮದೇ ಒಂದು ಪಕ್ಷ ಕಟ್ಟಿ ರಾಜಕೀಯಕ್ಕೆ ಎಂಟ್ರಿ ಕೊಡಲು ಸಕಲ ಸಿದ್ಧತೆ ಮಾಡಿಕೊಂಡಿದ್ದರು. 2021ರಲ್ಲಿ ವಿಧಾನಸಭೆ ಚುನಾವಣೆ ಅಖಾಡಕ್ಕೆ ತಲೈವಾ ಇಳಿಯಬೇಕಿತ್ತು. ಆದರೆ ಅನಾರೋಗ್ಯದ ಕಾರಣದಿಂದ ನಟ ದೂರ ಸರಿದಿದ್ದರು.

ರಾಜಕೀಯ ಪ್ರವೇಶ ನಿರ್ಧಾರ ಕೈಬಿಡುವ ನಿರ್ಣಯಕ್ಕೆ ತಲೈವಾ ಬರಲು ಪ್ರಮುಖ ಕಾರಣ ಹಾಗೂ ರಾಜಕೀಯದಿಂದ ಹಿಂದೆ ಸರಿಯುವಂತೆ ರಜನೀಕಾಂತ್‌ರ ಮನವೊಲಿಸಿದ್ದು ವೈದ್ಯ ರವಿಚಂದ್ರನ್. ಇತ್ತೀಚಿಗೆ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ರಜನೀಕಾಂತ್, ನಾನು ರಾಜಕೀಯದಿಂದ ದೂರ ಉಳಿಯುವಂತೆ ನನ್ನ ಮನಃಪರಿವರ್ತನೆ ಮಾಡಿದ್ದು, ವೈದ್ಯ ರವಿಚಂದ್ರನ್ ಎಂದು ಹೇಳಿದ್ದಾರೆ.

2010ರಿಂದ ನನಗೆ ವೈದ್ಯ ರವಿಚಂದ್ರನ್ ಪರಿಚಯವಿದೆ. ನನಗೆ ಕಿಡ್ನಿ ಸಮಸ್ಯೆಯಾದಾಗ ಅವರು ನನಗೆ ಸಹಾಯ ಮಾಡಿದರು. ಕೋವಿಡ್ ಸಮಯದಲ್ಲಿ ಸಹ ಅವರು ನನಗೆ ಸಾಕಷ್ಟು ಮುನ್ನೆಚ್ಚರಿಕೆಗಳನ್ನು ನೀಡಿದ್ದರು. ರಾಜಕೀಯಕ್ಕೆ ಬರಬೇಕೆಂದರೆ ಈ ಎಚ್ಚರಿಕೆಗಳನ್ನು ಪಾಲಿಸಬೇಕು ಎಂದರು. ಅವರ ಎಚ್ಚರಿಕೆಗಳನ್ನು ಪಾಲಿಸಿ ಕೋವಿಡ್ ಅನ್ನು ದಾಟಿಕೊಂಡೆ ಎಂದಿದ್ದಾರೆ.

ಆರೋಗ್ಯಕ್ಕಾಗಿ ರಾಜಕೀಯದಿಂದ ಹಿಂದೆ ಸರಿಯುವ ಪರಿಸ್ಥಿತಿ ವದಗಿ ಬಂತು. ತಾನು ನೀಡಿದ ಭರವಸೆಗಳನ್ನು ಪೂರೈಸಲಿಲ್ಲ, ಮಾತುಕೊಟ್ಟು ಹಿಂದೆ ಸರಿದ ಎಂದು ಜನ ಮಾತನಾಡಿಕೊಳ್ಳುತ್ತಾರೆ ಎಂದು ನಾನು ಅವರ ಬಳಿ ಬೇಸರ ತೋಡಿಕೊಂಡೆ. ಆಗ ಅವರು, ನಾನೇ ಬೇಕಾದರೆ ಪ್ರೆಸ್ ಮೀಟ್ ಮಾಡಿ ನಿಮ್ಮ ಆರೋಗ್ಯ ಸ್ಥಿತಿಯನ್ನು ವಿವರಿಸುತ್ತೇನೆ, ನಾನೇ ನಿಮ್ಮನ್ನು ಬಲವಂತ ಮಾಡಿದೆ ಎಂಬುದನ್ನು ಹೇಳುತ್ತೇನೆ ಎಂದಿದ್ದರು ಎಂದು ರಜನಿಕಾಂತ್ ತಿಳಿಸಿದ್ದಾರೆ.

Share. Facebook Twitter WhatsApp Pinterest LinkedIn Tumblr Telegram Email

Related Posts

‘ಐಟಂ ಸಾಂಗ್ ಬೇಡ, ಮನೆಯಲ್ಲೇ ಇರು ಎಂದಿದ್ದರು: ವಿಚ್ಛೇದನದ ದಿನಗಳನ್ನು ನೆನಪಿಸಿಕೊಂಡ ನಟಿ ಸಮಂತಾ

March 29, 2023

ಪ್ರಭುದೇವ ಹುಟ್ಟಿದ್ದು ಅಮಾವಾಸ್ಯೆ ದಿನ: ಮೂಗೂರ್‌ ಸುಂದರ್‌

March 29, 2023

ಲಂಡನ್ ನಲ್ಲಿ ಶೋಭಿತಾ ಜೊತೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ನಾಗಚೈತನ್ಯ

March 29, 2023

ಸಂಭಾವನೆಗಾಗಿ ಯಾವತ್ತು ಬೇಡಬಾರದು: ನಟಿ ಸಮಂತಾ

March 29, 2023

ಅಂಬರೀಶ್ ಯಾರ ಬಳಿಯೂ ಕೈಚಾಚಿದವರಲ್ಲ ಆದರೆ ಸ್ಮಾರಕ್ಕಾಗಿ ಸುಮಲತಾ ಕೈಚಾಚಿದರು: ನಟ ಚೇತನ್

March 29, 2023

ಪ್ರಿಯಾಂಕಾ ಬಾಲಿವುಡ್ ಬಿಡೋಕೆ ಕರಣ್ ಜೋಹಾರ್ ಕಾರಣ: ಕಂಗನಾ ರಣಾವತ್

March 29, 2023
Stay In Touch
  • Facebook
  • Instagram
  • YouTube
© 2023 Prajatvkannada . Designed by Prajatvkannada .
  • Home
  • ಬೆಂಗಳೂರು
  • ಜಿಲ್ಲೆ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಲೈಫ್ ಸ್ಟೈಲ್
  • ಚಲನಚಿತ್ರ
  • ಕ್ರೀಡೆ
  • ಗ್ಯಾಲರಿ
  • ವಿಡಿಯೋ
  • ಜೋತಿಷ್ಯ

Type above and press Enter to search. Press Esc to cancel.