29ರ ಹರೆಯದ ವಿರಾಟ್ ಕೊಹ್ಲಿ ಕೇವಲ ಕ್ರಿಕೆಟ್ ಹುಚ್ಚು ಭಾರತದ ದೊಡ್ಡ ಹೆಸರಲ್ಲ, ಆದರೆ ವಿಶ್ವದ ಅತ್ಯಂತ ಜನಪ್ರಿಯ ಕ್ರೀಡಾಪಟುಗಳಲ್ಲಿ ಒಬ್ಬರಾಗಿದ್ದಾರೆ, “ಮೂವರು ಸಕ್ರಿಯ ಕ್ರೀಡಾ ತಾರೆಯರಿಗಿಂತ ಹೆಚ್ಚು ಟ್ವಿಟರ್ ಅನುಯಾಯಿಗಳನ್ನು (25 ಮಿಲಿಯನ್-ಪ್ಲಸ್) ಹೊಂದಿದ್ದಾರೆ. ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ವಿಶ್ವದ ಅತಿ ಹೆಚ್ಚು ಸಂಭಾವನೆ ಪಡೆಯುವ ಅಥ್ಲೀಟ್ಗಳ ಪಟ್ಟಿಯಲ್ಲಿದ್ದಾರೆ ಎಂದು ಫೋರ್ಬ್ಸ್ ಸಂಕಲನದಲ್ಲಿ ಅಮೆರಿಕದ ಬಾಕ್ಸಿಂಗ್ ಚಾಂಪಿಯನ್ ಫ್ಲಾಯ್ಡ್ ಮೇವೆದರ್ ಅಗ್ರಸ್ಥಾನದಲ್ಲಿದ್ದಾರೆ. ಪಟ್ಟಿಯಲ್ಲಿ ಕಾಣಿಸಿಕೊಂಡಿರುವ ಭಾರತದ ಏಕೈಕ ಕ್ರೀಡಾಪಟು ಕೊಹ್ಲಿ, USD 24 ಮಿಲಿಯನ್ ಗಳಿಕೆಯೊಂದಿಗೆ 83 ನೇ ಸ್ಥಾನದಲ್ಲಿದ್ದಾರೆ. ಸುಮಾರು 1,000 ಕೋಟಿಗೂ ಹೆಚ್ಚು ನಿವ್ವಳ ಮೌಲ್ಯವನ್ನು ಹೊಂದಿರುವ ಕೊಹ್ಲಿ, 2022 ರಲ್ಲಿ ಸ್ಪೋರ್ಟಿಕೊದ ಟಾಪ್ 100 ರಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಕ್ರೀಡಾಪಟುಗಳ ಪಟ್ಟಿಯಲ್ಲಿ 61 ನೇ ಸ್ಥಾನದಲ್ಲಿದ್ದಾರೆ. ಐಪಿಎಲ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡುವ ಕೊಹ್ಲಿ ಭಾರತೀಯ ರಾಷ್ಟ್ರೀಯ ತಂಡದಲ್ಲಿ ಆಡಿದ ಆಟ ಹೊರತುಪಡಿಸಿ, ಉಳಿದ ಕಡೆಗಳಿಂದ 2.9 ಮಿಲಿಯನ್…
Author: Prajatv Kannada
ಲಂಡನ್: ಅತ್ಯಂತ ರೋಚಕವಾಗಿ ಮೂಡಿಬಂದ 2023ರ ಸಾಲಿನ ಪ್ರತಿಷ್ಠಿತ ದಿ ಆಷಸ್ ಟೆಸ್ಟ್ ಕ್ರಿಕೆಟ್ ಸರಣಿಯು ಇದೀಗ ಕ್ಲೈ-ಮ್ಯಾಕ್ಸ್ ತಲುಪಿದೆ. ಸರಣಿಯ ಮೊದಲ ಎರಡು ಪಂದ್ಯಗಳಲ್ಲಿ ಸೋತು ಸೊರಗಿದ್ದ ಆತಿಥೇಯ ಇಂಗ್ಲೆಂಡ್ ಬಳಿಕ ಅದ್ಭುತವಾಗಿ ಕಮ್ಬ್ಯಾಕ್ ಮಾಡಿತು. ಮೂರನೇ ಟೆಸ್ಟ್ನಲ್ಲಿ ಸಿಕ್ಕ ರೋಚಕ ಜಯದ ಬಳಿಕ ನಾಲ್ಕನೇ ಟೆಸ್ಟ್ನಲ್ಲೂ ಗೆಲುವಿನತ್ತ ದಾಪುಗಾಲಿಟ್ಟಿತ್ತು. ಆದರೆ, ಬಿಡದೇ ಸುರಿದ ಮಳೆ ಕಾರಣ ಅಂತಿಮ ದಿನದಾಟ ರದ್ದಾದ್ದಿಂದ ಇಂಗ್ಲೆಂಡ್ ಡ್ರಾ ಫಲಿತಾಂಶದ ನಿರಾಶೆಗೊಳಗಾಯಿತು. ಹೀಗಾಗಿ ಸರಣಿ ಸೋಲಿನ ಆಘಾತ ತಪ್ಪಿಸಿಕೊಳ್ಳಲು ಕೆನಿಂಗ್ಟನ್ ಓವಲ್ನಲ್ಲಿ ಜುಲೈ 27ರಿಂದ 31ರವರೆಗೆ ನಡೆಯಲಿರುವ 5ನೇ ಹಾಗೂ ಅಂತಿಮ ಟೆಸ್ಟ್ ಗೆಲ್ಲಲೇ ಬೇಕಾದ ಒತ್ತಡಕ್ಕೆ ಸಿಲುಕಿದೆ. 2002ರ ಬಳಿಕ ತಾಯ್ನಾಡಿನಲ್ಲಿ ಆಸೀಸ್ ಎದುರು ಇಂಗ್ಲೆಂಡ್ ತಂಡ ಆಷಸ್ ಸರಣಿ ಸೋತಿಲ್ಲ. ಈ ಬಾರಿ ಸೋಲಿನ ದವಡೆಗೆ ಸಿಲುಕಿದೆಯಾದರೂ, ಅಂತಿಮ ಟೆಸ್ಟ್ ಗೆದ್ದು ಮರ್ಮಾಘಾತ ತಪ್ಪಿಸಿಕೊಳ್ಳುವ ಲೆಕ್ಕಾಚಾರ ಹೊಂದಿದೆ. ಈ ಸಲುವಾಗಿ 15 ಆಟಗಾರರ ತಂಡವನ್ನು ಮಂಗಳವಾರ ಪ್ರಕಟ ಮಾಡಿದೆ. ಮ್ಯಾಂಚೆಸ್ಟರ್ ಟೆಸ್ಟ್ಗೆ…
ಲೋಕಸಭೆ ಚುನಾವಣೆಗೆ ಇನ್ನೂ ಒಂದು ವರ್ಷ ಬಾಕಿ ಇದೆ. ಆದರೂ ತಮಿಳು ನಾಡಿನ ನಾನಾ ಪಕ್ಷಗಳು ಈಗಿನಿಂದಲೇ ಭರ್ಜರಿ ತಯಾರಿ ಮಾಡಿಕೊಳ್ಳುತ್ತಿವೆ. ಈಗಾಗಲೇ ಸಾಕಷ್ಟು ನಟರು ರಾಜಕೀಯ ಎಂಟ್ರಿಗೆ ಭರ್ಜರಿ ತಯಾರಿ ಮಾಡಿಕೊಂಡಿದ್ದು ಪ್ರಚಾರಕ್ಕೆ ನಾನಾ ರೀತಿಯ ಕಸರತ್ತುಗಳನ್ನು ಮಾಡುತ್ತಿದ್ದಾರೆ. ಅಂತೆಯೇ ಈ ಬಾರಿ ಖ್ಯಾತ ನಟ ಕಮಲ್ ಹಾಸನ್ ಕೂಡ ಚುನಾವಣೆ ಕಣದಲ್ಲಿ ಇರಲಿದ್ದಾರೆ ಎಂಬ ಸುದ್ದಿ ಕೇಳಿ ಬಂದಿದೆ. ಕಮಲ್ ಹಾಸನ್ ಗೆ ಚುನಾವಣೆ ಹೊಸದಲ್ಲ. ಈ ಹಿಂದೆ ಚುನಾವಣೆ ಎದುರಿಸಿ ಸೋತಿದ್ದು, ಈ ಬಾರಿ ಗೆದ್ದೇ ಗೆಲ್ಲುವ ವಿಶ್ವಾಸದಿಂದ ಕೊಯಮತ್ತೂರು ಕ್ಷೇತ್ರವನ್ನು ಆರಿಸಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಹಾಗಾಗಿಯೇ ಆ ಕ್ಷೇತ್ರದಲ್ಲಿ ಒಂದಷ್ಟು ಕೆಲಸವನ್ನೂ ನಟ ಮಾಡುತ್ತಿದ್ದಾರಂತೆ. ಕಮಲ್ ಹಾಸನ್ ತಮ್ಮದೇ ಎಂ.ಎನ್.ಎಂ ಪಕ್ಷವನ್ನು ಸ್ಥಾಪಿಸಿದ್ದು, ಆ ಪಕ್ಷದ ರಾಜ್ಯಮಟ್ಟದ ಪ್ರಚಾರದ ಅಭಿಯಾನವನ್ನು ಈಗಾಗಲೇ ಕೊಯಮತ್ತೂರು ದಕ್ಷಿಣ ಕ್ಷೇತ್ರದಿಂದ ಆರಂಭಿಸಿದ್ದಾರೆ. ವಿಧಾನಸಭೆಯ ಒಟ್ಟು 234 ಕ್ಷೇತ್ರಗಳಲ್ಲೂ ಪ್ರಚಾರ ಮತ್ತು ಕಾರ್ಯಕರ್ತರ ಕುಂದುಕೊರತೆಗಳನ್ನು ಈ ಅಭಿಯಾನ ಪಟ್ಟಿ ಮಾಡಲಿದೆ. ಇದನ್ನೂ…
ಸ್ಟಾರ್ ನಟ, ನಟಿಯರು ಕೆಲವೇ ಕೆಲವು ದೃಶ್ಯಗಳಲ್ಲಿ ನಟಿಸಲು ಕೋಟಿ ಕೋಟಿ ಸಂಭಾವನೆ ಪಡೆದುಕೊಳ್ಳುವುದು ಹೊಸದೇನು ಅಲ್ಲ. ಕಳೆದ ನಾಲ್ಕೈದು ದಿನಗಳ ಹಿಂದಷ್ಟೇ ನಟಿ ಊರ್ವಶಿ ರೌಟೇಲಾ ಕೇವಲ ಮೂರು ನಿಮಿಷ ನಟಿಸಲು 3 ಕೋಟಿ ರೂ. ಸಂಭಾವನೆ ಪಡೆದುಕೊಂಡಿದ್ದರು ಎಂದು ಸುದ್ದಿಯಾಗಿತ್ತು. ಇದೀಗ ಮಾಲಿವುಡ್ನ ಎವರ್ಗ್ರೀನ್ ಹೀರೋ ಮಮ್ಮುಟ್ಟಿ ಕೇವಲ ಎರಡೇ 2 ದೃಶ್ಯದಲ್ಲಿ ನಟಿಸಲು ದುಬಾರಿ ಸಂಭಾವನೆಯನ್ನು ಡಿಮ್ಯಾಂಡ್ ಮಾಡಿದ್ದಾರೆ ಎನ್ನಲಾಗುತ್ತಿದೆ. ಮಲಯಾಳಂ ಸೂಪರ್ ಸ್ಟಾರ್ ಮಮ್ಮುಟ್ಟಿಗೆ 71 ವರ್ಷವಾಗಿದ್ರು ಇಂದಿಗೂ ಅದೆ ಎಜರ್ನಿ ಉಳಿಸಿಕೊಂಡಿದ್ದಾರೆ. ಚಿರ ಯುವಕರನ್ನು ನಾಚಿಸುವಂತೆ ಸ್ಟಂಟ್ ಮಾಡಿ ಮಲಯಾಳಂ ಚಿತ್ರರಂಗದ ಸೂಪರ್ ಡ್ಯೂಪರ್ ಸ್ಟಾರ್ ಎನಿಸಿಕೊಂಡಿದ್ದಾರೆ. ಇಂದಿಗೂ ಸಾಲು ಸಾಲು ಸಿನಿಮಾಗಳಲ್ಲಿ ಮಮ್ಮುಟ್ಟಿ ಬ್ಯುಸಿಯಾಗಿದ್ದು, ಇದೀಗ ಹೊಸ ಸಿನಿಮಾವೊಂದಕ್ಕೆ ನಟಿಸಲು ನಟನ ಸಂಭಾವನೆ ವಿಚಾರವೊಂದು ಮಾಲಿವುಡ್ನಲ್ಲಿ ಸದ್ದು ಮಾಡುತ್ತಿದೆ. ಇದೀಗ ಮತ್ತೆ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದು, ಆ ಹಿನ್ನೆಲೆಯಲ್ಲಿ ನಿರ್ದೇಶಕ ಮಹಿ ವಿ ರಾಘವ್ ಯಾತ್ರಾ 2 ಸಿನಿಮಾ ಶುರು ಮಾಡಿದ್ದಾರೆ. ವೈಎಸ್ಆರ್…
ಹಾಲಿವುಡ್ ನ ಆಪನ್ ಹೈಮರ್ ಚಿತ್ರಕ್ಕೆ ಸಾಕಷ್ಟು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದರು ಚಿತ್ರದಲ್ಲಿನ ದೃಶ್ಯವೊಂದಕ್ಕೆ ಭಾರಿ ವಿವಾದ ಹುಟ್ಟಿಕೊಂಡಿದೆ. ಚಿತ್ರದಲ್ಲಿ ಸೆಕ್ಸ್ ಮಾಡುವ ವೇಳೆ ಕಥಾನಾಯಕ ಭಗವದ್ಗೀತೆಯ ಸಾಲುಗಳನ್ನು ಓದುವ ದೃಶ್ಯವಿದ್ದು, ಈ ದೃಶ್ಯವು ಭಾರತೀಯರ ಕೆಂಗಣ್ಣಿಗೆ ಗುರಿಯಾಗಿದೆ. ಚಿತ್ರದಲ್ಲಿ ಸೆಕ್ಸ್ ಇರುವ ದೃಶ್ಯದ ಕುರಿತು ಕೇಂದ್ರ ಸಚಿವ ಅನುರಾಗ್ ಠಾಕೂರ್ ಪ್ರತಿಕ್ರಿಯೆ ನೀಡಿದ್ದು, ‘ಈ ದೃಶ್ಯವನ್ನು ಸಿನಿಮಾದಲ್ಲಿ ಹೇಗೆ ಬಿಡಲಾಯಿತು ಎಂದು ಸೆನ್ಸಾರ್ ಮಂಡಳಿಯ ಅಧಿಕಾರಿಯನ್ನು ಕೇಳಲಾಗುವುದು. ತಪ್ಪಿತಸ್ಥ ಅಧಿಕಾರಿಯ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು ಎಂದಿದ್ದಾರೆ. ‘ಆಪನ್ಹೈಮರ್’ ಸಿನಿಮಾದ ರಿಲೀಸ್ಗೂ ಮುನ್ನವೇ ಭರ್ಜರಿ ಡಿಮ್ಯಾಂಡ್ ಕ್ರಿಯೇಟ್ ಆಗಿದ್ದು, ಜುಲೈ 21ರಂದು ರಿಲೀಸ್ ಆಗಿರೋ ಚಿತ್ರಕ್ಕೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಎಲ್ಲೆಡೆ ಹೌಸ್ಫುಲ್ ಪ್ರದರ್ಶನ ಕಾಣುತ್ತಿರುವ ಸಿನಿಮಾದಲ್ಲಿನ ಸೆಕ್ಸ್ ದೃಶ್ಯವೊಂದಕ್ಕೆ ಭಾರೀ ವಿರೋಧ ವ್ಯಕ್ತವಾಗಿದೆ. ರಿಲೀಸ್ ಆಗುವ ಮುನ್ನವೇ ಕ್ರಿಸ್ಟೋಫರ್ ನೋಲನ್ ನಿರ್ದೇಶನದ ‘ಆಪನ್ಹೈಮರ್’ ಸಿನಿಮಾ, 2 ಸಾವಿರ ರೂಪಾಯಿಗೆ ಟಿಕೆಟ್ ಸೇಲ್ ಆಗಿತ್ತು. ರಿಲೀಸ್ ಬಳಿಕ ಈ ಚಿತ್ರಕ್ಕೆ ಭರ್ಜರಿ…
ತೆರೆ ಮೇಲೆ ಬೆಸ್ಟ್ ಜೋಡಿಯಾಗಿ ಮಿಂಚಿರೋ ಸ್ಯಾಂಡಲ್ ವುಡ್ ನ ನಟ ಡಾಲಿ ಧನಂಜಯ್ ಹಾಗೂ ನಟಿ ಅಮೃತಾ ಅಯ್ಯಂಗರ್ ಗೆ ಸಾಕಷ್ಟು ಅಭಿಮಾನಿಗಳ ಬಳಗವಿದೆ. ಸಿನಿಮಾದಲ್ಲಿ ಮಾತ್ರವಲ್ಲ, ನಿಜ ಜೀವನದಲ್ಲೂ ಈ ಜೋಡಿ ಒಂದಾದರೆ ಚೆನ್ನಾಗಿರುತ್ತೆ ಎಂದು ಅಭಿಮಾನಿಗಳ ಆಸೆಯಾಗಿದೆ. ಅಲ್ಲದೆ ಇಬ್ಬರ ನಡುವೆ ಸಮ್ ಥಿಂಗ್ ಸಮ್ ಥಿಂಗ್ ಇದೆ ಎಂದು ಹೇಳಲಾಗುತ್ತಿದೆ. ಇದೀಗ ತಮ್ಮಿಬ್ಬರ ಸ್ನೇಹದ ಕುರಿತು ನಟಿ ಅಮೃತಾ ಸ್ಪಷ್ಟನೆ ನೀಡಿದ್ದಾರೆ. ‘ಪಾಪ್ ಕಾರ್ನ್ ಮಂಕಿ ಟೈಗರ್’, ಬಡವ ರಾಸ್ಕಲ್, ಹೊಯ್ಸಳ ಸಿನಿಮಾದಲ್ಲಿ ಡಾಲಿ ಹಾಗೂ ಅಮೃತಾ ಒಟ್ಟಿಗೆ ನಟಿಸಿದ್ದಾರೆ. ಸಿನಿಮಾದಲ್ಲಿ ಇಬ್ಬರ ಕೆಮಿಸ್ಟ್ರಿ ಜನರಿಗೆ ಇಷ್ಟವಾಗಿದ್ದು, ಬಳಿಕ ಇಬ್ಬರ ಕುರಿತು ಗಾಸಿಪ್ ಕೂಡ ಹರಡಿತ್ತು. ಇಬ್ಬರು ಡೇಟ್ ಮಾಡ್ತಿದ್ದಾರೆ ಎನ್ನಲಾಗಿತ್ತು. ಡಾಲಿ- ಅಮೃತಾ ಡೇಟಿಂಗ್ ಮಾಡ್ತಿದ್ದಾರಾ ಎಂಬ ಪ್ರಶ್ನೆಗೆ ಅಮೃತಾ ಸಂದರ್ಶನವೊಂದರಲ್ಲಿ ಸ್ಪಷ್ಟನೆ ನೀಡಿದ್ದಾರೆ. ನನಗೆ ಗೊತ್ತು ಅಭಿಮಾನಿಗಳು ನನ್ನ ಮತ್ತು ಡಾಲಿ ಜೋಡಿಯನ್ನ ತೆರೆಯ ಮೇಲೆ ನೋಡೋದಕ್ಕೆ ಇಷ್ಟಪಡ್ತಾರೆ ಅಂತಾ. ನಾವು ಮೂರು…
ಪ್ಲಾಸ್ಟಿಕ್ ಅನ್ನು ಗಟ್ಟಿಯಾಗಿಸಲು ಬಳಸುವ ರಾಸಾಯನಿಕ ಬಿಪಿಎ (ಬಿಸ್ಟೆನಾಲ್ ಎ) ಯನ್ನು ಆಹಾರದ ಪಾತ್ರೆಗಳು, ಬಾಟಲಿಗಳು, ಫಲಕಗಳು ಮತ್ತು ಮಗ್ ಗಳ ತಯಾರಿಯಲ್ಲಿ ಬಳಸಲಾಗುತ್ತದೆ. ಕ್ಯಾನ್ ಮತ್ತು ಬಾಟಲಿಗಳಿಗೆ ಲೈನಿಂಗ್ ತಯಾರಿಸಲೂ ಇದನ್ನು ಉಪಯೋಗಿಸುತ್ತಾರೆ. ಬಿಪಿಎ ಅವಲಂಬನೆಯಿಂದ ಆರೋಗ್ಯಕ್ಕೆ ಅಪಾಯವಿದೆ. ಬಿಪಿಎ ಬಳಕೆ ಹೆಚ್ಚಿದಂತೆ ಸ್ತನ ಕ್ಯಾನ್ಸರ್ ಕಾಡುತ್ತದೆ ಎಂಬ ಅಪಾಯಕಾರಿ ಅಂಶವನ್ನು ಅಮೆರಿಕಾ ಅಧ್ಯಯನದಿಂದ ಹೊರಗೆಡವಿದೆ. ಭಾರತದಲ್ಲಿ ಶಿಶುಗಳಿಗೆ ಬಳಸುವ ಬಾಟಲಿಗಳಲ್ಲಿ ಬಿಪಿಎ ಬಳಕೆಯನ್ನು ಬಿಐಎಸ್ 2015ರಲ್ಲೇ ನಿಷೇಧಿಸಿದೆ. ಇದರಲ್ಲಿ ಮಕ್ಕಳ ಅನಾರೋಗ್ಯಕ್ಕೆ ಕಾರಣವಾಗುವ ಅಂಶಗಳಿದ್ದವು. ನೀರನ್ನು ಸಂಗ್ರಹಿಸಲು ಪ್ಲಾಸ್ಟಿಕ್ ಬಾಟಲಿಗಳ ಬದಲು ಸ್ಟೀಲ್ ಅಥವಾ ಗಾಜಿನ ಪಾತ್ರೆ ಬಳಸಿ. ಬಿಸಿ ನೀರನ್ನು ಪಾಲಿ ಕಾರ್ಬೊರೇಟ್ ಪ್ಲಾಸ್ಟಿಕ್ ಪಾತ್ರೆಗಳಲ್ಲಿ ಸಂಗ್ರಹಿಸಿಡದಿರಿ. ಗಾಜು ಅಥವಾ ಸ್ಟೀಲ್ ಪಾತ್ರೆಗಳನ್ನೇ ಬಳಸಿ. ಪೂರ್ವ ಸಿದ್ಧ ಆಹಾರಗಳ ಸೇವನೆಯನ್ನೂ ಕಡಿಮೆ ಮಾಡಿ. ಆಹಾರವನ್ನು ಪ್ಲಾಸ್ಟಿಕ್ ನಲ್ಲಿ ಕವರ್ ಮಾಡುವ ಬದಲು ಕ್ಯಾಂಡಲ್ ಪೇಪರ್ ಬಳಸಿ. ಪ್ಲಾಸ್ಟಿಕ್ ಬಾಟಲ್ ಗಳಲ್ಲಿ ನೀರು ಕುಡಿಯುವುದು ಇಂದಿನ ಫ್ಯಾಶನ್ ಗಳಲ್ಲಿ…
ಬಿರುಕು ಬಿಟ್ಟ ತುಟಿಗಳು ನಿಮ್ಮ ಮುಖದ ಅಂದವನ್ನ ಕೆಡಿಸಿಬಿಡುತ್ತವೆ. ನಯವಾದ ತುಟಿಗಳನ್ನ ಹೊಂದಬೇಕು ಅಂದರೆ ತುಟಿಗಳ ಆರೈಕೆ ಮಾಡೋದೂ ಕೂಡ ಅಷ್ಟೇ ಅವಶ್ಯಕ. ಇದಕ್ಕೆ ಜಾಸ್ತಿ ಕಷ್ಟ ಪಡಬೇಕಾದದ್ದು ಏನೂ ಇಲ್ಲ. ಸ್ವಲ್ಪೇ ಸ್ವಲ್ಪ ಎಫರ್ಟ್ ಹಾಕಿದ್ರೆ ತೊಂಡೆ ಹಣ್ಣಿನಂತ ತುಟಿ ನಿಮ್ಮದಾಗಲಿದೆ. ತುಟಿ ಒಣಗಿದ ಹಾಗೆ ಎನಿಸ್ತಾ ಇದ್ದಂತೆಯೇ ನಾವು ನಾಲಗೆಯಿಂದ ನೆಕ್ಕಿಕೊಳ್ತೇವೆ. ಇದು ಆ ಕ್ಷಣಕ್ಕೆ ನಿಮ್ಮ ತುಟಿ ಸರಿಯಾಯ್ತು ಅಂತಾ ಅನಿಸುತ್ತೆ. ಆದರೆ ನಿಮ್ಮ ಈ ಅಭ್ಯಾಸ ತುಟಿ ಆರೋಗ್ಯಕ್ಕೆ ಹಾನಿಕಾರಕ. ಎಂಜಲಿನಲ್ಲಿರುವ ಎಂಜೈಮ್ಗಳು ನಿಮ್ಮ ತುಟಿಯನ್ನ ಮೇಲಿರುವ ರಕ್ಷಣಾ ಕವಚಕ್ಕೆ ಹಾನಿ ಮಾಡುವ ಸಾಧ್ಯತೆ ಇದೆ. ನಿಮ್ಮ ಆಹಾರ ಕ್ರಮ ಕೂಡ ನಿಮ್ಮ ತುಟಿಯ ಆರೋಗ್ಯವನ್ನ ಕಾಪಾಡಬಲ್ಲುದು. ವಿಟಮಿನ್ ಇ ಅಂಶ ಹೇರಳವಾಗಿರುವ ಪದಾರ್ಥಗಳು ತುಟಿಯ ಕಾಂತಿಯನ್ನ ಹೆಚ್ಚಿಸೋಕೆ ಕಾರಣವಾಗುತ್ತೆ. ಅತೀ ಉಪ್ಪು ಹಾಗೂ ಖಾರದ ಪದಾರ್ಥಗಳು ತುಟಿಯನ್ನ ಒಣಗಿಸಿ ಬಿಡುತ್ತೆ. ಅತಿಯಾಗಿ ನೀರು ಕುಡಿಯೋದ್ರಿಂದ ತುಟಿಯ ಸೌಂದರ್ಯ ಇಮ್ಮಡಿಯಾಗಲಿದೆ. ಮಲಗುವ ಮುನ್ನ ತುಟಿಗೆ ಲಿಪ್ಬಾಮ್…
ಆಹಾರ ಪದ್ಧತಿ, ಕೆಲಸದ ಒತ್ತಡ, ಆಧುನಿಕ ಶೈಲಿ, ಆರೋಗ್ಯ ಸಮಸ್ಯೆ.. ಇವು ಇತ್ತೀಚೆಗೆ ಎಲ್ಲರ ಜೀವನದಲ್ಲಿ ಅತೀ ಹೆಚ್ಚು ಕಾಡುತ್ತಿರುವ ಸರ್ವೇ ಸಾಮಾನ್ಯ ಪ್ರಾಬ್ಲಂಗಳು. ಅದರಲ್ಲೂ ಬೆಂಗಳೂರಿನಂತಹ ಮಹಾನಗರದಲ್ಲಿ ಜೀವನ ನಡೆಸಬೇಕಾದರೆ ಮನೆಯಲ್ಲಿ ಎಲ್ಲರೂ ದುಡಿಯಲೇಬೇಕು ಎನ್ನುವ ಸ್ಥಿತಿಯಿದೆ. ನಮ್ಮ ಇಚ್ಛೆಗನುಸಾರವಾಗಿ ನಮ್ಮ ಜೀವನವನ್ನು ಸುಂದರವಾಗಿ ನಡೆಸಲೇಬೇಕು ಎಂದರೆ ದುಡಿಯುವುದು ಅನಿವಾರ್ಯ. ಈ ಬ್ಯೂಸಿ ಶೆಡ್ಯೂಲ್ ನಲ್ಲಿ ನಮ್ಮ ಆಹಾರ ಪದ್ಧತಿ ಸಂಪೂರ್ಣವಾಗಿ ಬದಲಾಗಿದೆ. ಹಿಂದಿನ ಕಾಲದಲ್ಲಿನ ನಮ್ಮ ಹಿರಿಯರು ಆರೋಗ್ಯವಾಗಿರುತ್ತಿದ್ದರು. ಆದರೆ, ಈಗ ನಾವು ದುಡಿಯುವುದೆಲ್ಲಾ ಆಸ್ವತ್ರೆಗೆ ಖರ್ಚಾಗುತ್ತಿದೆ. ಇದಕ್ಕೆ ಮುಖ್ಯ ಕಾರಣ ಆಹಾರ ಪದ್ಧತಿ ಮತ್ತು ಜೀವನ ಕ್ರಮ. ಹೊರಗಿನ ಆಹಾರದ ಮೇಲೆ ಅವಲಂಬನೆ ಬೇಡ ಹಿಂದಿನ ಕಾಲದಲ್ಲಿ ಮನೆಯಲ್ಲಿಯೇ ತಯಾರಿಸಿದ ಆಹಾರ ಸೇವನೆ ಮಾಡುತ್ತಿದ್ದರು. ಹಣ್ಣುಗಳು ತರಕಾರಿ ಸೊಪ್ಪು ಮತ್ತು ಪೌಷ್ಠಿಕ ಆಹಾರಗಳನ್ನು ಸೇವನೆ ಮಾಡುತ್ತಿದ್ದರು. ಆದರೆ ಈಗ ಕಾಲಘಟ್ಟ ಬದಲಾಗಿದೆ. ನಾವು ಹೆಚ್ಚು ಹೊರಗಿನ ಆಹಾರದ ಮೇಲೆ ಅವಲಂಬಿತವಾಗಿದ್ದೇವೆ. ಆಹಾರ ಕ್ರಮದಲ್ಲಾದರೂ ಇರಲಿ ಬದಲಾವಣೆ ಹೋಟೆಲ್ ಆಹಾರ ಮತ್ತಿತರ ಪ್ರೋಟಿನ್ ಡ್ರಿಂಕ್ಸ್ ಬದಲಿಗೆ ಹಣ್ಣುಗಳು, ತರಕಾರಿ,…
ಶುಂಠಿ ಹಲವು ಔಷಧೀಯ ಗುಣಗಳನ್ನು ಒಳಗೊಂಡಿದೆ. ಶುಂಠಿಯನ್ನು ಸೇವಿಸುವುದರಿಂದ ಶೀತ, ವಾಕರಿಕೆ, ಸಂಧಿವಾತ, ಮೈಗ್ರೇನ್ ಮತ್ತು ಅಧಿಕ ರಕ್ತದೊತ್ತಡದಂತಹ ಹಲವಾರು ಕಾಯಿಲೆಗಳನ್ನು ಹತೋಟಿಗೆ ತರಬಹುದು. ಆದ್ದರಿಂದಲೇ ಈ ರೀತಿಯ ಕಾಯಿಲೆಗಳ ಚಿಕಿತ್ಸೆಗಳಲ್ಲಿ ಶುಂಠಿಯನ್ನು ಬಳಸಲಾಗುತ್ತದೆ. ಶುಂಠಿ ತುಂಬಾ ಖಾರವನ್ನು ಹೊಂದಿರುವುದರಿಂದ ಅದನ್ನು ಹಾಗೇ ತಿನ್ನುವುದು ಕಷ್ಟ. ಆದ್ದರಿಂದ ಇವತ್ತಿನ ನಮ್ಮ ರೆಸಿಪಿಯಲ್ಲಿ ಸಿಹಿಯಾದ ಶುಂಠಿ ಬರ್ಫಿಯನ್ನು ಯಾವ ರೀತಿ ಮಾಡುವುದು ಎಂಬುದನ್ನು ನೋಡೋಣ! ಬೇಕಾಗುವ ಸಾಮಗ್ರಿಗಳು: ಉಪ್ಪು – 1 ಚಮಚ ಸಕ್ಕರೆ – 2 ಕಪ್ ಹಾಲು – 2 ಕಪ್ ಏಲಕ್ಕಿ ಪೌಡರ್ – 1 ಚಮಚ ತುಪ್ಪ – 4 ಚಮಚ ಶುಂಠಿ -200 ಗ್ರಾಂ ಮಾಡುವ ವಿಧಾನ: * ಮೊದಲಿಗೆ ಶುಂಠಿಯನ್ನು ಚೆನ್ನಾಗಿ ತೊಳೆದು ಒಂದು ಮಿಕ್ಸಿ ಜಾರಿಗೆ ಹಾಕಿ ಚೆನ್ನಾಗಿ ರುಬ್ಬಿಕೊಳ್ಳಿ. * ಬಳಿಕ ಒಂದು ಬಾಣಾಲೆಯಲ್ಲಿ ತುಪ್ಪ ಹಾಕಿ ಬಿಸಿಗಿಡಿ. ಬಿಸಿಯಾದ ಬಳಿಕ ಅದಕ್ಕೆ ರುಬ್ಬಿಕೊಂಡ ಶುಂಠಿ ಪೇಸ್ಟ್ ಅನ್ನು ಹಾಕಿಕೊಂಡು ಅದರ…