Author: Prajatv Kannada

ಬೆಂಗಳೂರು: ಲೋಕಸಭಾ ಅಖಾಡಕ್ಕೆ ಕಮಲಪಡೆ ಭರ್ಜರಿ ತಯಾರಿ ನಡೆಸ್ತಿದೆ, ಕೇಂದ್ರ ಹೈಕಮಾಂಡ್ ಪ್ರತಿ ರಾಜ್ಯಗಳ ಸ್ಥಿತಿಗತಿಯ ಮಾಹಿತಿ ಕಲೆಹಾಕ್ತಿದ್ದು. ದಕ್ಷಿಣ ಭಾರತದ‌ ಮೇಲೆ ಕಣ್ಣಿಟ್ಟಿರುವ ಕೇಸರಿ ನಾಯಕರು ಕರ್ನಾಟಕದಲ್ಲಿ ಹೆಚ್ಚು ಸೀಟ್ ಗೆಲ್ಲಲು ಪ್ಲಾನ್ ರೂಪಿಸ್ತಿದ್ದಾರೆ. ವಿಧಾನಸಭೆ ಚುನಾವಣೆಯಲ್ಲಿ ಯಡಿಯೂರಪ್ಪರನ್ನ ಬಿಟ್ಟು ನೆಲಕಚ್ಚಿದ್ದ ಬಿಜೆಪಿ ಹೈಕಮಾಂಡ್ ಇದೀಗ ರಾಜಹುಲಿಗೆ ರಾಜಾಧಿಪತ್ಯ ನೀಡಲು ಮುಂದಾಗಿದೆ. ವಿಜಯೇಂದ್ರ – ಅಮಿತ್ ಶಾ ಭೇಟಿ ಮೆಗಾ ಲೋಕಾ ಪ್ಲಾನ್ ಗೆ ವೇದಿಕೆಯಾಗಿದೆ.. 2023ರ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಹೀನಾಯವಾಗಿ ಸೋತು ನೆಲಕಚ್ಚಿದೆ. ಮಾಜಿ ಸಿಎಂ ಯಡಿಯೂರಪ್ಪ ಕಡೆಗಣನೆ, ಬಣ ರಾಜಕೀಯ, ಅಡ್ಜೆಸ್ಟೆಂಟ್ ಪಾಲಿಟಿಕ್ಸ್, ನಾಯಕತ್ವದ ಕೊರತೆ ಹೀಗೆ ಸಾಲು-ಸಾಲು ಕಾರಣಗಳು ಚುನಾವಣೆ ಸೋಲಿಗೆ ಕಮಲ ಪಡೆಯಲ್ಲಿ ಚರ್ಚೆಯಾಗ್ತಿದೆ. ಒಡೆದು 3 ಬಣಗಳಾಗಿರುವ ಬಿಜೆಪಿಗೆ ನಾಯಕತ್ವದ ಕೊರತೆಯದ್ದೇ ದೊಡ್ಡ ತಲೆನೋವಾಗಿದೆ. ಅದ್ರಲ್ಲೂ ಪ್ರಮುಖವಾಗಿ ರಾಜ್ಯ ಬಿಜೆಪಿಯ ಪ್ರಶ್ನಾತೀತ ನಾಯಕ, ಲಿಂಗಾಯತರ ಮಾಸ್ ಲೀಡರ್, ರಾಜಾಹುಲಿ ಮಾಜಿ ಸಿಎಂ ಯಡಿಯೂರಪ್ಪ ರನ್ನ ಕಡೆಗಣನೆ ಮಾಡಿದ್ದೇ ಬಿಜೆಪಿಯ ಹೀನಾಯ ಸೋಲಿಗೆ‌…

Read More

ಬೆಂಗಳೂರು : ಕಳೆದ 10 ದಿನಗಳಲ್ಲಿ ವಾಡಿಕೆಗಿಂತ ಹೆಚ್ಚು ಮಳೆ ಆಗಿದೆ. ಹಿಂದೆ ಹೇಳಿದ್ದೆ ಜುಲೈ ತಿಂಗಳಲ್ಲಿ ಮಳೆಯಾಗುತ್ತೆ ಅಂತ ಹವಾಮಾನ ಇಲಾಖೆ ಹೇಳಿತ್ತು. ಜೂನ್ ತಿಂಗಳಲ್ಲಿ 56 % ಮಳೆ ಕೊರತೆ ಇತ್ತು. ಒಂದು ವಾರದ ಹಿಂದೆ 29% ಇಳಿದಿತ್ತು. ನಿನ್ನೆಗೆ 19% ಮಳೆ ಕೊರತೆ ಕಡಿಮೆ ಆಗಿದೆ. ವಾಡಿಕೆಗಿಂತ ಹೆಚ್ಚು ಮಳೆ ಬಂದ ಕಾರಣ ಶೇ 14% ಕೊರತೆ ಇದೆ ಎಂದು ವಿಕಾಸಸೌಧದಲ್ಲಿ ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದ್ದಾರೆ. ಕಠಿಣ ಪರಿಶ್ರಮವೊಂದೇ ಬದುಕಿನಲ್ಲಿ ಯಶಸ್ಸು ಗಳಿಸಲು ಕೀಲಿಕೈ” ಎಂದು ಸಚಿವ ಕೃಷ್ಣಭೈರೇಗೌಡ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದ್ದಾರೆ. ಭಾನುವಾರ ಕುವೆಂಪುನಗರ ವಾರ್ಡ್​​ನಲ್ಲಿ “ನಮ್ಮೂರ ಹೆಮ್ಮೆ-2023” ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ಉತ್ತಮ ಅಂಕಗಳಿಸಿದ 400ಕ್ಕೂ ಹೆಚ್ಚು ಎಸ್ಎಸ್ಎಲ್ಸಿ-ಪಿಯುಸಿ ವಿದ್ಯಾರ್ಥಿಗಳನ್ನು ಗುರುತಿಸಿ ಸನ್ಮಾನಿಸಲಾಯಿತು. ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆಗಳಿಂದ ಜನ ಖುಷಿಯಾಗಿದ್ದಾರೆ ಎಂದು ಸಚಿವ ಕೃಷ್ಣಭೈರೇಗೌಡ ಇದೇ ಸಂದರ್ಭದಲ್ಲಿ ಅಭಿಪ್ರಾಯಪಟ್ಟರು. ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಬಂದ ನಂತರ ದಿನೋಪಯೋಗಿ ವಸ್ತುಗಳ…

Read More

ಬೆಂಗಳೂರು: ವಿದೇಶದಲ್ಲಿ ಕುಳಿತು ಸರ್ಕಾರದ ವಿರುದ್ಧ ತಂತ್ರ ರೂಪಿಸುತ್ತಿದ್ದಾರೆ. ನಮಗೆ ಬಂದ ಮಾಹಿತಿ ಪ್ರಕಾರ ಅವರೇನೋ ತಂತ್ರ ಮಾಡುತ್ತಿದ್ದಾರೆ. ಬೆಂಗಳೂರಿನಲ್ಲಿ ಮಾಡುವುದು ಬಿಟ್ಟು ಹೊರಗೆ ತಂತ್ರ ಮಾಡುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್​ ಡಿ ಕುಮಾರಸ್ವಾಮಿ ವಿರುದ್ಧ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್​ ಹರಿಹಾಯ್ದರು. ಇನ್ನು ಮುನಿರತ್ನ ಹನಿಟ್ರ್ಯಾಪ್ ಮಾಡಿಸಿದ ಬಗ್ಗೆ ನನಗೆ ಏನೂ ಗೊತ್ತಿಲ್ಲ. ಯಾರು ಹೇಳಿದ್ದಾರೋ ಅವರನ್ನೇ ಕೇಳಿ ಎಂದರು. ಸದಾಶಿವನಗರದ ತಮ್ಮ ನಿವಾಸದಲ್ಲಿ ಮಾತನಾಡಿದ ಡಿಸಿಎಂ ಡಿ.ಕೆ ಶಿವಕುಮಾರ್, ಬೆಂಗಳೂರಲ್ಲಿ ಆಪರೇಷನ್ ಮಾಡಿದ್ರೆ ಗೊತ್ತಾಗುತ್ತೆ ಅಂತಾ ಈಗ ಸಿಂಗಾಪುರದಲ್ಲಿ ಕೂತು ಆಪರೇಷನ್ ಮಾಡ್ತಿದ್ದಾರೆ. ಸರ್ಕಾರ ಅಭದ್ರಗೊಳಿಸ್ತಿರೋ ತಂತ್ರದ ಬಗ್ಗೆ ನಮಗೂ ಮಾಹಿತಿಯಿದೆ ಎಂದು ಡಿ.ಕೆ ಶಿವಕುಮಾರ್ ಹೇಳಿಕೆ ನೀಡಿದ್ದಾರೆ. ಕಳೆದ ವಾರ ನಡೆದ ವಿಧಾನಸಭಾ ಅಧಿವೇಶನದಲ್ಲಿ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ, ಜೆಡಿಎಸ್ ಜಂಟಿಯಾಗಿ ಹೋರಾಟ ನಡೆಸಿತ್ತು. ಸದನದಲ್ಲಿ ಸ್ಪೀಕರ್ ಯು.ಟಿ ಖಾದರ್ ಅಸಭ್ಯ ವರ್ತನೆ ತೋರಿದ ಆರೋಪದಲ್ಲಿ ಬಿಜೆಪಿ ಶಾಸಕರನ್ನು ಅಮಾನತು ಮಾಡಿದ್ದರು. ಈ ವೇಳೆ ಅಮಾನತುಗೊಂಡ ಶಾಸಕರನ್ನು…

Read More

ಹೈದರಾಬಾದ್ ;– ಅಲ್ಪಸಂಖ್ಯಾತರಿಗೆ 1 ಲಕ್ಷ ರೂ. ಆರ್ಥಿಕ ನೆರವು ಒದಗಿಸಲು ತೆಲಂಗಾಣ ಸರ್ಕಾರ ಆದೇಶ ಹೊರಡಿಸಿದೆ. ಹಿಂದುಳಿದ ವರ್ಗಗಳಿಗೆ ಈಗಾಗಲೇ ಆರ್ಥಿಕ ಸಹಾಯ ಯೋಜನೆ ಜಾರಿಯಲ್ಲಿದ್ದು, ಅದೇ ಮಾದರಿಯಲ್ಲಿ ಅಲ್ಪಸಂಖ್ಯಾತ ಸಮುದಾಯದ ಅರ್ಹ ಕುಟುಂಬಕ್ಕೆ ಒಂದು ಲಕ್ಷ ರೂ. ಆರ್ಥಿಕ ನೆರವು ಒದಗಿಸಲು ಆದೇಶ ಹೊರಡಿಸಲಾಗಿದೆ. ತೆಲಂಗಾಣ ಅಲ್ಪಸಂಖ್ಯಾತರ ಹಣಕಾಸು ನಿಗಮದಡಿಯಲ್ಲಿ ಅರ್ಹ ಅಲ್ಪಸಂಖ್ಯಾತ ಕುಟುಂಬಕ್ಕೆ 1 ಲಕ್ಷ ನೆರವು ಒದಗಿಸಲಾಗುತ್ತದೆ. 21 ರಿಂದ 55 ವರ್ಷ ವಯಸ್ಸಿನ ಒಂದು ಕುಟುಂಬದ ಒಬ್ಬ ವ್ಯಕ್ತಿಗೆ ಈ ಆರ್ಥಿಕ ನೆರವು ಸಿಗಲಿದೆ ಎಂದು ಹೇಳಲಾಗಿದೆ. ಅಲ್ಪಸಂಖ್ಯಾತ ಸಮುದಾಯಗಳಿಗೆ ಶೇ 100ರಷ್ಟು ಸಹಾಯಧನದೊಂದಿಗೆ 1 ಲಕ್ಷ ರೂ. ಆರ್ಥಿಕ ನೆರವು ನೀಡಲು ತೆಲಂಗಾಣ ಸರ್ಕಾರ ಭಾನುವಾರ ಆದೇಶ ಹೊರಡಿಸಿದೆ.

Read More

ಬೆಂಗಳೂರು: ರಾಜ್ಯದಲ್ಲಿ ಅಂಗಾಂಗ ದಾನ ಕುರಿತು ಜಾಗೃತಿ ಮೂಡಿಸಲು ರಾಯಭಾರಿ ಆಗುವಂತೆ ಪುನೀತ್ ರಾಜ್ ಕುಮಾರ್ ಪತ್ನಿ ಅಶ್ವಿನಿ ಪುನೀತ್ ರಾಜಕುಮಾರ್ ಅವರನ್ನು ಸಚಿವ ದಿನೇಶ್ ಗುಂಡೂರಾವ್ ಆಹ್ವಾನಿಸಿದ್ದಾರೆ. ವರನಟ ಡಾ. ರಾಜ್‌ಕುಮಾರ್ ಕುಟುಂಬ ಅಂಗಾಂಗ ದಾನಕ್ಕೆ ಪ್ರೇರಣೆಯಾಗಿರುವ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆಯಿಂದ ಆ.3ರಂದು ಹಮ್ಮಿಕೊಂಡಿರುವ ಅಂಗಾಂಗ ದಾನ ದಿನಾಚರಣೆಗೆ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರನ್ನು ಮುಖ್ಯ ಅತಿಥಿಯಾಗಿ ಆಹ್ವಾನಿಸಲಾಗಿದೆ. ವರನಟ ಡಾ. ರಾಜಕುಮಾರ್‌ ರಂತೆ ನಟ ಪುನೀತ್ ರಾಜ್ ಕುಮಾರ್ ಕೂಡ ತಮ್ಮ ಕಣ್ಣುಗಳನ್ನು ದಾನ ಮಾಡುವ ಮೂಲಕ ಸಾಕಷ್ಟು ಜನರಿಗೆ ಮಾದರಿಯಾಗಿದ್ದರು. ಪುನೀತ್ ರಾಜ್ ಕುಮಾರ್ ತಮ್ಮ ಕಣ್ಣುಗಳನ್ನು ದಾನ ಮಾಡಿದ ಬಳಿಕ ಅದೆಷ್ಟೋ ಜನರು ತಮ್ಮ ಕಣ್ಣುಗಳನ್ನು ದಾನವಾಗಿ ಬರೆದುಕೊಟ್ಟಿದ್ದಾರೆ. ಪುನೀತ್ ರಾಜಕುಮಾರ್ ಅವರ ಕಣ್ಣಗಳ ದಾನವು ರಾಜ್ಯಾದ್ಯಂತ ಸಾವಿರಾರು ಜನರಿಗೆ ಅಂಗಾಂಗ ದಾನ ಮಾಡಲು ಪ್ರೇರಣೆಯಾಗಿತ್ತು. ಇದರಿಂದಾಗಿ ಅಂಗಾಂಗ ದಾನ ಪ್ರಮಾಣದಲ್ಲಿ ಏರಿಕೆಯಾಗಿತ್ತು. ನಟನ ಪ್ರೇರಣೆಯಿಂದ ಅನೇಕರು ಇಂದಿಗೂ ಅಂಗಾಂಗ ದಾನ ಮಾಡಲು ಮುಂದೆ ಬರುತ್ತಿದ್ದಾರೆ.…

Read More

ಹಾಲಿವುಡ್ ನ ‘ಆಪನ್ ​ಹೈಮರ್​’ ಸಿನಿಮಾ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ವಿಶ್ವದಾದ್ಯಂತ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಇದೀಗ ಚಿತ್ರದ ದೃಶ್ಯವೊಂದರ ಕುರಿತು ವಿವಾದ ಹುಟ್ಟಿಕೊಂಡಿದೆ. ಸಿನಿಮಾದಲ್ಲಿ ಲೈಂಗಿಕ ಕ್ರಿಯೆ ನಡೆಸುವಾಗ ಕಥಾನಾಯಕ ಭಗವದ್ಗೀತೆಯ ಸಾಲುಗಳನ್ನು ಓದುವ ದೃಶ್ಯ ಸಿನಿಮಾದಲ್ಲಿದೆ. ಇದಕ್ಕೆ ಭಾರತದಲ್ಲಿ ಆಕ್ಷೇಪ ಎದುರಾಗಿದ್ದು, ಈ ಬಗ್ಗೆ ಕೇಂದ್ರ ಸರ್ಕಾರದ ಮಾಹಿತಿ ಆಯುಕ್ತ ಉದಯ್​ ಮಹುರ್ಕರ್​ ತಕರಾರು ತೆಗೆದಿದ್ದು, ಸೋಶಿಯಲ್​ ಮೀಡಿಯಾ ಮೂಲಕ ‘ಆಪನ್​ಹೈಮರ್​’ ಚಿತ್ರತಂಡವನ್ನು ಪ್ರಶ್ನಿಸಿದ್ದಾರೆ. ಅಣುಬಾಂಬ್​ ಕಂಡು ಹಿಡಿದ ಅಮೆರಿಕದ ವಿಜ್ಞಾನಿ ಜೆ. ರಾಬರ್ಟ್​ ಆಪನ್​ ಹೈಮರ್​ ಅವರ ಜೀವನದ ಕುರಿತು ‘ಆಪನ್ ​ಹೈಮರ್​’ ಸಿನಿಮಾ ತಯಾರಾಗಿದೆ. ಆಪನ್​ಹೈಮರ್​ ಪಾತ್ರವನ್ನು ಕಿಲಿಯನ್​ ಮರ್ಫಿ ಮಾಡಿದ್ದಾರೆ. ರಿಯಲ್​ ಲೈಫ್​ನಲ್ಲೂ ಆಪನ್​ಹೈಮರ್​ ಅವರಿಗೆ ಹಿಂದು ಪುರಾಣಗಳ ಬಗ್ಗೆ ಆಸಕ್ತಿ ಇತ್ತು. ಅವರು ಸಂಸ್ಕೃತ ಕಲಿತಿದ್ದರು ಮತ್ತು ಭಗವದ್ಗೀತೆ ಓದಿಕೊಂಡಿದ್ದರು. ಅದಕ್ಕೆ ಸಂಬಂಧಿಸಿದಂತೆ ಈ ಸಿನಿಮಾದಲ್ಲಿ ಒಂದು ದೃಶ್ಯದಲ್ಲಿ ಆಪನ್​ಹೈಮರ್​ ಜೊತೆ ಲೈಂಗಿಕ ಕ್ರಿಯೆ ನಡೆಸುತ್ತಿರುವ ಪ್ರೇಯಸಿಗೆ ಅನೇಕ ಪುಸ್ತಕಗಳು…

Read More

ಬಾಲಿವುಡ್‌ ಚಿತ್ರರಂಗದಲ್ಲಿ ಬಯೋಪಿಕ್ ಹಾವಳಿ ಶುರುವಾಗಿದೆ. ಬ್ಯಾಕ್ ಟು ಬ್ಯಾಕ್ ಬಯೋಪಿಕ್ ಗಳು ತೆರೆಗೆ ಬರ್ತಿದ್ದು ಇದೀಗ ಲೆಜೆಂಡರಿ ಹೀರೋಯಿನ್ ಮೀನಾ ಕುಮಾರಿ ಕುರಿತಾದ ಸಿನಿಮಾಗೆ ತೆರೆ ಮರೆಯಲ್ಲಿ ತಯಾರಿ ಶುರುವಾಗಿದೆ. ಬಾಲಿವುಡ್‌ನ ಖ್ಯಾತ ಫ್ಯಾಷನ್ ಡಿಸೈನರ್ ಮನೀಷ್ ಮಲ್ಹೋತ್ರಾ ಇದೇ ಮೊದಲ ಬಾರಿಗೆ ನಿರ್ದೇಶನಕ್ಕೆ ಇಳಿದಿದ್ದಾರೆ. ಬಾಲಿವುಡ್ ಚಿತ್ರರಂಗದ ದಂತಕಥೆ ನಟಿ ಮೀನಾ ಕುಮಾರಿ ತಮ್ಮ 38ನೇ ವಯಸ್ಸಿಗೆ ಇಹಲೋಕ ತ್ಯಜಿಸಿದ್ದರು. ಬಾಲಿವುಡ್‌ನ ಸಾಕಷ್ಟು ಸಿನಿಮಾಗಳಲ್ಲಿ ನಾಯಕಿಯಾಗಿ ಮಿಂಚಿದ್ದ ಮೀನಾ ಕುಮಾರಿ ಸಾಕಷ್ಟು ಸ್ಟಾರ್ ನಟರೊಂದಿಗೆ ಸ್ಕ್ರೀನ್ ಶೇರ್ ಮಾಡಿದ್ದರು. ಕೇವಲ 12 ಸಿನಿಮಾಗಳಲ್ಲಿ ನಟಿಸಿದ್ರು ತಮ್ಮ ನಟನೆಯ ಮೂಲಕವೇ ಮೋಡಿ ಮಾಡಿದ್ದರು. ವೈಯಕ್ತಿಕ ಬದುಕಿನಲ್ಲಿ ಸಂಸಾರ ಸಂಕಷ್ಟ ಸೇರಿದಂತೆ ಹಲವು ಕಾರಣಗಳಿಂದ ಕುಡಿತದ ಚಟಕ್ಕೆ ಬಿದ್ದಿದ್ದ  ಮೀನಾ ಕುಮಾರಿ ಬಳಿಕ ದುರಂತ ಅಂತ್ಯ ಕಂಡಿದ್ದರು. ಇದನ್ನೇ ಸಿನಿಮಾ ಮಾಡಲು ಮನೀಶ್ ಮೆಲ್ಹೋತ್ರಾ ಭರ್ಜರಿ ತಯಾರಿ ನಡೆಸುತ್ತಿದ್ದಾರೆ. ಬಾಲಿವುಡ್ ಖ್ಯಾತ ಸೆಲೆಬ್ರಿಟಿ ಫ್ಯಾಷನ್ ಡಿಸೈನರ್ ಆಗಿ ಫೇಮಸ್ ಆಗಿರುವ ಮನೀಷ್…

Read More

ಕೊತ್ತಂಬರಿಯನ್ನು ಅಡುಗೆಗೆ ಬಳಸುತ್ತಾರೆ. ಆಯುರ್ವೇದದಲ್ಲಿ ಇದನ್ನು ಔಷಧಕ್ಕೆ ಬಳಸುತ್ತಾರೆ. ಇದು ಬೊಜ್ಜು ಮತ್ತು ಮಧುಮೇಹವನ್ನು ನಿಯಂತ್ರಿಸಲು ಸಹಕಾರಿಯಾಗಿದೆ. ಕೊತ್ತಂಬರಿ ರಕ್ತದಲ್ಲಿನ ಸಕ್ಕರೆ ಅಂಶವನ್ನು ಕಡಿಮೆ ಮಾಡುತ್ತದೆ. ಇದು ಸಂಶೋಧನೆಯಿಂದ ತಿಳಿದುಬಂದಿದೆ. ಇಲಿಗಳ ಮೇಲೆ ಪ್ರಯೋಗ ಮಾಡಿದಾಗ ಈ ವಿಚಾರ ಸ್ಪಷ್ಟವಾಗಿದೆ. ಹಾಗಾಗಿ ತಜ್ಞರು ಕೂಡ ಮಧುಮೇಹಿಗಳಿಗೆ ಕೊತ್ತಂಬರಿ ನೀರನ್ನು ಸೇವಿಸಲು ಹೇಳುತ್ತಾರೆ. ಆದಕಾರಣ 2 ಚಮಚ ಕೊತ್ತಂಬರಿಯನ್ನು ನೀರಿನಲ್ಲಿ ಕುದಿಸಿ. ಅದಕ್ಕೆ ಸ್ವಲ್ಪ ಉಪ್ಪು, ದಾಲ್ಚಿನ್ನಿ , ಕರಿಮೆಣಸನ್ನು ಬಳಸಿ ಕಷಾಯ ರೆಡಿ ಮಾಡಿ ಪ್ರತಿದಿನ ಬೆಳಿಗ್ಗೆ ಕುಡಿಯಿರಿ. ಹಾಗೇ ರಾತ್ರಿ ಕೊತ್ತಂಬರಿ ಬೀಜವನ್ನು ನೀರಿನಲ್ಲಿ ನೆನಸಿಟ್ಟು ಬೆಳಿಗ್ಗೆ ಆ ನೀರನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸಿ.

Read More

ನವದೆಹಲಿ: ವಿಶ್ವದ ನಂ 1 ಶ್ರೀಮಂತ ಎಲನ್​ ಮಸ್ಕ್​ ಸ್ಫೋಟಕ ಮಾಹಿತಿಯೊಂದನ್ನು ಹಂಚಿಕೊಂಡಿದ್ದಾರೆ. ಟ್ವಿಟರ್​ ಮಾಲೀಕರಾಗಿರುವ ಮಸ್ಕ್​, ಟ್ವಿಟರ್​ ಜಾಲತಾಣ ವೇದಿಕೆಯಲ್ಲಿ ಮಹತ್ವದ ಬದಲಾವಣೆಗೆ ಮುಂದಾಗಿದ್ದಾರೆ. ಹಕ್ಕಿಯ ಲೋಗೋದಿಂದಲೇ ಸಖತ್ ಸದ್ದು ಮಾಡಿದ್ದ ಟ್ವಿಟರ್ ನ​ ಲೋಗೋ ಬದಲಾಯಿಸಲು ಮಸ್ಕ್ ಮುಂದಾಗಿದ್ದಾರೆ. ಟ್ವಿಟರ್ ಬರ್ಡ್​​ ಬದಲು ಎಕ್ಷ್​ ಲೋಗೋ ಮೊರೆ ಹೋಗುವ ಸುಳಿವನ್ನು ವಿಡಿಯೋ ಮೂಲಕ ನೀಡಿದ್ದಾರೆ. ಶೀಘ್ರದಲ್ಲೇ ನಾವು ಟ್ವಿಟರ್ ಬ್ರಾಂಡ್‌ಗೆ ವಿದಾಯ ಹೇಳುತ್ತೇವೆ. ಇಂದು ರಾತ್ರಿ ಉತ್ತಮವಾದ ಎಕ್ಷ್​ ಲೋಗೋವನ್ನು ಪೋಸ್ಟ್​ ಮಾಡಿದ್ದಲ್ಲಿ, ನಾಳೆಯಿಂದ ಅದೇ ಲೋಗೋದೊಂದಿಗೆ ಮುಂದುವರಿಯಲಿದ್ದೇವೆ ಎಂದು ಮಸ್ಕ್​ ಟ್ವೀಟ್​ ಮೂಲಕ ತಿಳಿಸಿದ್ದಾರೆ. ಆದರೆ, ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಮಸ್ಕ್​ ಹಂಚಿಕೊಂಡಿಲ್ಲ. ಬಹಳ ಹಿಂದಿನಿಂದಲೂ ಮಸ್ಕ್​ ಬ್ಲೂ ಬರ್ಡ್ ಬದಲು ಎಕ್ಷ್​ ಎಂಬ ಹೆಸರನ್ನು ಮನಸ್ಸಿನಲ್ಲಿ ಇಟ್ಟುಕೊಂಡಿದ್ದರು. ಏಪ್ರಿಲ್​ನಲ್ಲಿ ಟ್ವಿಟರ್​ನ ಹೊಸ ಸಿಇಒ ಲಿಂಡಾ ಯಾಕರಿನೊ ಅವರನ್ನು ಸ್ವಾಗತಿಸುವಾಗ, ಟ್ವಿಟರ್​ ವೇದಿಕೆಯನ್ನು ಎಕ್ಸ್ ದಿ ಎವೆರಿಥಿಂಗ್​ ಆಯಪ್​ ಆಗಿ ಪರಿವರ್ತಿಸಲು ಲಿಂಡಾ ಅವರೊಂದಿಗೆ ಕೆಲಸ ಮಾಡಲು…

Read More

ಉತ್ತರ ಪ್ರದೇಶ ;– ಮನೆಯಲ್ಲಿ ಬರೋಬ್ಬರಿ ಹನ್ನೆರಡು ಹಾವುಗಳು ಪತ್ತೆಯಾದ ಘಟನೆ ಉತ್ತರ ಪ್ರದೇಶದ ಭದೋಹಿ ಜಿಲ್ಲೆಯ ದೇವಜಿತ್‌ಪುರ ಗ್ರಾಮದಲ್ಲಿ ಬೆಳಕಿಗೆ ಬಂದಿದೆ. ಅವಧೇಶ್ ಅವರು ಎರಡು ದಿನಗಳ ಹಿಂದೆ ತಮ್ಮ ಮನೆಯ ಆವರಣದಲ್ಲಿ ಎರಡು ಹಾವುಗಳನ್ನು ಕಂಡಿದ್ದಾರೆ ಇದನ್ನು ಹಿಡಿಯಲು ಹೋದ ವೇಳೆ ಅದು ಮನೆಯ ಒಳಗೆ ಇರುವ ಬಿಲದೊಳಗೆ ಸೇರಿಕೊಂಡಿದೆ. ಇದನ್ನು ಅಲ್ಲಿಂದ ರಕ್ಷಿಸಲು ಮುಂದಾಗಿದ್ದಾರೆ. ಹಾವಿನ ರಕ್ಷಣೆಗಾಗಿ ಬಿಲವನ್ನು ಅಗೆದಾಗ ಅದರ ಒಳಗೆ ಒಂದೊಂದೇ ಹಾವುಗಳು ಹೊರ ಬಂದಿವೆ ಅವಧೇಶ್ ಅವರು ಹಾವುಗಳನ್ನು ರಕ್ಷಣೆ ಮಾಡುವವರು ಆಗಿದ್ದರಿಂದ ಹಾವಿನ ಭಯ ಅವರಲ್ಲಿ ಇರಲಿಲ್ಲ ಹಾಗಾಗಿ ಬಿಲದಿಂದ ಹೊರಬಂದ ಒಂದೊಂದೇ ಹಾವುಗಳನ್ನು ಒಂದು ಬಕೆಟ್ ನಲ್ಲಿ ಸುರಕ್ಷಿತವಾಗಿ ಹಾಕಿ ಇಟ್ಟಿದ್ದಾರೆ ಈ ವೇಳೆ ಹಾವುಗಳನ್ನು ಲೆಕ್ಕ ಹಾಕಿದಾಗ ಬರೋಬ್ಬರಿ ಹನ್ನೆರಡು ಹಾವುಗಳು ಪತ್ತೆಯಾಗಿವೆ.

Read More