ಬೆಂಗಳೂರು ; ಕೆಂಗೇರಿ-ಚಲ್ಲಘಟ್ಟ ಮೆಟ್ರೋ ಪ್ರಾಯೋಗಿಕ ಸಂಚಾರ ಯಶಸ್ವಿಯಾಗಿದೆ. ಶನಿವಾರ ಬೆಳಿಗ್ಗೆ 11:27 ನಿಮಿಷದಿಂದ ಸಂಜೆ 4:15 ನಿಮಿಷದವರೆಗೆ ಪ್ರಾಯೋಗಿಕ ಸಂಚಾರ ನಡೆಸಿತು. ರೈಲು ಗಂಟೆಗೆ 10 ಕಿಮೀ ವೇಗದಲ್ಲಿ ಸಂಚರಿಸಿತು ಎಂದು ಬಿಎಂಆರ್ಸಿಎಲ್ನ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇನ್ನು ಬಿಎಮ್ಆರ್ಸಿಎಲ್ ಬುಧವಾರ ಬೈಯಪ್ಪನಹಳ್ಳಿ -ಕೆಆರ್ ಪುರ ಮೆಟ್ರೊ ನಿಲ್ದಾಣಗಳ ನಡುವೆ ಪ್ರಾಯೋಗಿಕ ಸಂಚಾರ ನಡೆಸಿತ್ತು. ನೇರಳೆ ಮಾರ್ಗದ ಚಲಘಟ್ಟ-ವೈಟ್ಫೀಲ್ಡ್ ನಿಲ್ದಾಣಗಳ ನಡುವಿನ 43 ಕಿಮೀ ಸಂಚಾರವನ್ನು ಅಗಸ್ಟ್ ತಿಂಗಳಲ್ಲಿ ಆರಂಭಿಸಲು ಬಿಎಂಆರ್ಸಿಎಲ್ ಯೋಜನೆ ರೂಪಿಸಿದೆ. ಈ ಸಂಪೂರ್ಣ ಮಾರ್ಗವನ್ನು ತೆರೆಯುವುದರಿಂದ ಜನರು ಪಶ್ಚಿಮ ಭಾಗದಿಂದ ವೈಟ್ಫೀಲ್ಡ್ ಸಂಚರಿಸಲು ಅನುಕೂಲವಾಗುತ್ತದೆ ಎಂದು ತಿಳಿದು ಬಂದಿದೆ.
Author: Prajatv Kannada
ಬೆಂಗಳೂರು ;- ರಾಜಧಾನಿ ಬೆಂಗಳೂರು ಸೇರಿ ರಾಜ್ಯದಲ್ಲಿ ನಾಳೆಯಿಂದ ನಂದಿನಿ ಹಾಲಿನ ಮಾರಾಟ ದರವನ್ನು ಪ್ರತಿ ಲೀಟರ್ಗೆ 3ರಂತೆ ಹೆಚ್ಚಳ ಮಾಡಲು ನಿರ್ಧಾರ ಮಾಡಲಾಗಿದೆ. ನಾಳೆಯಿಂದ ಪ್ರತಿ ಲೀಟರ್ನ ಹಾಲಿನ ದರ ಹೆಚ್ಚಳವಾಗಲಿದೆ.ಅದ್ಯಾಗೂ ದೇಶದ ಇತರೆ ಪ್ರಮುಖ ರಾಜ್ಯಗಳಲ್ಲಿನ ಸಹಕಾರಿ ಹಾಗೂ ಇತರೆ ಹಾಲಿನ ಬ್ರ್ಯಾಂಡ್ಗಳ ಮಾರಾಟ ದರಕ್ಕೆ ಹೋಲಿಸಿದಾಗ ನಂದಿನಿ ಟೋನ್ಡ್ ಹಾಲಿನ ಮಾರಾಟ ದರ ಕಡಿಮೆಯಾಗಿದೆ. ಹಾಲು ಬೆಲೆ ಎಷ್ಟು : ಸಮೃದ್ದಿ ಹಾಲು 48 ರಿಂದ 51 ಸ್ಪೆಷಲ್ ಹಾಲು 43 ರಿಂದ 46 ಸಂತೃಪ್ತಿ ಹಾಲು 50 ರಿಂದ 53 ಶುಭಂ ಹಾಲು 43 ರಿಂದ 46 ಟೋನ್ಡ್ ಹಾಲು 37 ರಿಂದ 40 ಡಬಲ್ಟೋನ್ಡ್ ಹಾಲು 36 ರಿಂದ 39 ಹೊಮೋಜಿನೈಸ್ಡ್ 38 ರಿಂದ 41 ಹೊಮೋಜಿನೈಸ್ಡ್ 42 ರಿಂದ 45 ( ಹಸುವಿನ ಹಾಲು)
ಬೆಂಗಳೂರು ;- ನಾನು ರಾಜ್ಯಾಧ್ಯಕ್ಷ ಸ್ಥಾನದ ಆಕಾಂಕ್ಷಿಯಲ್ಲ ಎಂದು ಮಾಜಿ ಶಾಸಕ ಸಿಟಿ ರವಿ ಹೇಳಿದ್ದಾರೆ. ಬಿಜೆಪಿಯ ಮುಂದಿನ ರಾಜ್ಯಾಧ್ಯಕ್ಷರು ಎನ್ನುವ ಸುದ್ದಿ ಹರಿದಾಡುತ್ತಿರುವಾಗಲೇ ಈ ಸ್ಪಷ್ಟನೆ ನೀಡಿರುವ ಅವರು, ಊಹಾತ್ಮಕವಾದ ಪ್ರಶ್ನೆಗಳಿಗೆ ನಾನು ಉತ್ತರಿಸುವುದಿಲ್ಲ. ಸದ್ಯಕ್ಕೆ ನಾನೀಗ ಮಾಜಿ ಪ್ರಧಾನ ಕಾರ್ಯದರ್ಶಿ ಎಂಬುದಷ್ಟೇ ವರ್ತಮಾನ. ಭವಿಷ್ಯದ ಬಗ್ಗೆ ಈಗಲೇ ಏನನ್ನೂ ಹೇಳುವುದಿಲ್ಲ ಎಂದರು. ಭಾನುವಾರ ಬೆಂಗಳೂರಿನಲ್ಲಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಸಾಯುವವರೆಗೆ ಶಾಶ್ವತವಾದ ಜವಾಬ್ದಾರಿಗಳು ಯಾವೂ ಇಲ್ಲ. 1988ರಿಂದ ಪಕ್ಷದಲ್ಲಿದ್ದೇನೆ. ಬೂತ್ ಅಧ್ಯಕ್ಷನಿಂದ ಹಿಡಿದು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿವರೆಗಿನ ಹುದ್ದೆಗಳನ್ನು ಪಕ್ಷ ನೀಡಿದೆ. 2 ವರ್ಷ 10 ತಿಂಗಳು ಈ ಹುದ್ದೆಯಲ್ಲಿ ಕೆಲಸ ಮಾಡಲು ಪಕ್ಷ ಅವಕಾಶ ಕೊಟ್ಟಿತ್ತು. ಪಕ್ಷದ ಯಾವುದೇ ಕೆಲಸವನ್ನು ನಾನು ಕಾರ್ಯಕರ್ತ ಎನ್ನುವ ಮನಸ್ಥಿತಿಯಲ್ಲೇ ಮಾಡುತ್ತೇನೆ. ಅದೊಂದೇ ಶಾಶ್ವತ ಎಂದರು.
ಬೆಂಗಳೂರು;- ನಗರ ಬಂದ್ ಎಚ್ಚರಿಕೆ ಬೆನ್ನಲ್ಲೇ ಸಾರಿಗೆ ಇಲಾಖೆ ಅಲರ್ಟ್ ಆಗಿದ್ದು, ಇಂದು ಸಾರಿಗೆ ಸಚಿವರ ಮಹತ್ವ ಸಭೆ ಜರುಗಲಿದೆ. ಶಕ್ತಿ ಯೋಜನೆಯಿಂದ ಉಂಟಾಗಿರುವ ಆರ್ಥಿಕ ಹೊಡೆತದಿಂದ ಕಂಗೆಟ್ಟಿರುವ ಖಾಸಗಿ ಸಾರಿಗೆ ಸಂಘಟನೆಗಳು ಮುಷ್ಕರ ಎಚ್ಚರಿಕೆ ನೀಡಿದ್ದಾರೆ. ಈ ನಡುವೆಯೇ ಎಚ್ಚೆತ್ತುಕೊಂಡಿರುವ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಇಂದು 2ನೇ ಸುತ್ತಿನ ಸಭೆ ಕರೆದಿದ್ದಾರೆ. ಆಟೋ, ಕ್ಯಾಬ್ ಮತ್ತು ಖಾಸಗಿ ಬಸ್ ಸಂಘಟನೆಗಳ ಮುಖಂಡರೊಂದಿಗೆ ಪ್ರತ್ಯೇಕ ಸಭೆ ನಡೆಸಲಿದ್ದಾರೆ. ಶಾಂತಿನಗರದ ರಾಜ್ಯ ಸಾರಿಗೆ ಇಲಾಖೆಯ ಮುಖ್ಯ ಕಚೇರಿಯಲ್ಲಿ ಸಚಿವ ರಾಮಲಿಂಗಾ ರೆಡ್ಡಿ ಅಧ್ಯಕ್ಷತೆಯಲ್ಲಿ ಇಂದು ಬೆಳಿಗ್ಗೆ 11 ಗಂಟೆಗೆ ಸಭೆ ಆರಂಭವಾಗಲಿದೆ. 11 ರಿಂದ 12 ಗಂಟೆಯವರೆಗೆ ಆಟೋ ಅಸೋಸಿಯೇಷನ್, 12 ರಿಂದ 1 ಗಂಟೆಯವರೆಗೆ ಟ್ಯಾಕ್ಸಿ ಮತ್ತು ಮ್ಯಾಕ್ಸಿ ಕ್ಯಾಬ್ ಅಸೋಸಿಯೇಷನ್ ಹಾಗೂ ಮಧ್ಯಾಹ್ನ 1 ಗಂಟೆಯಿಂದ 2 ಗಂಟೆಯವರೆಗೆ ಖಾಸಗಿ ಬಸ್ ಅಸೋಸಿಯೇಷನ್ ಜೊತೆಗೆ ಸಭೆ ನಡೆಯಲಿದೆ.
ಬೆಂಗಳೂರು ;- ಉದ್ಯಮಿ ಬ್ರಿಜ್ ಸಿಂಗ್ ಎಂಬುವವರು ತನ್ನ ಕಂಪನಿ ನೋಂದಾಯಿಸಲು ಎದುರಿಸುತ್ತಿರುವ ಸಮಸ್ಯೆಯನ್ನು ಟ್ವೀಟ್ ಮುಲಕ ಸಾರ್ವಜನಿಕವಾಗಿ ಹಂಚಿಕೊಂಡಿದ್ದು, ಅಮೆರಿಕಕ್ಕೆ ಹಿಂತಿರುಗಲು ಸಮಯ ಬಂದಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬೆಂಗಳೂರು ಬಂಡವಾಳ ಹೂಡಿಕೆಗೆಳಿಗೆ ಪ್ರಶಸ್ತ ಸ್ಥಳ, ಉದ್ಯಮ ಸ್ನೇಹಿ ವಾತಾವರಣ ರಾಜ್ಯದಲ್ಲಿದೆ. ಹೊಸ ಹೊಸ ಕೈಗಾರಿಕಾ ನೀತಿಗಳನ್ನು ನಾವು ಜಾರಿಗೊಳಿಸುತ್ತಿದ್ದೇವೆ. ದೇಶದಲ್ಲೇ ಅತಿ ಹೆಚ್ಚು ಬಂಡವಾಳ ಹರಿದು ಬರುತ್ತಿದೆ ಎಂದು ಸರ್ಕಾರ ಬೆನ್ನುತಟ್ಟಿಕೊಳ್ಳುತ್ತಿರುವಾಗಲೇ ನೋಂದಣಿ ಸಾಧ್ಯವಾಗದೇ ಉದ್ಯಮಿಯೊಬ್ಬರು ಅಮೆರಿಕಕ್ಕೆ ಮರಳುವ ಮಾತನ್ನಾಡಿರುವುದು ಸರ್ಕಾರಕ್ಕೆ ಮುಜುಗರ ಉಂಟು ಮಾಡಿದೆ. ಎರಡು ತಿಂಗಳು ಕಳೆದರೂ ತನ್ನ ಕಂಪನಿಯನ್ನು ನೋಂದಾಯಿಸಲು ಸಾಧ್ಯವಾಗುತ್ತಿಲ್ಲ. ನಾನು ಅಮೆರಿಕಕ್ಕೆ ಮರಳುವ ಸಮಯ ಬಂದಿದೆ. ಇದನ್ನು ಭಾರವಾದ ಹೃದಯದಿಂದ ಹೇಳುತ್ತಿದ್ದೇನೆ. ಬೆಂಗಳೂರು ಮತ್ತು ಭಾರತದ ಬಗ್ಗೆ ಪ್ರೀತಿಯಿದೆ. ಆದರೆ ಬೆಂಗಳೂರಿನಲ್ಲಿ ಕಂಪನಿಯನ್ನು ನೋಂದಾಯಿಸಲು 2 ತಿಂಗಳುಗಳ ಕಾಲ ಪ್ರಯತ್ನಿಸಿದರೂ ಇನ್ನೂ ಪೂರ್ಣಗೊಂಡಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದ್ದರು. ಈ ಟ್ವೀಟ್ಗೆ ಪ್ರತಿಕ್ರಿಯಿಸಿರುವ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ್, ನಿಮಗೆ ಸಮಸ್ಯೆ ಆಗಿರುವುಕ್ಕೆ ಕ್ಷಮೆ ಇರಲಿ.…
ಕಾಬೂಲ್: ಭಾರತದ ಐಪಿಎಲ್ (IPL) ಬಳಿಕ ವಿಶ್ವದೆಲ್ಲೆಡೆ ಟಿ20 ಕ್ರಿಕೆಟ್ ಟೂರ್ನಿ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿದೆ. ಇಂತಹ ಟಿ20 ಲೀಗ್ಗಳಲ್ಲಿ (T20 Cricket League) ಹಲವು ದಾಖಲೆ ಸಿಡಿಸಿರುವುದನ್ನೂ ನಾವು ನೋಡಿದ್ದೇವೆ. ಅದಕ್ಕೆ ತಾಜಾ ಉದಾಹರಣೆ ಎನ್ನುವಂತೆ ಕಾಬೂಲ್ ಪ್ರೀಮಿಯರ್ ಲೀಗ್ ಟಿ20 ಕ್ರಿಕೆಟ್ನಲ್ಲಿ ಅಫ್ಘಾನಿಸ್ತಾನದ (Afghanistan) ಬ್ಯಾಟರ್ ಒಬ್ಬರು ಒಂದೇ ಓವರ್ನಲ್ಲಿ 7 ಸಿಕ್ಸ್ಗಳೊಂದಿಗೆ 48 ರನ್ ಸಿಡಿಸುವ ಮೂಲಕ ದಾಖಲೆ ಬರೆದಿದ್ದಾರೆ. 48 ರನ್ ಚಚ್ಚಿಸಿಕೊಂಡ ಬೌಲರ್ ಮೈದಾನದಲ್ಲಿ ಕಣ್ಣೀರಿಟ್ಟಿರುವ ಪ್ರಸಂಗ ಗಮನ ಸೆಳೆದಿದೆ. ಕಾಬೂಲ್ ಪ್ರೀಮಿಯರ್ ಲೀಗ್ನಲ್ಲಿ ಶಾಹೀನ್ ಹಂಟರ್ಸ್ ಹಾಗೂ ಅಬಾಸಿನ್ ಡಿಫೆಂಡರ್ಸ್ ನಡುವಿನ ಪಂದ್ಯದಲ್ಲಿ ಎದುರಾಳಿ ತಂಡದ ಅಮೀರ್ ಝಜೈ (Amir Zazai) ಬೌಲಿಂಗ್ಗೆ ಅಫ್ಘಾನಿಸ್ತಾನದ ಸ್ಟಾರ್ ಆಟಗಾರ ಸೆಡಿಕುಲ್ಲಾ ಅಟಲ್ (Sediqullah Atal) ಒಂದೇ ಓವರ್ನಲ್ಲಿ 7 ಸಿಕ್ಸ್ಗಳೊಂದಿಗೆ 48 ರನ್ ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮೊದಲ ಎಸೆತದಲ್ಲಿ ನೋಬಾಲ್ ನೊಂದಿಗೆ ಅಟಲ್ ಸಿಕ್ಸ್ ಬಾರಿಸಿದರು, 2ನೇ ಎಸೆತ ವೈಡ್ನೊಂದಿಗೆ ಫೋರ್ಗೆ ತಲುಪಿತು. ಮುಂದಿನ ಆರು…
ಮುಂದಿನ ವರ್ಷದ ಟಿ20 ವಿಶ್ವಕಪ್ ಜೂನ್ 4ರಿಂದ 30ರ ವರೆಗೂ ನಡೆಯಲಿದೆ ಎಂದು ಪ್ರತಿಷ್ಠಿತ ಕ್ರಿಕೆಟ್ ವೆಬ್ಸೈಟ್ವೊಂದು ವರದಿ ಮಾಡಿದೆ. ವೆಸ್ಟ್ಇಂಡೀಸ್ ಹಾಗೂ ಅಮೆರಿಕ ಜಂಟಿ ಆತಿಥ್ಯ ವಹಿಸಲಿದ್ದು, ಡಲ್ಲಾಸ್, ನ್ಯೂಯಾರ್ಕ್ ಸೇರಿ 10 ನಗರಗಳಲ್ಲಿ ಪಂದ್ಯಗಳು ನಡೆಯಲಿವೆ ಎನ್ನಲಾಗಿದೆ. ಮುಂದಿನ ಆವೃತ್ತಿಯಲ್ಲಿ ಒಟ್ಟು 20 ತಂಡಗಳು ಪಾಲ್ಗೊಳ್ಳಲಿವೆ. ಕಳೆದ ವಾರವಷ್ಟೇ ಐರ್ಲೆಂಡ್, ಸ್ಕಾಟ್ಲೆಂಡ್ ಹಾಗೂ ಪಪುವಾ ನ್ಯೂಗಿನಿ ತಂಡಗಳು ಟಿ20 ವಿಶ್ವಕಪ್ ಟೂರ್ನಿಗೆ ಅರ್ಹತೆಗಿಟ್ಟಿಸಕೊಂಡಿವೆ. ಇನ್ನು ಕಳೆದ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಪಾಲ್ಗೊಂಡ ಎಂಟು ತಂಡಗಳಾದ ಭಾರತ, ಆಸ್ಟ್ರೇಲಿಯಾ, ಇಂಗ್ಲೆಂಡ್, ನೆದರ್ಲೆಂಡ್ಸ್, ನ್ಯೂಜಿಲೆಂಡ್, ಪಾಕಿಸ್ತಾನ, ದಕ್ಷಿಣ ಆಫ್ರಿಕಾ, ಆಫ್ಘಾನಿಸ್ತಾನ, ಬಾಂಗ್ಲಾದೇಶ ಹಾಗೂ ಶ್ರೀಲಂಕಾ ತಂಡಗಳು ನೇರ ಅರ್ಹತೆಯನ್ನು ಪಡೆದುಕೊಂಡಿವೆ. ಈ ಪೈಕಿ ಆಫ್ಘಾನಿಸ್ತಾನ ಹಾಗೂ ಬಾಂಗ್ಲಾದೇಶ ತಂಡಗಳು ಟಿ20 ಶ್ರೇಯಾಂಕದ ಆಧಾರದಲ್ಲಿ ವಿಶ್ವಕಪ್ಗೆ ನೇರ ಪ್ರವೇಶ ಪಡೆದಿವೆ. ಇದರ ಜತೆಗೆ ಟೂರ್ನಿಯ ಆತಿಥ್ಯದ ಹಕ್ಕನ್ನು ಹೊಂದಿರುವ ವೆಸ್ಟ್ ಇಂಡೀಸ್ ಹಾಗೂ ಅಮೆರಿಕ ಕ್ರಿಕೆಟ್ ತಂಡಗಳು ಈಗಾಗಲೇ ನೇರ ಅರ್ಹತೆಗಿಟ್ಟಿಸಿಕೊಂಡಿವೆ. ಟೂರ್ನಿಯ ಮಾದರಿ ಹೇಗೆ?: …
ಕಳೆದ ವರ್ಷ ಸ್ಯಾಂಡಲ್ವುಡ್ನ ‘ಕಾಂತಾರ’ ಸೇರಿದಂತೆ ಹಲವು ಸಿನಿಮಾಗಳು ಸೂಪರ್ಹಿಟ್ ಆಗಿ, ಇಡೀ ಭಾರತೀಯ ಚಿತ್ರರಂಗ ಕನ್ನಡದತ್ತ ಬೆರಗುಗಣ್ಣಿನಿಂದ ನೋಡಲು ಆರಂಭಿಸಿತು. ಆದರೆ ಇದೇ ಹುಮ್ಮಸ್ಸಿನಲ್ಲಿ 2023ನೇ ವರ್ಷ ಆರಂಭಿಸಿದ ಸಿನಿಮಾ ಮಂದಿಗೆ ಇಲ್ಲಿಯವರೆಗೂ ಯಶಸ್ಸು ಸಿಗಲಿಲ್ಲ. ಈ ವರ್ಷದ ಆರಂಭದಿಂದ ಯಾವ ಸಿನಿಮಾವೂ ಚಿತ್ರಮಂದಿರದಲ್ಲಿ ಸದ್ದು ಮಾಡಲಿಲ್ಲ. ಆದರೆ ಕಳೆದ ಎರಡು ವಾರಗಳಲ್ಲಿ ಈ ಚಿತ್ರಣ ಬದಲಾಗಿದೆ. ಕನ್ನಡ ಸಿನಿಮಾಗೆ ಮತ್ತೆ ಜನರು ಬರಲಾರಂಭಿಸಿದ್ದಾರೆ. ವಿಜಯಲಕ್ಷ್ಮಿ ಸ್ಯಾಂಡಲ್ವುಡ್ನ ಬಾಕ್ಸ್ಆಫೀಸ್ಗೆ ನಿಧಾನವಾಗಿ ಹೆಜ್ಜೆ ಹಾಕುತ್ತಿದ್ದಾಳೆ. ಕಳೆದ ವಾರ ಬಿಡುಗಡೆಯಾದ ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಸಿನಿಮಾ ಆರು ತಿಂಗಳಿನಿಂದ ಬರ ಹಿಡಿದಿದ್ದ ಸ್ಯಾಂಡಲ್ವುಡ್ನ ಬಾಕ್ಸ್ ಆಫೀಸ್ಗೆ ಜೀವ ನೀಡಿತು. ಯಾವುದೇ ಸ್ಟಾರ್ ಇಲ್ಲದೆ, ಅನುಭವಿ ನಿರ್ದೇಶಕರೂ ಇಲ್ಲದೆ ಈ ಸಿನಿಮಾ ಸೂಪರ್ಹಿಟ್ ಆಯಿತು. ಇದಕ್ಕೆ ಕಾರಣ ಅವರು ಆರಂಭದಿಂದಲೂ ಮಾಡಿದ ವಿಭಿನ್ನ ರೀತಿಯ ಪ್ರಚಾರ ಒಂದು ಕಡೆಯಾದರೆ, ಚಿತ್ರದಲ್ಲಿದ್ದ ಕಂಟೆಂಟ್ ಮತ್ತೊಂದು ಕಾರಣ. ಸಿನಿಮಾದ ಮೊದಲ ದೃಶ್ಯದಿಂದ ಕೊನೆಯ ದೃಶ್ಯದವರೆಗೂ ಜನರನ್ನು ನಗಿಸುವ…
ಬೆಂಗಳೂರು: ನಟ, ನಿರ್ಮಾಪಕ ಜೈ ಜಗದೀಶ್ ಹಾಗೂ ನಟಿ, ನಿರ್ದೇಶಕಿ ವಿಜಯಲಕ್ಷ್ಮೀ ಸಿಂಗ್ ದಂಪತಿಯ ಹಿರಿಯ ಪುತ್ರಿ ವೈಭವಿ. ಕನ್ನಡ ಚಿತ್ರರಂಗದಲ್ಲಿ ಬಾಲನಟಿಯಾಗಿ, ನಟಿಯಾಗಿ ಗುರುತಿಸಿಕೊಂಡಿರುವ ವೈಭವಿ ಜಗದೀಶ್ ಈಗ ಜನ್ಮದಿನದ ಸಂಭ್ರಮದಲ್ಲಿದ್ದಾರೆ. ಹುಟ್ಟುಹಬ್ಬದ ಆಚರಣೆಗಾಗಿ ವೈಭವಿ ಜಗದೀಶ್ ದುಬೈಗೆ ಹಾರಿದ್ದರು. ದುಬೈನ ಬುರ್ಜ್ ಖಲೀಫಾದಲ್ಲಿ ವೈಭವಿ ಜಗದೀಶ್ ತಮ್ಮ ಬರ್ತ್ಡೇ ಸೆಲೆಬ್ರೇಟ್ ಮಾಡಿಕೊಂಡಿದ್ದಾರೆ. ತಾಯಿ ವಿಜಯಲಕ್ಷ್ಮೀ ಸಿಂಗ್, ಸಹೋದರಿ ವೈಸಿರಿ ಜಗದೀಶ್ ಜೊತೆಗೆ ಕೇಕ್ ಕಟ್ ಮಾಡಿ ಸಂಭ್ರಮಪಟ್ಟಿದ್ದಾರೆ..
ಬೆಂಗಳೂರು: ನಿರೂಪಕಿ, ಬಿಗ್ ಬಾಸ್ ಕನ್ನಡ 7 ಕಾರ್ಯಕ್ರಮದ ಸ್ಪರ್ಧಿ ಚೈತ್ರಾ ವಾಸುದೇವನ್. ಇತ್ತೀಚೆಗಷ್ಟೇ ಚೈತ್ರಾ ವಾಸುದೇವನ್ ತಮ್ಮ ಜೀವನದ ಮಹತ್ವದ ನಿರ್ಧಾರವೊಂದನ್ನ ಬಹಿರಂಗ ಪಡಿಸಿದ್ದರು. ತಮ್ಮ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಿರುವುದಾಗಿ ಚೈತ್ರಾ ವಾಸುದೇವನ್ ತಿಳಿಸಿದ್ದರು. ಇದೇ ವಿಚಾರವಾಗಿ ಖಾಸಗಿ ಮಾಧ್ಯಮದಲ್ಲಿ ಮಾತನಾಡುವಾಗ ಿದರ ಬಗ್ಗೆ ಸ್ಪಷ್ಟ ಮಾಹಿತಿಯನ್ನು ಹೊರಹಾಕಿದರು. ಏನಾಪ್ಪಾ ಅಂದರೆ ’ಹೆಚ್ಚಿನ ಜನರು ಯೋಚಿಸುವಂತೆ ನಾನು ಮತ್ತು ನನ್ನ ಪತಿ ಅಹಂಕಾರದ ಸಮಸ್ಯೆಗಳಿಂದ ಬೇರೆಯಾಗಲಿಲ್ಲ. ಸತ್ಯ ಮತ್ತು ನಾನು 2017ರಲ್ಲಿ ವಿವಾಹವಾದೆವು. ಅನ್ಯೋನ್ಯವಾಗಿ ಬಾಳಲು ಸುಮಾರು 5 ವರ್ಷಗಳ ಕಾಲ ತುಂಬಾ ಪ್ರಯತ್ನಪಟ್ವಿ. ಆದರೆ ಅದು ಸಾಧ್ಯವಾಗಲಿಲ್ಲ. ಹೀಗಾಗಿ ನಾವು ಬೇರೆ ಬೇರೆಯಾಗಲು ನಿರ್ಧಾರ ಮಾಡಿದ್ವಿ. ಕೆಲವು ತಿಂಗಳ ಹಿಂದೆ ನಾವು ವಿಚ್ಛೇದನ ಪಡೆದ್ವಿ’’ ಎಂದು ಚೈತ್ರಾ ವಾಸುದೇವನ್ ಹೇಳಿದ್ದಾರೆ. 2017ರಲ್ಲಿ ಸತ್ಯ ನಾಯ್ಡು ಎಂಬುವರನ್ನ ಚೈತ್ರಾ ವಾಸುದೇವನ್ ಮದುವೆಯಾಗಿದ್ದರು. ಈಗ ಪತಿಯಿಂದ ದೂರಾಗಿರುವುದಾಗಿ, ವಿಚ್ಛೇದನ ಪಡೆದಿರುವುದಾಗಿ ಚೈತ್ರಾ ವಾಸುದೇವನ್ ತಿಳಿಸಿದ್ದಾರೆ.