Author: Prajatv Kannada

ನವದೆಹಲಿ: ಭಾರತವು ತನ್ನ ಸ್ನೇಹಿರಾಷ್ಟ್ರ ವಿಯೆಟ್ನಾಂಗೆ ಯುದ್ಧ ವಿಮಾನ ‘ಐಎನ್‌ಎಸ್ ಕೃಪಾಣ್’ ಅನ್ನು ಕೊಡುಗೆ ನೀಡಿದೆ. ನೌಕಾಪಡೆಯ ಚೀಫ್ ಅಡ್ಮಿರಲ್‌ ಆರ್.ಹರಿಕುಮಾರ್‌ ಅವರು ವಿಯೆಟ್ನಾಂ ಪೀಪಲ್ಸ್‌ ನೇವಿಗೆ ಇದನ್ನು ಹಸ್ತಾಂತರಿಸಿದ್ದಾರೆ. ಹಿಂದೂ ಮಹಾಸಾಗರ ವಲಯದಲ್ಲಿ ತನ್ನ ಅಸ್ತಿತ್ವ ವಿಸ್ತರಿಸುತ್ತಿರುವ ಚೀನಾದ ಕಾರ್ಯತಂತ್ರದ ತಡೆ ಕ್ರಮವಾಗಿ ಭಾರತವು ಇದನ್ನುನೀಡಿದೆ. ಯುದ್ಧನೌಕೆಗೆ ದೇಶಿ ತಯಾರಿಕೆಯ ಕ್ಷಿಪಣಿ ಅಳವಡಿಸಿದ ನಂತರ ಹಸ್ತಾಂತರ ಪ್ರಕ್ರಿಯೆ ಪೂರ್ಣಗೊಳಿಸಲಾಯಿತು. ವಿಯೆಟ್ನಾಂ ಸಿಬ್ಬಂದಿಗೆ ಭಾರತೀಯ ಸಿಬ್ಬಂದಿಯು ಕೆಲ ಕಾಲ ತರಬೇತಿ ನೀಡಲಿದ್ದಾರೆ. ದೇಶಿ ತಯಾರಿಕೆಯ ಈ ಯುದ್ಧ ನೌಕೆಯು ನೌಕಾಪಡೆಯಲ್ಲಿ 32 ವರ್ಷ ಇತ್ತು. ಈಗ ಇದಕ್ಕೆ ಮಧ್ಯಮ ಮತ್ತು ಹತ್ತಿರದ ನೆಲೆ ಗುರಿಯಾಗಿಸಿ ಪ್ರಯೋಗಿಸಬಹುದಾದ ಗನ್‌ಗಳು, ಲಾಂಚರ್‌ಗಳು, ಕ್ಷಿಪಣಿಗಳನ್ನು ಅಳವಡಿಸಲಾಗಿದೆ ಎಂದು ಅಧಿಕೃತ ಮೂಲಗಳು ಮಾಹಿತಿ ನೀಡಿವೆ.

Read More

ಪಾಟ್ನಾ: ಸಂಗೀತ ಶಿಕ್ಷಕನೊಬ್ಬ ಅಪ್ರಾಪ್ತ ಬಾಲಕಿಯ ಜೊತೆ ಅಸಭ್ಯವಾಗಿ ವರ್ತಿಸುವ ವೇಳೆ ಇಬ್ಬರೂ ಸಿಕ್ಕಿ ಬಿದ್ದಿದ್ದು, ಮೂವರು ವ್ಯಕ್ತಿಗಳು ಇಬ್ಬರನ್ನೂ ವಿವಸ್ತ್ರಗೊಳಿಸಿ ಥಳಿಸಿದ್ದಾರೆ. ಈ ಭಯಾನಕ ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಮೂವರು ವ್ಯಕ್ತಿಗಳು ಅಪ್ರಾಪ್ತ ಬಾಲಕಿ ಮತ್ತು ಪುರುಷನನ್ನು ಬಟ್ಟೆ ಬಿಚ್ಚಿಸಿ ಹಲ್ಲೆ ನಡೆಸುತ್ತಿರುವುದನ್ನು ತೋರಿಸುತ್ತದೆ. ಆ ವ್ಯಕ್ತಿ 40 ರ ಮಧ್ಯದಲ್ಲಿದ್ದು, ಸಂಗೀತ ಶಿಕ್ಷಕ ಎಂದು ಗುರುತಿಸಲಾಗಿದೆ. ‘ ಸಂತ್ರಸ್ತ ಮಹಿಳೆ ನೀಡಿದ ಹೇಳಿಕೆಯ ಆಧಾರದ ಮೇಲೆ ನಾವು ಸಂಗೀತ ಶಿಕ್ಷಕರನ್ನು ಬಂಧಿಸಿದ್ದೇವೆ. ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯಿದೆ, ಮಾಹಿತಿ ತಂತ್ರಜ್ಞಾನ (ಐಟಿ) ಸೆಕ್ಷನ್ 67 ಬಿ ಯ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ’ ಎಂದು ಪೊಲೀಸ್ ಯೋಗೇಂದ್ರ ಕುಮಾರ್ ತಿಳಿಸಿದ್ದಾರೆ. ಅಪ್ರಾಪ್ತ ಬಾಲಕಿ ಮತ್ತು ಆರೋಪಿಗಳ ಮೇಲೆ ಹಲ್ಲೆ ನಡೆಸಿದ ಮೂವರನ್ನು ಬಂಧಿಸಲು ಶೋಧ ನಡೆಸಲಾಗುತ್ತಿದೆ. ಪೊಲೀಸರು ವೀಡಿಯೊವನ್ನು ಪರಿಶೀಲಿಸುತ್ತಿದ್ದಾರೆ…

Read More

ಭೋಪಾಲ್: ಯಾವುದೇ ನಗರ ಅಥವಾ ಹಳ್ಳಿಗಳಿಗೆ ಹೋದರೂ ರಸ್ತೆಗಳ ಮಧ್ಯೆ ಸಾಕು ಪ್ರಾಣಿಗಳ ದಂಡು ನಿಂತಿರುವುದು ಕಾಣಿಸುತ್ತದೆ. ಅದರಲ್ಲಿಯೂ ಜಾನುವಾರುಗಳ ‘ಸಂಚಾರ ನಿಯಂತ್ರಣ’ ಗಡಿಯನ್ನು ದಾಟಿ ಹೋಗುವುದು ದೊಡ್ಡ ಸಾಹಸವೇ ಸರಿ. ಇನ್ನು ಜಾನುವಾರುಗಳು ಅಡ್ಡ ಬಂದ ಕಾರಣಕ್ಕೆ ಒಂದಲ್ಲ ಒಂದು ಕಡೆ ಪ್ರತಿ ನಿತ್ಯ ಅಪಘಾತಗಳು ಸಂಭವಿಸುತ್ತಲೇ ಇರುತ್ತವೆ. ಅದಕ್ಕೆ ಕಡಿವಾಣ ಹಾಕುವುದು ಸುಲಭವಲ್ಲ. ಎಲ್ಲೆಂದರಲ್ಲಿ ಜಾನುವಾರುಗಳನ್ನು ಓಡಾಡಲು ಬಿಡುವವರಿಗೆ ಮಧ್ಯಪ್ರದೇಶದ ಹಳ್ಳಿಯೊಂದರಲ್ಲಿ ವಿಶಿಷ್ಟ ಶಿಕ್ಷೆಯ ನಿಯಮವನ್ನು ಜಾರಿಗೆ ತರಲಾಗಿದೆ. ಈ ಹಳ್ಳಿಯಲ್ಲಿ ಜಾನುವಾರುಗಳನ್ನು ಕೊಟ್ಟಿಗೆ ಅಥವಾ ಹೊಲದಲ್ಲಿ ಮೇಯಲು ಬಿಡದೆ, ಎಲ್ಲೆಂದರಲ್ಲಿ ಅಲೆದು ಮೇಯಲು ಬಿಡುವವರಿಗೆ 500 ರೂ ದಂಡ ವಿಧಿಸುವುದಾಗಿ ಗ್ರಾಮದ ಮುಖ್ಯಸ್ಥರು ಘೋಷಿಸಿದ್ದಾರೆ. ಅಷ್ಟೇ ಅಲ್ಲ, ಈ ತಪ್ಪು ಮಾಡಿದವರಿಗೆ ಐದು ಬಾರಿ ಚಪ್ಪಲಿಯಿಂದ ಬಾರಿಸಲಾಗುವುದು ಎಂದೂ ಹೇಳಿದ್ದಾರೆ. ದಂಡ ಕಟ್ಟಲು ಕೆಲವರು ಸಿದ್ಧರಿರಬಹುದು. ಆದರೆ ಚಪ್ಪಲಿಯೇಟಿನ ಅವಮಾನವನ್ನು ಸಹಿಸಲಾರರು. ಹೀಗಾಗಿ ಜನರು ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸಬಹುದು ಎನ್ನುವುದು ಗ್ರಾಮದ ಸರ್‌ಪಂಚ್ ಅವರ ಉದ್ದೇಶ ಇರಬಹುದು. ಮಧ್ಯಪ್ರದೇಶದ ಶಾಹ್ದೋಲ್…

Read More

ನವದೆಹಲಿ ;- 2024ರ ಸಾರ್ವತ್ರಿಕ ಚುನಾವಣೆಯಲ್ಲಿ ಪ್ರಧಾನಿ ಮೋದಿ ಅವರ ಓಟವನ್ನು ನಿಯಂತ್ರಿಸಬಹುದು ಎಂಬ ನಿರ್ಧಾರಕ್ಕೆ ಬಂದಿರುವ ವಿಪಕ್ಷಗಳು ಲೋಕಸಭಾ ಚುನಾವಣೆಗೆ ತಯಾರಿ ಆರಂಭಿಸಿವೆ. ಪಟನಾದಲ್ಲಿ ನಡೆದ ಸಬೆಗೆ 16 ಪಕ್ಷಗಳು ಹಾಜರಿ ಹಾಕಿದ್ದರೆ ಬೆಂಗಳೂರಿನಲ್ಲಿ ನಡೆದ ಸಭೆಗೆ 26 ಪಕ್ಷಗಳ ಧುರೀಣರು ಭಾಗವಹಿಸಿದ್ದರು. ಹೆಸರೂ ಲಾಭದಾಯಕ ಎನ್ನುವುದನ್ನು ಮನಗಂಡ ಈ ಪಕ್ಷಗಳು ತಮ್ಮ ಒಕ್ಕೂಟಕ್ಕೆ “ಐ.ಎನ್.ಡಿ.ಐ.ಎ” (ಇಂಡಿಯಾ)ಎದೂ ನಾಮಕರಣ ಮಾಡಿವೆ. ಮುಂದಿನ ಸಭೆ ಮುಂಬಯಿಯಲ್ಲಿ ನಡೆಯಲಿದ್ದು, 11 ಮಂದಿಯ ಸಂಚಾಲನಾ ಸಮಿತಿಯ ರಚನೆ ಆಗಲಿದೆ. ಐ.ಎನ್.ಡಿ.ಐ.ಎ ಎಂಬ ಹೆಸರಿನಲ್ಲಿ ಎಲ್ಲವೂ ಅಡಗಿದೆ. ಎನ್ ಡಿಎ ಎದುರಿಸಲು ಈ ಹೆಸರು ಸೂಕ್ತ ಎನ್ನುವುದು ಈ ಪಕ್ಷಗಳ ಭಾವನೆ. ಇಂಡಿಯಾ ಹೆಸರಿನ ಜತೆಗೆ ಜೀತೆಗಾ ಭಾರತ್’ ಎಂಬ ಟ್ಯಾಗ್ ಲೈನ್ ಬಳಸಿಕೊಳ್ಳಲಿದೆ. ಭಾವನಾತ್ಮಕ ವಿಷಯಗಳನ್ನು ಒಟ್ಟೊಟ್ಟಿಗೆ ಬಿಜೆಪಿ ಇತ್ತಿಚಿನ ವರ್ಷಗಳಲ್ಲಿ ಅಭಿವೃದ್ದಿಯ ವಿಚಾರವನ್ನೂ ಪ್ರಸ್ತಾಪಿಸುತ್ತಾ ಬಂದಿದೆ. ದೇಶ, ದೇಶಾಭಿಮಾನ ಕೇವಲ ಬಿಜೆಪಿಯ ಸ್ವತ್ತಲ್ಲ, ಪ್ರತಿಯೊಬ್ಬ ಭಾರತೀಯ ಪ್ರಜೆಗೂ ಸೇರಿದ್ದು ಎನ್ನುವ ಸಂದೇಶವನ್ನು ರವಾನೆ ಮಾಡುವ…

Read More

ನವದೆಹಲಿ ;- 2018ರಿಂದ ಇಲ್ಲಿಯ ತನಕ ಕೇಂದ್ರ ಸರ್ಕಾರ ಬರೋಬ್ಬರಿ 3,064 ಕೋಟಿ ರೂ. ಹಣವನ್ನು ಜಾಹೀರಾತು ಹಾಗೂ ಪ್ರಚಾರಕ್ಕಾಗಿ ಖರ್ಚು ಮಾಡಿದೆ. ಇದರಲ್ಲಿ ಪ್ರಮುಖವಾಗಿ ಮುದ್ರಣ ಮಾಧ್ಯಮಗಳು ಅತಿಹೆಚ್ಚು ಜಾಹೀರಾತು ಪಡೆದಿದ್ದು ಹಾಗೂ ನಂತರದ ಸ್ಥಾನದಲ್ಲಿ ಟಿವಿ ಮಾಧ್ಯಮಗಳು ಸ್ಥಾನ ಪಡೆದಿವೆ. ಹಾಗಾದರೆ ಈ ಮಾಹಿತಿಯನ್ನ ನೀಡಿದ್ದು ಯಾರು? ಯಾವ ಯಾವ ಮಾಧ್ಯಮಗಳಿಗೆ ಎಷ್ಟು ಜಾಹೀರಾತು ನೀಡಲಾಗಿದೆ? ಅದರ ಸಂಪೂರ್ಣ ಮಾಹಿತಿಗಾಗಿ ಮುಂದೆ ಓದಿ. ಹೌದು, ಕಳೆದ ವಾರ ರಾಜ್ಯಸಭೆಯಲ್ಲಿ ಮಾಹಿತಿ ಹಾಗೂ ಪ್ರಸಾರ ಸಚಿವಾಲಯವು ಒದಗಿಸಿದ ಅಂಕಿ ಅಂಶಗಳ ಪ್ರಕಾರ ಸರ್ಕಾರ 2018-19 ಮತ್ತು 2023-24ರ ನಡುವೆ ಒಟ್ಟಾರೆ ಮುದ್ರಣ ಮಾಧ್ಯಮಗಳಿಗೆ 1,338 ಕೋಟಿ ರೂಪಾಯಿ, ಎಲೆಕ್ಟ್ರಾನಿಕ್ ಮಾಧ್ಯಮಗಳಿಗೆ 1,273 ಕೋಟಿ ರೂಪಾಯಿ ಹಾಗೂ ಹೊರಾಂಗಣ ಪ್ರಚಾರಕ್ಕಾಗಿ 452 ಕೋಟಿ ರೂಪಾಯಿ ಖರ್ಚು ಮಾಡಿದೆ. ಈ ಮೂಲಕ ಮೊದಲ ಸ್ಥಾನದಲ್ಲಿ ಮುದ್ರಣ ಮಾಧ್ಯಮಗಳು ಸ್ಥಾನ ಪಡೆದಿವೆ. ಇನ್ನೂ ಈ ಜಾಹೀರಾತು ನೀಡುವ ಪ್ರಮಾಣ ಇತ್ತೀಚೆಗೆ ಒಂದಷ್ಟು ಕಡಿಮೆ ಆಗಿದೆ. ಒಟ್ಟಾರೆ…

Read More

ಬೆಂಗಳೂರು ;- ಗ್ರಾಮೀಣ ಭಾಗಗಳಲ್ಲಿ ಕುಡಿಯುವ ನೀರು ಪೂರೈಕೆಗೆ ರಾಜ್ಯ ಸರಕಾರವು 6.41 ಕೋಟಿ ರೂ. ಹಣ ಬಿಡುಗಡೆ ಮಾಡಿದೆ ಎಂದು ಸಚಿವ ಪ್ರಿಯಾಂಕ ಖರ್ಗೆ ಹೇಳಿದ್ದಾರೆ. ಈ ಸಂಬಂಧ ಬೆಂಗಳೂರಿನಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರವು ರಾಜ್ಯದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ಮುನ್ನೆಚ್ಚರಿಕೆಯಿಂದ 5.14 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಈ ಮೂಲಕ ಈ ಹಿಂದೆ ಒದಗಿಸಿದ್ದ 1 ಕೋಟಿ ರೂ. ಸೇರಿ ಸರ್ಕಾರ ಒಟ್ಟು 6.14 ಕೋಟಿ ರೂ. ನೀಡಿದಂತಾಗಿದೆ ಎಂದು ಮಾಹಿತಿ ನೀಡಿದ್ದಾರೆ. ರಾಜ್ಯದ ಹಲವೆಡೆ ಮುಂಗಾರಿನ ಅಭಾವ ಎದುರಾಗಿದ್ದು , ಹೀಗಾಗಿ ಗ್ರಾಮೀಣ ಭಾಗದ ಜನರಿಗೆ ಹಾಗೂ ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗಬಾರದು ಎನ್ನುವ ಉದ್ದೇಶದಿಂದ ಸರ್ಕಾರ ಸಾಕಷ್ಟು ಮುನ್ನೆಚ್ಚರಿಕೆ ವಹಿಸಿದೆ. ಕುಡಿಯುವ ನೀರಿನ ಅಭಾವ ಇರುವ 514 ಹಳ್ಳಿಗಳಿಗೆ 254 ಟ್ಯಾಂಕರ್‌ಗಳಲ್ಲಿ ನೀರು ಪೂರೈಕೆ ಮಾಡಲಾಗುವುದು ಎಂದರು.

Read More

ಬೆಂಗಳೂರು ;– ರಾಜಧಾನಿ ಬೆಂಗಳೂರು ಸೇರಿ ಹಲವೆಡೆ ವಿಧ್ವಂಸಕ ಕೃತ್ಯ ಎಸಗಲು ಸಂಚು ರೂಪಿಸಿದ ಶಂಕಿತ ಉಗ್ರ ಜುನೈದ್‌ ಅಹ್ಮದ್‌ ಪತ್ತೆಗಾಗಿ ಕೇಂದ್ರ ಅಪರಾಧ ವಿಭಾಗ ಪೊಲೀಸರು, ರಾಷ್ಟ್ರೀಯ ತನಿಖಾ ದಳ ಜಂಟಿ ಕಾರ್ಯಾಚರಣೆಯಲ್ಲಿ ಲುಕ್‌ ಔಟ್‌ ನೋಟಿಸ್‌ ಹೊರಡಿಸಲು ಸಿದ್ಧತೆ ನಡೆಸಲಾಗಿದೆ. ಈಗಾಗಲೇ ಜುನೈದ್‌ನ ಐವರು ಸಹಚರರನ್ನು ಬಂಧಿಸಲಾಗಿದೆ. ಆತ ಅರಬ್‌ ಅಥವಾ ಯುರೋಪ್‌ ರಾಷ್ಟ್ರದಲ್ಲಿ ತಲೆಮರೆಸಿಕೊಂಡಿದ್ದಾನೆ ಎನ್ನಲಾಗಿದೆ. ಹೀಗಾಗಿ ಆತನ ಬಂಧನಕ್ಕೆ ಲುಕ್‌ಔಟ್‌ ನೋಟಿಸ್‌ ನೀಡಲು ಸಿದ್ಧತೆ ಆ ರಂಭಿಸಲಾಗಿದೆ. ಲುಕ್‌ಔಟ್‌ ನೋಟಿಸ್‌ ಹೊರಡಿಸಿದ ಬಳಿಕ ದೇಶದ ಎಲ್ಲ ರೈಲು, ವಿಮಾನ, ಬಸ್‌ ನಿಲ್ದಾಣ ಹಾಗೂ ವಿದೇಶಿ ಪೊಲೀಸರಿಗೂ ಮಾಹಿತಿ ರವಾನೆಯಾಗಲಿದೆ. ಒಂದು ವೇಳೆ ಆತ ಪತ್ತೆಯಾದರೆ ಸ್ಥಳೀಯ ಪೊಲೀಸರ ನೆರವು ಪಡೆದು ವಶಕ್ಕೆ ಪಡೆಯಲಾಗುತ್ತದೆ.

Read More

ಬೆಂಗಳೂರು ;- ಆರ್ ಆರ್ ನಗರದಲ್ಲಿ ಅಭಿವೃದ್ಧಿ ಹೆಸರಿನಲ್ಲಿ ನಡೆದ ಅಕ್ರಮಗಳ ಬಗ್ಗೆ ತನಿಖೆ ನಡೆಸಲಾಗುತ್ತದೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದ್ದಾರೆ. ಮತ್ತಿಕೆರೆಯ ಜೆ.ಪಿ ಪಾರ್ಕ್‌ ನಲ್ಲಿ ಭಾನುವಾರ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಈ ಕುರಿತು ಮಾಹಿತಿ ನೀಡಿದ ಅವರು, ಆರ್‌ಆರ್‌ ನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮಲ್ಲತ್ತಹಳ್ಳಿ ಕೆರೆ, ಹೊಸಕೆರೆ, ಜೆಪಿ ಪಾರ್ಕ್‌ ಅಭಿವೃದ್ಧಿ ಹೆಸರಿನಲ್ಲಿ ಕೆರೆ ಕಣ್ಮರೆ ಈಜುಕೊಳ ಮರು ನಿರ್ಮಾಣ ಹಾಗೂ ಕೆಲವು ಉದ್ಯಾನಗಳ ಅಭಿವೃದ್ಧಿ ಮಾಡುವ ನೆಪದಲ್ಲಿ ನಡೆದಿದೆ ಎನ್ನಲಾಗುತ್ತಿರುವ ಅಕ್ರಮಗಳನ್ನು ಜನರಿಗೆ ತಿಳಿಸಲು ಸೂಕ್ತ ತನಿಖೆ ನಡೆಸಲಾಗುವುದು ಎಂದು ಅವರು ಹೇಳಿದರು. ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ, ಆರ್‌ಆರ್ ನಗರದಲ್ಲಿ ಅಭಿವೃದ್ಧಿ ಹೆಸರಿನಲ್ಲಿ ಅಕ್ರಮ ನಡೆಸಿರುವ ಬಿಜೆಪಿ ಶಾಸಕರು ಚುನಾವಣೆಯಲ್ಲಿ ಹೇಗೆ ಗೆದ್ದು ಬಂದರು ಎಂಬುದು ಜನರಿಗೆ ಗೊತ್ತಾಗಲಿ. ಈ ಸಂಬಂಧ ಅಕ್ರಮಗಳೆಲ್ಲವನ್ನು ಬಯಲಿಗೆಳೆಯುತ್ತೇವೆ ಎಂದರು. ಹೊಸಕೆರೆ ಹಳ್ಳಿ ಬಳಿ ಬೇರೊಬ್ಬರ ಹೆಸರಿನಲ್ಲಿ (ಬೇನಾಮಿ) ಶಾಸಕರು ಜಮೀನು ಖರೀದಿ…

Read More

ಶಿವಮೊಗ್ಗ;– ಭಾರೀ ಮಳೆಯ ಕಾರಣದಿಂದ ಶಿವಮೊಗ್ಗ ಎಲ್ಲ ಶಾಲೆಗಳಿಗೆ ಇಂದು ರಜೆ ಘೋಷಿಸಲಾಗಿದೆ. ಈ ಸಂಬಂಧ ಅಲ್ಲಿನ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ನಾಲ್ಕು ದಿನಗಳಿಂದ ಮಳೆ ಅಬ್ಬರಿಸುತ್ತಿದ್ದು ಶನಿವಾರ ರಾತ್ರಿಯಿಂದ ಮಳೆ ಬಿರುಸುಗೊಂಡಿದೆ. ಭಾನುವಾರ ಇಡೀ ದಿನ ಮಳೆ ಸುರಿದಿದ್ದು ಜನಜೀವನ ಅಸ್ತವ್ಯಸ್ತಗೊಂಡಿದೆ. ಇಂದು ಕೂಡ ಮಳೆ ಮುಂದುವರೆಯುವ ಸಾಧ್ಯತೆ ಇರುವುದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ರಜೆ ಘೋಷಣೆ ಮಾಡಲಾಗಿದೆ.

Read More

ರಾಜ್ಯದಲ್ಲಿ ಕೆಲವು ಕಡೆ ವಿಪರೀತ ಮಳೆ ಪ್ರವಾಹ ಭೀತಿ ಇನ್ನು ಕೆಲವು ಕಡೆ ಬರಗಾಲದ ಛಾಯೆ ಕಾವೇರಿ ಕಣಿವೆ ಪ್ರದೇಶದಲ್ಲಿ ಕರುಣೆ ತೋರದ ವರುಣ ಹಾವೇರಿ ಜಿಲ್ಲಾ ನಾಯನ ಪ್ರದೇಶದಲ್ಲಿ ಕುಡಿಯುವ ನೀರಿಗೂ ತೊಂದರೆ ರೈತರ ವ್ಯವಸಾಯಕ್ಕೆ ಮುಂದಿನ ಬೆಳೆಗೆ ಇರಲಿ ಬೆಳೆದು ನಿಂತಿರುವ ಬೆಳೆಗಳ ಉಳಿವಿಗೆ ನೀರು ಕೊಡಲು ಮೀನಾ ಮೇಷ ಎಣಿಸುತ್ತಿದ್ದ ರಾಜ್ಯ ಸರ್ಕಾರ ಇಂದು ತಮಿಳುನಾಡಿಗೆ ನೀರು ಹರಿಬಿಟ್ಟಿದೆ ಇದರಿಂದಾಗಿ ಜನಸಾಮಾನ್ಯರ ಹಾಗೂ ರೈತರ ಕೆಂಗಣ್ಣಿಗೆ ಸರ್ಕಾರ ಗುರಿಯಾಗಿದೆ. ರಾಜ್ಯದ ಹಲಗೆಡೆ ವರುಣ ತನ್ನ ಆರ್ಭಟವನ್ನು ತೋರುತ್ತಿದ್ದು ಮಳೆಯಿಂದಾಗಿ ಜನ ಜೀವನ ಅರ್ಥವ್ಯಸ್ತಾ ಆಗುತಿದೆ ಆದರೆ ಹಳೆ ಮೈಸೂರು ಭಾಗದಲ್ಲಿ ನೀರಿಗಾಗಿ  ಜನಸಾಮಾನ್ಯರಲ್ಲಿ ಹಾಗೂ ರೈತಪಿ ವರ್ಗಗಳಲ್ಲಿ ಆಹಾಕಾರವೇ ಹೇಳುವ ಪರಿಸ್ಥಿತಿ ಉದ್ಭವವಾಗುತ್ತಿದೆ ಹಳೆ ಮೈಸೂರು ಭಾಗದ ಜೀವನಡಿ ಕನ್ನಂಬಾಡಿ ಕಟ್ಟೆ ಯಲ್ಲಿ ಸದ್ಯ 91.82 ಅಡಿ ನೀರು ಸಂಗ್ರಹವಾಗಿದೆ. ರೈತರನ್ನು ಸಮಾಧಾನಪಡಿಸಿ ಸಂಕಷ್ಟ ಸೂತ್ರದಡಿ 2 ಸಾವಿರ ಕ್ಯೂಸೆಕ್  ನೀರನ್ನು ತಮಿಳುನಾಡಿಗೆ ಹರಿಸಲು ರಾಜ್ಯ ಸರ್ಕಾರ…

Read More