ಕೊಲಂಬೊ: ಬಾಂಗ್ಲಾದೇಶ ಮಹಿಳಾ ತಂಡದ ವಿರುದ್ಧ ನಡೆದ ಏಕದಿನ ಕ್ರಿಕೆಟ್ ಸರಣಿಯಲ್ಲಿ ಹರ್ಮನ್ಪ್ರೀತ್ ಕೌರ್ ಎಲ್ಬಿಡಬ್ಲ್ಯೂ ವಿವಾದದ ಬೆನ್ನಲ್ಲೇ ಎಮರ್ಜಿಂಗ್ ಏಷ್ಯಾಕಪ್ ಟೂರ್ನಿಯಲ್ಲಿ ನೋಬಾಲ್ ವಿವಾದದ (Noball Controversy) ಅಲೆ ಎದ್ದಿದೆ. ಭಾರತ ಎ ತಂಡದ ಸೋಲಿನ ಬಳಿಕ ನೋಬಾಲ್ ವಿವಾದ ಸೃಷ್ಟಿಯಾಗಿದ್ದು, ಪಾಕ್ ಮೋಸದಾಟವಾಡಿತಾ? ಅಂಪೈರ್ಗಳು ಕಂಡೂ ಕಾಣದಂತೆ ವರ್ತಿಸಿದ್ರಾ? ಎಂಬ ಪ್ರಶ್ನೆಗಳು ಕೇಳಿಬರುತ್ತಿವೆ. ಕೊಲಂಬೊದಲ್ಲಿ ಭಾನುವಾರ ನಡೆದ ಅಂಡರ್ 23 ಏಷ್ಯಾಕಪ್ ಟೂರ್ನಿ ಫೈನಲ್ ಪಂದ್ಯದಲ್ಲಿ ಭಾರತ (India A Team)-ಪಾಕ್ ನೀಡಿದ ಬೃಹತ್ ಮೊತ್ತದ ಗುರಿ ಬೆನ್ನತ್ತಿತ್ತು. ಬ್ಯಾಟಿಂಗ್ ಫಾರ್ಮ್ನಲ್ಲಿದ್ದ ಚೆನ್ನೈ ಮೂಲದ ಆಟಗಾರ ಸಾಯಿ ಸುದರ್ಶನ್ ಉತ್ತಮ ರನ್ ಕಲೆಹಾಕುವ ವಿಶ್ವಾಸದಲ್ಲಿದ್ದರು. ಆದ್ರೆ 9ನೇ ಓವರ್ನಲ್ಲಿ ಪಾಕ್ ವೇಗಿ ಅರ್ಷದ್ ಇಕ್ಬಾಲ್ ಬೌಲಿಂಗ್ಗೆ ಕ್ಯಾಚ್ ನೀಡಿ ಔಟಾದರು ಇಕ್ಬಾಲ್ 9ನೇ ಓವರ್ನ 3ನೇ ಬಾಲ್ ಎಸೆಯುವಾಗ ಅವರ ಎಡಗಾಲು ಸಂಪೂರ್ಣ ಕ್ರೀಸ್ನಿಂದ ಹೊರಕ್ಕೆ ಬಂದಿದೆ. ಆದ್ರೆ ಅಂಪೈರ್ ಇದನ್ನು ಗಮನಿಸದೇ ಔಟ್ ತೀರ್ಪು ನೀಡಿದ್ದಾರೆ. ಇದು…
Author: Prajatv Kannada
ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ ಹಾಗೂ ದೇಶಿ ಕ್ರಿಕೆಟ್ ನಲ್ಲಿ ರನ್ ಹೊಳೆ ಹರಿಸಿರುವ ಯುವ ಆಟಗಾರ ಯಶಸ್ವಿ ಜೈಸ್ವಾಲ್ ಗೆ 2024ರ ಟಿ 20 ವಿಶ್ವಕಪ್ ಟೂರ್ನಿಯಲ್ಲಿ ಸ್ಥಾನ ನೀಡಲೇಬೇಕೆಂದು ವಿಶ್ವಕಪ್ ವಿಜೇತ ಆಟಗಾರ ಗೌತಮ್ ಗಂಭೀರ್ ಆಗ್ರಹಿಸಿದ್ದಾರೆ. ನ್ಯೂಸ್ 18 ಜತೆ ಮಾತನಾಡಿರುವ ಅವರು, ಜೈಸ್ವಾಲ್ ಗೆ ಟಿ 20 ತಂಡದಲ್ಲಿ ಸ್ಥಾನ ನೀಡಲು ಇದು ಸರಿಯಾದ ಸಮಯವಾಗಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಯಶಸ್ವಿ ಜೈಸ್ವಾಲ್ ಹದಿನಾರನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಸ್ಫೋಟಕ ಬ್ಯಾಟಿಂಗ್ ನಡೆಸಿ 14 ಪಂದ್ಯಗಳಿಂದ 1 ಶತಕ ಹಾಗೂ 5 ಅರ್ಧಶತಕದ ನೆರವಿನಿಂದ 625 ರನ್ ಸಿಡಿಸಿದ್ದು, ಅಲ್ಲದೆ ದೇಶಿ ಕ್ರಿಕೆಟ್ ನಲ್ಲೂ ತಮ್ಮ ಬ್ಯಾಟಿಂಗ್ ವೈಭವ ಮೆರೆದು ವಿಜಯ್ ಹಜಾರೆ ಟೂರ್ನಿಯಲ್ಲಿ 17 ವರ್ಷ 292 ದಿನಗಳಲ್ಲೇ ದ್ವಿಶತಕ ಸಿಡಿಸಿ ತಮ್ಮ ಸಾಮರ್ಥ್ಯ ಸಾಬೀತು ಪಡಿಸಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧದ ಪದಾರ್ಪಣೆ ಪಂದ್ಯದಲ್ಲೇ 171 ರನ್ ಬಾರಿಸಿ ಹಲವು ದಾಖಲೆ ನಿರ್ಮಿಸಿ ದ್ವಿತೀಯ…
ಪತಿಯ ಅಗಲಿಕೆಯ ನೋವು, ಮಗನ ಆರೈಕೆಯ ಕಾರಣದಿಂದಾಗಿ ಸಿನಿಮಾ ರಂಗದಿಂದ ದೂರ ಉಳಿದಿದ್ದ ನಟಿ ಮೇಘನಾ ರಾಜ್ ಸಾಕಷ್ಟು ವರ್ಷಗಳ ಬಳಿಕ ಮತ್ತೆ ಚಿತ್ರರಂಗಕ್ಕೆ ಕಮ್ ಬ್ಯಾಕ್ ಮಾಡಿದ್ದಾರೆ. ಇತ್ತೀಚೆಗಷ್ಟೇ ಮೇಘನಾ ರಾಜ್ ನಟನೆಯ ತತ್ಸಮ ತದ್ಭವ ಸಿನಿಮಾದ ಟೀಸರ್ ರಿಲೀಸ್ ಆಗಿದ್ದು ಅದ್ಭುತ ರೆಸ್ಪಾನ್ಸ್ ಸಿಕ್ಕಿದೆ. ಇದರ ನಡುವೆ ಇತ್ತೀಚಿನ ಸಂದರ್ಶನದಲ್ಲಿ ಮೇಘನಾ ರಾಜ್ ಅಚ್ಚರಿಯ ಮಾಹಿತಿಯೊಂದನ್ನ ಬಿಚ್ಚಿಟ್ಟಿದ್ದಾರೆ. ತತ್ಸಮ ತದ್ಭವ ಸಿನಿಮಾದಲ್ಲಿ ನಟಿ ಮೇಘನಾ ರಾಜ್ ಈ ಹಿಂದೆ ಎಂದೂ ಮಾಡಿದರ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕಮ್ ಬ್ಯಾಕ್ ಸಿನಿಮಾ ಆಗಿರೋ ಕಾರಣ, ಸಿನಿಮಾ ಬಗ್ಗೆ ತುಂಬಾನೇ ಹೈಪ್ ಕ್ರಿಯೇಟ್ ಮಾಡಿದೆ. ಇದರ ಪತಿ ಚಿರು ಸರ್ಜಾ ನಟನೆಯ ‘ರಾಜ ಮಾರ್ತಾಂಡ’ ಸಿನಿಮಾ ಯಾಕೆ ತಡವಾಗುತ್ತಿದೆ ಎಂಬುದಕ್ಕೆ ಉತ್ತರ ನೀಡಿದ್ದಾರೆ. ಚಿರಂಜೀವಿ ಸರ್ಜಾ ಕೊನೆದಾಗಿ ‘ರಾಜ ಮಾರ್ತಾಂಡ’ ಸಿನಿಮಾದಲ್ಲಿ ನಟಿಸಿದ್ದರು. ಈ ಚಿತ್ರಕ್ಕೆ ಸರ್ಜಾ ಫ್ಯಾಮಿಲಿ ಭಾವನಾತ್ಮಕವಾಗಿ ಹತ್ತಿರವಾಗಿದೆ. ಧ್ರುವ ಸರ್ಜಾ ಚಿರು ಪಾತ್ರಕ್ಕೆ ಧ್ವನಿಯಾಗಿದ್ರೆ, ಪುತ್ರ ರಾಯನ್ ರಾಜ್…
ಕಳೆದ ಕೆಲ ದಿನಗಳಿಂದ ನಟ ಕಿಚ್ಚ ಸುದೀಪ್ ಹಾಗೂ ನಿರ್ಮಾಪಕ ಕುಮಾರ್ ನಡುವಿನ ವಾಕ್ ಸಮಯ ನಡೆಯುತ್ತಲೆ ಇದೆ. ಇದೀಗ ಈ ಪ್ರಕರಣಕ್ಕೆ ನಟ ಕಂ ನಿರ್ದೇಶಕ ಚಕ್ರವರ್ತಿ ಚಂದ್ರಚೂಡ ಎಂಟ್ರಿಕೊಟ್ಟಿದ್ದು ನಿರ್ಮಾಪಕ ಸೂರಪ್ಪ ಬಾಬು ಅವರನ್ನು ಎಳೆದು ತಂದಿದ್ದಾರೆ. ಮೊನ್ನೆಯಷ್ಟೇ ವಿಡಿಯೋವೊಂದನ್ನು ಮಾಡಿ ಸೂರಪ್ಪ ಬಾಬು ಅವರನ್ನು ‘ಶಿಖಂಡಿ’ ಎಂದು ಕರೆದಿದ್ದರು ಚಂದ್ರಚೂಡ, ಇಂದು ಮತ್ತೆ ಮಾಧ್ಯಮ ಗೋಷ್ಠಿಯಲ್ಲಿ’ಸೂರಪ್ಪ ಬಾಬುಗೆ ನಮ್ಮ ಮನೆಯಲ್ಲಿ ಸೆಕ್ಯೂರಿಟಿ ಗಾರ್ಡ್ ಕೆಲಸ ಖಾಲಿ ಇದೆ. ಬೇಕಾದರೆ ಕೊಡುತ್ತೇನೆ’ ಎಂದು ವಾಗ್ದಾಳಿ ನಡೆಸಿದ್ದಾರೆ. ಸೂರಪ್ಪ ಬಾಬು ವಿಚಾರದಲ್ಲಿ ಮಾತನಾಡಿದ್ದ ನಿರ್ದೇಶಕ ಚಂದ್ರಚೂಡ ವಿಡಿಯೋವೊಂದನ್ನು ಮಾಡಿ ಅದನ್ನು ಯೂಟ್ಯೂಬ್ ನಲ್ಲಿ ಹರಿ ಬಿಟ್ಟಿದ್ದರು. ಅದರಲ್ಲಿ ಸೂರಪ್ಪ ಬಾಬು ಅವರನ್ನು ತರಾಟೆಗೆ ತೆಗೆದುಕೊಂಡಿದ್ದಷ್ಟೇ ಅಲ್ಲದೆ ಅವರ ಫ್ಯಾಮಿಲಿಯನ್ನು ಎಳೆತಂದಿದ್ದರು. ಜೊತೆಗೆ ಬಾಬು ಮಗಳ ಬಗ್ಗೆಯೂ ಕೆಲವೊಂದಿಷ್ಟು ಮಾಹಿತಿಯನ್ನು ಆಚೆ ಹಾಕಿದ್ದು, ಇದು ಸೂರಪ್ಪ ಬಾಬು ಕೋಪಕ್ಕೆ ಕಾರಣವಾಗಿತ್ತು. ಚಂದ್ರಚೂಡ್ ತಮ್ಮ ಬಗ್ಗೆ ಆರೋಪ ಮಾಡುತ್ತಿದ್ದಂತೆ ಮಾಧ್ಯಮಗೋಷ್ಠಿ ಮಾಡಿದ್ದ ಸೂರಪ್ಪ…
ಅನಾರೋಗ್ಯದ ಕಾರಣದಿಂದಾಗಿ ಸಿನಿಮಾ ರಂಗದಿಂದ ತಾತ್ಕಾಲಿಕ ವಿರಾಮ ತೆಗೆದುಕೊಂಡಿರುವ ನಟಿ ಸಮಂತಾ ಇದೀಗ ಬಾಲಿಗೆ ತೆರಳಿದ್ದಾರೆ. ಕಳೆದ ಕೆಲ ದಿನಗಳಿಂದ ದೇವಸ್ಥಾನಕ್ಕೆ ಭೇಟಿ ನೀಡುತ್ತಿರುವ ನಟಿ ಸಮಂತಾ ಇತ್ತೀಚೆಗೆ ಸದ್ಗುರು ಆಶ್ರಮದಲ್ಲೂ ಕಾಣಿಸಿಕೊಂಡಿದ್ದರು. ಇದೀಗ ಬಾಬ್ ಕಟ್ ಮಾಡಿಕೊಂಡು ಬಾಲಿಗೆ ಹಾರಿ ಇನ್ನೂ ಕೆಲವೇ ದಿನಗಳಲ್ಲಿ ಅಮೆರಿಕಾಗೆ ತೆರಳಲಿದ್ದಾರೆ ಎಂದು ಹೇಳಲಾಗುತ್ತಿದೆ. ಸಮಂತಾ ಬಾಲಿಗೆ ತೆರಳಿದ್ದು ಅಲ್ಲಿನ ಸುಂದರ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಸಮಂತಾ ಹಂಚಿಕೊಂಡಿರುವ ಫೋಟೋದಲ್ಲಿ ಆಕೆ ಧರಿಸಿರುವ ಫೋಟೋ ಎಲ್ಲರ ಗಮನ ಸೆಳೆಯುತ್ತಿದ್ದು ಟೋಪಿಯ ಮೇಲೆ ‘ಡ್ರೀಮ್ಸ್ ಆನ್’ ಎಂದು ಬರೆಯಲಾಗಿದೆ. ಇನ್ನೂ ಸಮಂತಾ ಹಂಚಿಕೊಂಡಿರುವ ಫೋಟೋದಲ್ಲಿ ಅವರ ಮುಂಜಾನೆ ಹೇಗಿತ್ತು ಎಂಬುದನ್ನು ಕ್ಯಾಪ್ಶನ್ ಮೂಲಕ ವಿವರಿಸಿದ್ದಾರೆ. ಸಮಂತಾ ಜೊತೆ ಅವರ ಫಿಟ್ನೆಸ್ ಟ್ರೇನರ್ ಅನುಷಾ ಸ್ವಾಮಿ ಕೂಡ ಬಾಲಿಗೆ ತೆರಳಿದ್ದಾರೆ. ಸಮಂತಾಗೆ ಅನುಷಾ ಸ್ವಾಮಿ ಜೊತೆ ಉತ್ತಮ ಬಾಂಡಿಂಗ್ ಇದ್ದು ಆಗಾಗ ಆಕೆಯ ಫೋಟೋಗಳನ್ನು ಸಾಮಾಜಿಕ ಜಾಲಾ ತಾಣದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಸಮಂತಾ ಹಿಂದಿಯ ಸಿಟಾಡೆಲ್ ಹಾಗೂ…
ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ ನಂದಕಿಶೋರ್ ಇದೀಗ ಮಲಯಾಳಂ ಚಿತ್ರರಂಗಕ್ಕೆ ಎಂಟ್ರಿಕೊಟ್ಟಿದ್ದಾರೆ. ಈಗಾಗಲೇ ಸಾಕಷ್ಟು ಸೂಪರ್ ಹಿಟ್ ಸಿನಿಮಾಗಳನ್ನು ನೀಡಿರುವ ನಿರ್ದೇಶಕ ನಂದ ಕಿಶೋರ್ ಇದೀಗ ಮಾಲಿವುಡ್ ನ ಸ್ಟಾರ್ ನಟ ಮೋಹನ್ ಲಾಲ್ ಗೆ ಆಕ್ಷನ್ ಕಟ್ ಹೇಳ್ತಿದ್ದಾರೆ. ಇದೀಗ ಮೋಹನ್ ಲಾಲ್ ಹಾಗೂ ನಂದ ಕಿಶೋರ್ ಕಾಂಬಿನೇಷನ್ ನ ಸಿನಿಮಾಗೆ ಅಧಿಕೃತ ಚಾಲನೆ ಸಿಕ್ಕಿದೆ. ಕಳೆದ ಕೆಲ ದಿನಗಳ ಹಿಂದಷ್ಟೇ ಮೋಹನ್ ಲಾಲ್ ಹಾಗೂ ನಂದಕಿಶೋರ್ ಜೊತೆಗಿರುವ ಫೋಟೋ ವೈರಲ್ ಆಗಿತ್ತು. ನಂದಕಿಶೋರ್ ಹಾಗೂ ಮೋಹನ್ ಲಾಲ್ ಒಟ್ಟಿಗೆ ಸಿನಿಮಾ ಮಾಡಲಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಅದೀಗ ನಿಜವಾಗಿದ್ದು ಚಿತ್ರಕ್ಕೆ ವೃಷಭ ಎಂದು ಹೆಸರಿಡಲಾಗಿದೆ. ಇದೇ ತಿಂಗಳಿನಿಂದಲೇ ಚಿತ್ರೀಕರಣ ಆರಂಭವಾಗಲಿದ್ದು, ಮೋಹಲ್ ಲಾಲ್ ಜೊತೆ ಸಿನಿಮಾ ಮಾಡುತ್ತಿರುವುದು ತಮ್ಮ ಪುಣ್ಯ ಎಂದು ನಂದ ಕಿಶೋರ್ ಹೇಳಿದ್ದಾರೆ. ವೃಷಭ ಪೌರಾಣಿಕ ಹಾಗೂ ಫ್ಯಾಂಟಸಿ ಕಥಾ ಹಂದರವನ್ನು ಹೊಂದಿರುವ ಸಿನಿಮಾವಾಗಿದ್ದು, ಸಾಹಸ ಪ್ರಧಾನ ದೃಶ್ಯಗಳನ್ನೂ ಹೊಂದಿರುವುದಾಗಿ ನಿರ್ದೇಶಕರು ತಿಳಿಸಿದ್ದಾರೆ. ಸತತ ಎಂಟು…
ಪ್ರತಿ ವರ್ಷ ಜುಲೈ 25 ರಂದು ವಿಶ್ವ ಭ್ರೂಣಶಾಸ್ತ್ರಜ್ಞರ ದಿನವನ್ನು ಆಚರಿಸಲಾಗುತ್ತದೆ. 25 ಜುಲೈ 1978 ರಂದು, ಲೂಯಿಸ್ ಜಾಯ್ ಬ್ರೌನ್ ಐವಿಎಫ್ ಅಥವಾ ಇನ್ ವಿಟ್ರೊ ಫರ್ಟಿಲೈಸೇಶನ್ ಮೂಲಕ ಗರ್ಭಧರಿಸಿದ ಮೊದಲ ಮಗುವಾಯಿತು ಮತ್ತು ಆದ್ದರಿಂದ ದಿನಾಂಕವನ್ನು ಪ್ರತಿ ವರ್ಷ ವಿಶ್ವ ಭ್ರೂಣಶಾಸ್ತ್ರಜ್ಞರ ದಿನವಾಗಿ ಆಚರಿಸಲಾಗುತ್ತದೆ. ರೋಗಿಗಳ ವೀರ್ಯ, ಅಂಡಾಣುಗಳು ಮತ್ತು ಭ್ರೂಣಗಳ “ಆರೈಕೆದಾರರು” ಎಂದು ಅವರನ್ನು ಸಾಮಾನ್ಯವಾಗಿ ಉಲ್ಲೇಖಿಸಲಾಗುತ್ತದೆ, ಏಕೆಂದರೆ ಅವುಗಳು ಪೋಷಣೆ ಮತ್ತು ಜೀವನದ ಸೃಷ್ಟಿಗೆ ಅನುಕೂಲವಾಗುತ್ತವೆ. ವಿಶ್ವ ಭ್ರೂಣಶಾಸ್ತ್ರಜ್ಞರ ದಿನ: ಇತಿಹಾಸ ವಿಶ್ವ ಭ್ರೂಣಶಾಸ್ತ್ರಜ್ಞರ ದಿನದ ಮಹತ್ವವು ಲೂಯಿಸ್ ಜಾಯ್ ಬ್ರೌನ್ ಅವರ ಜನನದಿಂದ ಹುಟ್ಟಿಕೊಂಡಿದೆ, ಅವರು ಜುಲೈ 25, 1978 ರಂದು ವಿಟ್ರೋ ಫರ್ಟಿಲೈಸೇಶನ್ ವಿಧಾನದ ಮೂಲಕ ಜನಿಸಿದ ಮೊದಲ ಮಗು ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಅಂದಿನಿಂದ, ಪ್ರತಿ ವರ್ಷ ಜುಲೈ 25 ರಂದು ನಾವು ವಿಶ್ವ ಭ್ರೂಣಶಾಸ್ತ್ರಜ್ಞರ ದಿನವನ್ನು ಸ್ಮರಿಸುತ್ತೇವೆ. ವಿಶ್ವ ಭ್ರೂಣಶಾಸ್ತ್ರಜ್ಞರ ದಿನ: ಉಲ್ಲೇಖಗಳು “ಭ್ರೂಣಶಾಸ್ತ್ರಜ್ಞರು ಬೆಳವಣಿಗೆ ಮತ್ತು ಅಭಿವೃದ್ಧಿಯ ಪವಾಡಗಳನ್ನು ವೀಕ್ಷಿಸುವ…
ಕೆಲವರಿಗೆ ಸ್ಪೇಷಲ್ ಆಗಿ ಏನಾದರು ಮಾಡಿ ತಿನ್ನಬೇಕು ಅಂತ ಮನಸ್ಸು ಇರತ್ತೆ. ಆದ್ರೆ ಸಿಂಪಲ್ ಹಾಗೂ ಸ್ಪೇಷಲ್ ಆಗಿರೋ ಯಾವ ಸ್ನಾಕ್ ಮಾಡಿದರೆ ಮನೆಮಂದಿಗೆ ಇಷ್ಟವಾಗುತ್ತೆ ಎಂದು ಯೋಚಿಸ್ತಾ ಇದ್ದೀರಾ? ರಿಲ್ಯಾಕ್ಸ್ ಆಗಿರಿ ನಿಮಗೆ ಸಹಯವಾಗ್ಲಿ ಅಂತಾನೆ ಸಿಂಪಲ್ ಆಗಿ ಕಡಿಮೆ ಸಮಯದಲ್ಲಿ ರುಚಿಕರವಾದ ಆಲೂ ಕಟ್ಲೆಟ್ ತಯಾರಿಸೋ ವಿಧಾನ ಇಲ್ಲಿದೆ. ಬೇಕಾಗುವ ಸಾಮಾಗ್ರಿಗಳು: 1. ಆಲೂಗಡ್ಡೆ- 2-3 2. ಈರುಳ್ಳಿ- 1 3. ಶುಂಠಿ ಹಾಗೂ ಬೆಳ್ಳುಳ್ಳಿ ಪೇಸ್ಟ್- 1 ಚಮಚ 4. ಗರಂ ಮಸಾಲೆ- ಅರ್ಧ ಚಮಚ 5. ಜೋಳದ ಹಿಟ್ಟು- 4 ಚಮಚ 6. ಸಣ್ಣ ರವೆ- 3 ಚಮಚ 7. ಕೊತ್ತಂಬರಿ ಸೊಪ್ಪು- 8-10 ಎಸಳು 8. ಸಾಸಿವೆ, ಕಡ್ಲೆಬೇಳೆ, ಉದ್ದಿನಬೇಳೆ, ಕರಿಬೇವು- ಒಗ್ಗರಣೆ 9. ಹಸಿಮೆಣಸಿನಕಾಯಿ ಪೇಸ್ಟ್- 1 ಚಮಚ 10. ರುಚಿಗೆ ತಕ್ಕಷ್ಟು ಉಪ್ಪು ಹಾಗೂ ಅಡುಗೆ ಎಣ್ಣೆ ಮಾಡುವ ವಿಧಾನ: * ಮೊದಲು ಆಲೂಗಡ್ಡೆಯನ್ನು ಬೇಯಿಸಿ ಬಳಿಕ ಸಿಪ್ಪೆ ತೆಗೆದು ಮೆತ್ತಗೆ ಮಾಡಿಕೊಳ್ಳಿ. ನಂತರ…
ಇಡ್ಲಿ ಮತ್ತು ದೋಸೆಗೆ ಒಂದೇ ರೀತಿಯ ಚಟ್ನಿ ತಿಂದು ಬೇಸರವಾಗಿದ್ದರೆ ನೀವು ಗೆಣಸಿನ ಚಟ್ನಿಯನ್ನು ಟ್ರೈ ಮಾಡಬಹುದು. ಇದನ್ನು ಈ ಚಳಿಗಾಲದಲ್ಲಿ ಸವಿಯಲು ತುಂಬಾ ಚೆನ್ನಾಗಿರುತ್ತೆ ಮತ್ತು ದೇಹಕ್ಕೂ ಇಮ್ಯೂನಿಟಿ ಬೂಸ್ಟ್ ಮಾಡಲು ಸಹ ಹೆಚ್ಚು ಸಹಾಯಕರಿಯಾಗಿದೆ. ಬೇಕಾಗುವ ಸಾಮಗ್ರಿಗಳು: * ಮಧ್ಯಮ ಗಾತ್ರದ ಸಿಹಿ ಗೆಣಸು * 2 ಚಮಚ ಉದ್ದಿನ ಬೆಳೆ * 3-5 ಕೆಂಪು ಮೆಣಸಿನ ಕಾಯಿ * ಸ್ವಲ್ಪ ಹುಣಸೆ ಹಣ್ಣು * 4 ಚಮಚ ಕಾಯಿ ತುರಿ * 2 ಚಮಚ ಎಣ್ಣೆ ಒಗ್ಗರಣೆಗೆ ಒಂದು ಚಮಚ ಸಾಸಿವೆ, 1 ಮೆಣಸಿನಕಾಯಿ, ಚಿಟಿಕೆ ಇಂಗು, ಕರಿಬೇವಿನ ಎಲೆ ಮಾಡುವ ವಿಧಾನ: * ಸಿಹಿ ಗೆಣಸನ್ನು ಬೇಯಿಸಿ ಅದರ ಸಿಪ್ಪೆ ತೆಗೆದು ಹೆಚ್ಚಿಕೊಳ್ಳಿ * ಬಾಣಲೆಗೆ ಎಣ್ಣೆ ಹಾಕಿ ಅದಕ್ಕೆ ಸಾಸಿವೆ, ಕೆಂಪು ಮೆಣಸಿನಕಾಯಿ, ಚಿಟಿಕೆ ಇಂಗು, ಕರಿಬೇವು ಹಾಕಿ ಹುರಿಯಬೇಕು. * ಉದ್ದಿನ ಬೆಳೆ ಗೋಲ್ಡನ್ ಬ್ರೌನ್ ಬಂದ ನಂತರ ಗ್ಯಾಸ್ ಆಫ್ ಮಾಡಿ * ಇದು ತಣ್ಣಗಾದ…
ಈಗ ವಾತಾವರಣ ಬದಲಾವಣೆಯ ಸಮಯ ಆಗಿರುವುದರಿಂದ ಬಿಸಿಲು ಮತ್ತು ಆಗಾಗ ಮಳೆಯ ಸಿಂಚನ ಇದ್ದೇ ಇರುತ್ತದೆ. ಇಂತಹ ಸಮಯದಲ್ಲಿ ಬಹಳಷ್ಟು ಜನರು ಹುಷಾರು ತಪ್ಪುತ್ತಾರೆ. ಸೂಕ್ಷ್ಮ ಆರೋಗ್ಯ ಹೊಂದಿರುವವರು ಬಹಳ ಬೇಗನೆ ಶೀತ, ನೆಗಡಿ, ಕೆಮ್ಮು ಇತ್ಯಾದಿ ಸಮಸ್ಯೆಗಳಿಗೆ ಗುರಿಯಾಗುತ್ತಾರೆ. ಕೆಲವರಿಗೆ ಎದೆಯಲ್ಲಿ ಮತ್ತು ಮೂಗಿನಲ್ಲಿ ಕಪ ಕಟ್ಟಿದ ಅನುಭವ ಉಂಟಾಗುತ್ತದೆ. ದೀರ್ಘಕಾಲದಲ್ಲಿ ಇದು ಅಸ್ತಮಾ ಸಮಸ್ಯೆಗೆ ಕಾರಣವಾಗುತ್ತದೆ. ಇಂತಹ ಸಂದರ್ಭದಲ್ಲಿ ವ್ಯಕ್ತಿಗೆ ಉಸಿರಾಡಲು ಮತ್ತಷ್ಟು ಕಷ್ಟವಾಗುತ್ತದೆ. ಆದರೆ ಕಷ್ಟಕರವಾದ ಉಸಿರಾಟದ ಅವಸ್ಥೆಯನ್ನು ಸರಿ ಪಡಿಸಿಕೊಳ್ಳಲು ಮನೆ ಮದ್ದಿನ ರೂಪದಲ್ಲಿ ಬಹಳ ಸುಲಭದ ಮಾರ್ಗಗಳು ಇವೆ. ಪುದೀನಾಎಲೆಗಳು ಇದರಲ್ಲಿ ನಿಮಗೆ ಸಹಾಯಕ ಎಂದು ಹೇಳಬಹುದು. ಏಕೆಂದರೆ ಪುದೀನಾ ಎಲೆಗಳಲ್ಲಿ ನಿಮಗೆಲ್ಲಾ ಗೊತ್ತಿರುವ ಹಾಗೆ ಒಳ್ಳೆಯ ಔಷಧೀಯ ಗುಣಲಕ್ಷಣಗಳು ಲಭ್ಯ ಇವೆ. ಎಲ್ಲ ವಯಸ್ಸಿನವರಿಗೂ ಸೂಕ್ತವೆನಿಸುವ ಮತ್ತು ಉಸಿರಾಟಕ್ಕೆ ಸಂಬಂಧಪಟ್ಟ ಯಾವುದೇ ಸಮಸ್ಯೆಯನ್ನು ಬಹಳ ಬೇಗನೆ ಸರಿಮಾಡುವ ಸ್ವಭಾವವನ್ನು ಪುದಿನ ಎಲೆಗಳು ಹೊಂದಿರುತ್ತದೆ. ಬನ್ನಿ ಹಾಗಾದರೆ ಈ ಲೇಖನದಲ್ಲಿ ಈ ವಿಚಾರದ ಬಗ್ಗೆ ಮತ್ತಷ್ಟು…