Author: Prajatv Kannada

ಟಾಲಿವುಡ್ ನಟ ಹಾಗೂ ರಾಜಕಾರಣಿ ಪವನ್ ಕಲ್ಯಾಣ್ ಅವರ ಮೂರನೇ ಮದುವೆಯೂ ಮುರಿದುಬಿತ್ತಾ ಎಂಬ ಪ್ರಶ್ನೆ ಶುರುವಾಗಿದೆ. ಈಗಾಗಲೇ ಇಬ್ಬರು ಪತ್ನಿಯರಿಂದ ದೂರವಾಗಿರುವ ನಟ ಪವನ್ ಕಲ್ಯಾಣ್ ಇದೀಗ ಮೂರನೇ ಪತ್ನಿಯಿಂದಲೂ ದೂರವಾದ್ರ ಎಂಬ ಅನುಮಾನ ಶುರುವಾಗಿದೆ. ಅತಿ ಹೆಚ್ಚು ಫ್ಯಾನ್ ಫಾಲೊಯಿಂಗ್ ಹೊಂದಿರುವ ನಟ ಪವನ್ ಕಲ್ಯಾಣ್ ಸಿನಿಮಾಗಳ ಜೊತೆಗೆ ರಾಜಕೀಯ ರಂಗದಲ್ಲಿ ಸಖತ್ ಬ್ಯುಸಿಯಾಗಿದ್ದಾರೆ. ಸಿನಿಮಾಗಳು ಸೋಲಲಿ, ಗೆಲ್ಲಲ್ಲಿ ಪವನ್ ಗಿರೋ ಫ್ಯಾನ್ ಫಾಲೋವಿಂಗ್ ಮಾತ್ರ ಕೊಂಚವೂ ಕಮ್ಮಿಯಾಗಿಲ್ಲ. ಸಿನಿಮಾಗಳ ಜೊತೆಗೆ ಪವನ್ ಕಲ್ಯಾಣ್ ಹೆಸರು ಸದಾ ವಿವಾದದಲ್ಲಿಯೂ ಕೇಳಿ ಬರುತ್ತಿದೆ. ಈಗಾಗಲೇ ಇಬ್ಬರು ಪತ್ನಿಯರಿಂದ ದೂರವಾಗಿರುವ ನಟ ಮೂರನೇ ಪತ್ನಿ ಅನ್ನಾ ಲೇಜ್ನೇವಾರಿಂದಲೂ ದೂರವಾಗಿದ್ದಾರೆ ಎನ್ನುವ ಸುದ್ದಿ ಕೇಳಿ ಬರುತ್ತಿದೆ. ಪವನ್ ಕಲ್ಯಾನ್ ಮೊದಲು ನಂದಿನಿ ಎಂಬುವವರನ್ನು ಮದುವೆಯಾಗಿದ್ದರು.  ಬಳಿಕ ಕೆಲವು ವರ್ಷಗಳ ನಂತರ ಡಿವೋರ್ಸ್ ನೀಡಿ, ನಟಿ ರೇಣು ದೇಸಾಯಿ ಜೊತೆ ಸಪ್ತಪದಿ ತುಳಿದರು. ಕೆಲವು ವರ್ಷ ಅನ್ಯೋನ್ಯವಾಗಿದ್ದ ದಂಪತಿ ಏಕಾಏಕಿ ದೂರವಾದರು. ಬಳಿಕ ಎರಡೆ…

Read More

ಬೆಂಗಳೂರು: ಜುಲೈ 4 ( ಮಂಗಳವಾರ) ರಂದು ಶ್ರೀ ಕಂಠೀರವಾ ಕ್ರೀಡಾಂಗಣದಲ್ಲಿ ನಡೆದ 2023ನೇ ಸಾಲಿನ ಸ್ಯಾಫ್ ಫುಟ್ಬಾಲ್ ಫೈನಲ್ ಪಂದ್ಯದ ರೋಚಕ ಹಣಾಹಣಿಯಲ್ಲಿ 5-4 ರಿಂದ ಪೆನಾಲ್ಟಿ ಶೂಟೌಟ್ ಜಯಿಸಿದ ಭಾರತ ತಂಡ ಚಾಂಪಿಯನ್ ಪಟ್ಟವನ್ನು ತಮ್ಮಲ್ಲೇ ಉಳಿಸಿಕೊಂಡು ಸಂಭ್ರಮಿಸಿದ್ದಲ್ಲದೆ ಇತಿಹಾಸದಲ್ಲಿ 9ನೇ ಬಾರಿ ಟ್ರೋಫಿ ಗೆದ್ದು ದಾಖಲೆ ನಿರ್ಮಿಸಿದೆ. ಪಂದ್ಯ ಮೊದಲ ಕ್ಷಣದಿಂದಲೂ ರೋಚಕತೆಯಿಂದ ಕೂಡಿದ ಪರಿಣಾಮವಾಗಿ ಪೂರ್ಣ ಅವಧಿ ಅಂತ್ಯಕ್ಕೆ 1-1 ರಿಂದ ಸಮಬಲಗೊಂಡಿತು. ಪೆನಾಲ್ಟಿ ಶೂಟೌಟ್ ನಲ್ಲಿ ಫಲಿತಾಂಶ ನಿರ್ಧಾರಗೊಂಡ ಪಂದ್ಯದಲ್ಲಿ ಗೋಲ್ ಕೀಪರ್ ಗುರುಪ್ರೀತ್ ಸಂಧು ಅವರ ಚಮತ್ಕಾರದ ಪ್ರದರ್ಶನದಿಂದ ಸುನೀಲ್ ಛೇಟ್ರಿ ಬಳಗ 5-4 ರಿಂದ ಜಯಿಸಿ ಟ್ರೋಫಿ ಗೆದ್ದು ಸಂಭ್ರಮಿಸಿದರೆ, ಚೊಚ್ಚಲ ಚಾಂಪಿಯನ್ ಮುಕುಟ ಗೆಲ್ಲಬೇಕೆಂಬ ಕುವೈತ್ ಕನಸು ಕನಸಾಗಿಯೇ ಉಳಿಯಿತು. ಪಂದ್ಯ ಆರಂಭಗೊಂಡ 14 ನಿಮಿಷಗಳಲ್ಲೇ ಕುವೈತ್ ನ ಫಾರ್ವರ್ಡ್ ಆಟಗಾರ ಅಬಿಬ್ ಅಲ್ ಖಲೈದಿ ತಮ್ಮ ಕಾಲ್ಚಳಕದಿಂದ ಭಾರತದ ಗೋಲ್ ಕೀಪರ್ ಗುರುಪ್ರೀತ್ ಸಿಂಗ್ ಸಂಧು ಅವರ ಕಣ್ತಪ್ಪಿಸಿ ಚೆಂಡನ್ನು…

Read More

ದೆಹಲಿ: ಟೀಮ್ ಇಂಡಿಯಾ ಮಾಜಿ ನಾಯಕ ಎಂಎಸ್‌ ಧೋನಿ  2020ರಲ್ಲಿ ತಮ್ಮ ಅಂತಾರಾಷ್ಟ್ರೀಯ ಕ್ರಿಕೆಟ್‌ ವೃತ್ತಿಬದುಕಿಗೆ ಅಂತ್ಯ ಹಾಡಿದ್ದರು.ಅಂತಾರಾಷ್ಟ್ರೀಯ ಕ್ರಿಕೆಟ್‌ ವೃತ್ತಿಬದುಕು ಅಂತ್ಯಗೊಳಿಸಿ ಮೂರು ವರ್ಷಗಳು ಕಳೆದಿದೆ. ಆದರೂ, ಅವರು ಬಿಸಿಸಿಐನ ಯಾವುದೇ ಹುದ್ದೆ ಅಲಂಕರಿಸುವಂತ್ತಿಲ್ಲ. 2021ರ ಟಿ20 ವಿಶ್ವಕಪ್‌ ವೇಳೆ ಧೋನಿ ಭಾರತ ತಂಡದಲ್ಲಿ ಮೆಂಟರ್‌ ಆಗಿ ಕಾಣಿಸಿಕೊಂಡಿದ್ದರು. ಆದರೆ, ಬಿಸಿಸಿಐನ ಯಾವುದೇ ಹುದ್ದೆ ಅಲಂಕರಿಸಲು ಅನರ್ಹರಾಗಿದ್ದಾರೆ. ಇದಕ್ಕೆ ಬಿಸಿಸಿಐನ ಕೆಲ ನಿಯಮಗಳು ಕಾರಣ. ಸದ್ಯ ಬಿಸಿಸಿಐನಲ್ಲಿ ಭಾರತ ತಂಡದ ಚೀಫ್ ಸೆಲೆಕ್ಟರ್‌ ಹುದ್ದೆ ಖಾಲಿಯಿದೆ. ಪ್ರತಿಭೆಗಳನ್ನು ಗುರುತಿಸುವಲ್ಲಿ ಧೋನಿ ನಿಸ್ಸೀಮರಾದರೂ, ಈ ಹುದ್ದೆ ಅಲಂಕರಿಸಲು ನಿಯಮಗಳು ಅಡ್ಡಿ ಬರುತ್ತವೆ. ಆಯ್ಕೆ ಸಮಿತಿಯ ಮುಖ್ಯಸ್ಥನಿಗೆ ಬೇಕಾದ ಎಲ್ಲಾ ಅನುಭವಗಳು ಧೋನಿ ಅವರಲ್ಲಿದೆ. ಆದರೆ, ಇಂಡಿಯನ್ ಪ್ರೀಮಿಯರ್‌ ಲೀಗ್‌ ಅಖಾಡದಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ಸೇವೆಯಲ್ಲಿ ಮುಂದುವರಿದಿರುವುದು ಒಂದೇ ಅವರಿಂದ ಬಿಸಿಸಿಐ ಹುದ್ದೆಯನ್ನು ದೂರ ಮಾಡಿದೆ. ಬಿಸಿಸಿಐನ ನಿಯಮಗಳ ಪ್ರಕಾರ ಯಾವುದೇ ಹುದ್ದೆ ಅಲಂಕರಿಸಲು ಬಯಸುವ ಕ್ರಿಕೆಟಿಗ ತನ್ನ ಕ್ರಿಕೆಟ್‌ ವೃತ್ತಿಬದುಕಿಗೆ…

Read More

ಕನ್ನಡ ಚಿತ್ರರಂಗದ ಖ್ಯಾತ ಕಳನಟ, ಅಪ್ರತಿಮ ಕಲಾವಿದ ನಟ ವಜ್ರಮುನಿ ವಿಲನ್​ ಪಾತ್ರಗಳಲ್ಲಿಯೇ ತಮ್ಮ ಛಾಪು ಮೂಡಿಸಿದ್ದರು. ವಜ್ರಮುನಿ ಅವರಿಗೆ ಸರಿಸಾಟಿ ಆಗುವಂತಹ ಕಲಾವಿದ ಮತ್ತೊಬ್ಬರಿಲ್ಲ. ಅದರಲ್ಲೂ ವಜ್ರಮುನಿ ಅವರ ‘ಎಲಾ ಕುನ್ನಿ’ ಡೈಲಾಗ್ ಸಖತ್ ಫೇಮಸ್ ಆಗಿತ್ತು. ಇದೀಗ ಈ ಡೈಲಾಗ್ ಅನ್ನು ಶೀರ್ಷಿಕೆಯನ್ನಾಗಿ ಮಾಡಿ ಯಲಾ ಕುನ್ನಿ ಸಿನಿಮಾ ತೆರೆಗೆ ಬರಲು ಸಿದ್ದತೆ ನಡೆಯುತ್ತಿದ್ದು ಚಿತ್ರದಲ್ಲಿ ಹಾಸ್ಯ ನಟ ಕೋಮಲ್ ನಟಿಸುತ್ತಿದ್ದಾರೆ. ಯಲಾ ಕುನ್ನಿ ಹೆಸರಿನಲ್ಲಿ ಸಿನಿಮಾ ರೆಡಿಯಾಗುತ್ತಿದ್ದು ಸದ್ಯ ಕೋಮಲ್ ಬರ್ತಡೇ ಪ್ರಯುಕ್ತ ಚಿತ್ರದ ಪೋಸ್ಟರ್ ರಿಲೀಸ್ ಮಾಡಲಾಗಿದೆ.‘ ಯಲಾ ಕುನ್ನಿ’ ಸಿನಿಮಾವನ್ನು ‘ಸೌಭಾಗ್ಯ ಸಿನಿಮಾಸ್’ ಬ್ಯಾನರ್​ ಮೂಲಕ ಮಹೇಶ್ ಗೌಡ ಅವರು ನಿರ್ಮಿಸುತ್ತಿದ್ದಾರೆ. ಕಥೆ, ಚಿತ್ರಕಥೆ ಮತ್ತು ಸಂಭಾಷಣೆ ಬರೆದು ಎನ್.ಆರ್. ಪ್ರದೀಪ್ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ. ಸದ್ಯ ರಿಲೀಸ್ ಆಗಿರುವ ಯಲಾ ಕುನ್ನಿ ಸಿನಿಮಾದ ಹೊಸ ಪೋಸ್ಟರ್​ ನಲ್ಲಿ ನಟ ಕೋಮಲ್​ ಕುಮಾರ್​ ಅವರಿಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಲಾಗಿದೆ. ವಜ್ರಮುನಿ ಗೆಟಪ್​ನಲ್ಲಿರುವ ಈ ಫಸ್ಟ್​ ಲುಕ್​…

Read More

ಬಾಲಿವುಡ್ ನಟ ಅಜಯ್ ದೇವಗನ್ ಬಿಟೌನ ಸ್ಟಾರ್ ನಟರಲ್ಲೊಬ್ಬರು. ಅಜಯ್ ದೇವಗನ್ ಪತ್ನಿ ಕಾಜೋಲ್ ಕೂಡ ಸ್ಟಾರ್ ನಟಿಯಾಗಿ ಮಿಂಚುತ್ತಿದ್ದು ನಟನೆಯ ಜೊತೆಗೆ ಇಬ್ಬರು ನಿರ್ಮಾಣದಲ್ಲಿಯೂ ತೊಡಗಿಕೊಂಡಿದ್ದಾರೆ. ಈ ಮಧ್ಯೆ ನಟ ಅಜಯ್ ದೇವಗನ್ ನೂರಾರು ಕೋಟಿ ನೀಡಿ ಮೂರು ಕಚೇರಿಗಳನ್ನು ಮುಂಬೈನಲ್ಲಿ ಖರೀದಿಸುವ ಮೂಲಕ ಸುದ್ದಿಯಾಗಿದ್ದಾರೆ. 2000 ನೇ ಇಸವಿಯಲ್ಲಿ ಅಜಯ್ ದೇವಗನ್ ತಮ್ಮದೇ ಹೆಸರಿನಲ್ಲಿ ಸಿನಿಮಾ ನಿರ್ಮಾಣ ಹಾಗೂ ವಿತರಣಾ ಸಂಸ್ಥೆಯೊಂದನ್ನು ಆರಂಭಿಸಿದ್ದರು. ನಿರ್ಮಾಣ ಸಂಸ್ಥೆಯ ಮೂಲಕ ನಿಯಮಿತವಾಗಿ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರಾದರೂ ವಿತರಣೆ ಬಗ್ಗೆ ಹೆಚ್ಚಾಗಿ ಗಮನ ವಹಿಸಿರಲಿಲ್ಲ. ಇದರ ಜೊತೆಗೆ ಎನ್​ವೈ ವಿಎಫ್​ಎಕ್ಸ್ ವಾಲಾ ಹೆಸರಿನ ವಿಎಫ್​ಎಕ್ಸ್ ಸಂಸ್ಥೆಯನ್ನೂ ದೇವಗನ್ ಸ್ಥಾಪಿಸಿದ್ದಾರೆ. ಇದೀಗ ತಮ್ಮ ಸಿನಿಮಾ ನಿರ್ಮಾಣ, ವಿತರಣೆ ಹಾಗೂ ವಿಎಫ್​ಎಕ್ಸ್ ಸಂಸ್ಥೆಗಳ ಉದ್ಯಮವನ್ನು ಇನ್ನಷ್ಟು ವಿಸ್ತರಿಸುವ ಹಾಗೂ ಇತರೆ ನಟರ ಸಿನಿಮಾಗಳ ನಿರ್ಮಾಣ ಹಾಗೂ ವಿತರಣೆಯೆಡೆಗೂ ಗಮನ ಹರಿಸುವ ಯೋಜನೆ ಹಾಕಿಕೊಂಡಿದ್ದು ಇದೇ ಕಾರಣಕ್ಕಾಗಿ ದೊಡ್ಡ ಕಚೇರಿಯನ್ನು ದೇವಗನ್ ಖರೀದಿಸಿದ್ದಾರೆ ಎನ್ನಲಾಗುತ್ತಿದೆ. ಇದಕ್ಕಾಗಿ ಭಾರಿ…

Read More

ಬಾಲಿವುಡ್ ನಟಿ ಶ್ರುತಿ ಹಾಸನ್ ಹಾಗೂ ಶಾಂತನು ಹಜಾರಿಕಾ ಪರಸ್ಪರ ಪ್ರೀತಿಸುತ್ತಿದ್ದು ಇಬ್ಬರು ಲೀವಿಂಗ್ ಟುಗೇದರ್ ನಲ್ಲಿದ್ದಾರೆ. ಇಬ್ಬರ ಪ್ರೀತಿಗೆ ಎರಡು ಮನೆಯಿಂದಲೂ ಗ್ರೀನ್ ಸಿಗ್ನಲ್ ಸಿಕ್ಕಿದ್ದು ಈ ಮಧ್ಯೆ ಬಾಯ್ ಫ್ರೆಂಡ್ ಕುರಿತು ನಟಿ ಶ್ರುತಿ ಹಾಸನ್ ದೂರಿದ್ದಾರೆ. ಸದ್ಯ ನಟಿ ಶ್ರುತಿ ಹಾಸನ್ ವಿಡಿಯೋ ಒಂದನ್ನು ಹಂಚಿಕೊಂಡಿದ್ದು ಆ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ವಿಡಿಯೋದಲ್ಲಿ ಬಾಯ್​ಫ್ರೆಂಡ್ ಬಗ್ಗೆ ಶ್ರುತಿ ಹಾಸನ್ ಕೆಲ ವಿಚಾರಗಳಲ್ಲಿ ದೂರಿದ್ದಾರೆ. ಹಲವು ವರ್ಷಗಳಿಂದ ಚಿತ್ರರಂಗದಲ್ಲಿ ಬ್ಯುಸಿಯಾಗಿರುವ ಶ್ರುತಿ ಹಾಸನ್ ಗೆ ಹೇಳಿಕೊಳ್ಳುವಂತ ಬ್ರೇಕ್ ಸಿಕ್ಕಿಲ್ಲ. ಸಿನಿಮಾಗಳ ಜೊತೆಗೆ ಶ್ರುತಿ ಹಾಸನ್ ಬಾಯ್​ಫ್ರೆಂಡ್ ವಿಚಾರಕ್ಕೂ ಆಗಾಗ ಸುದ್ದಿ ಆಗುತ್ತಾರೆ. ಈ ವಿಚಾರದಲ್ಲಿ ಅವರು ಯಾವುದೇ ಮುಚ್ಚುಮರೆ ಮಾಡಿಲ್ಲ. ಸೋಶಿಯಲ್ ಮೀಡಿಯಾದಲ್ಲಿ ಶಾಂತನು ಜೊತಗಿನ ಹಲವು ಫೋಟೋಗಳನ್ನು ಅವರು ಹಂಚಿಕೊಳ್ಳುತ್ತಲೇ ಇರುತ್ತಾರೆ. ಈಗ ಅವರು ಶಾಂತನು ಅವರನ್ನು ‘ಮೋಸ್ಟ್ ಅನ್​ರೊಮ್ಯಾಂಟಿಕ್’ ವ್ಯಕ್ತಿ ಎಂದು ಶ್ರುತಿ ಹಾಸನ್ ದೂರಿದ್ದಾರೆ. ಶ್ರುತಿ ಹಾಸನ್ ಹೂವುಗಳನ್ನು ಆರ್ಡರ್ ಮಾಡಿಕೊಂಡಿದ್ದರು. ಇದನ್ನು…

Read More

ಬೆಂಗಳೂರು: ಹಗಲು ದರೋಡೆಗೆ ಕಾಂಗ್ರೆಸ್ ನವರು ಇಳಿದಿದ್ದಾರೆ ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ. ಈ ಸಂಬಂಧ ಬೆಂಗಳೂರಿನಲ್ಲಿ ಮಾತನಾಡಿದ ಅವರು, ಕುಮಾರಸ್ವಾಮಿಗೆ ತಾಕತ್ತು ಇರೋದ್ರಿಂದ ದಾಖಲೆ ಬಿಡುಗಡೆ ಮಾಡುತ್ತೇನೆ. ನಾನು ದಾಖಲೆ ಕೊಟ್ಟರೆ ಆ ಮಂತ್ರಿಯನ್ನು ವಜಾ ಮಾಡ್ತೀರಾ ಎಂದು ಸವಾಲ್ ಹಾಕಿದರು. ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿ ಅವರು ಕಾಂಗ್ರೆಸ್​ ವಿರುದ್ದ ವರ್ಗಾವಣೆ ಆರೋಪ ಮಾಡುತ್ತಿದ್ದಾರೆ. ಇದಕ್ಕೆ ಕಾಂಗ್ರೆಸ್​ನವರು ಕೂಡ ಪ್ರತಿಕ್ರಿಯೆ ನೀಡುತ್ತಲೇ ಬಂದಿದ್ದಾರೆ. ಅದರ ಬೆನ್ನಲ್ಲೇ ಇದೀಗ ಮತ್ತೊಂದು ಬಾಂಬ್​ ಸಿಡಿಸಿದ್ದಾರೆ. ಅವರ ಹೇಳಿಕೆ ಇದೀಗ ರಾಜ್ಯ ರಾಜಕಾರಣದಲ್ಲಿ ಬಾರೀ ಸಂಚಲನ ಮೂಡಿಸಿದೆ. ಹೌದು ಕಾಂಗ್ರೆಸ್​ ಸರ್ಕಾರ ಅಧಿಕಾರಿಗಳ ವರ್ಗಾವಣೆಗೆ ಹಣವನ್ನ ನಿಗದಿ ಮಾಡಿದ್ದು, ಇಂಧನ ಇಲಾಖೆಯಲ್ಲಿ ಬರೊಬ್ಬರಿ 10 ಕೋಟಿಗೆ ಅಧಿಕಾರಿಗಳ ವರ್ಗಾವಣೆಗೆಯಾಗಿದೆ ಎಂದಿದ್ದಾರೆ.

Read More

ಬೆಂಗಳೂರು: ಈ ಬಾರಿ ನಡೆದ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ನಾನು ಸೋಲುತ್ತೇನೆಂಬ ನಿರೀಕ್ಷೆ ನನಗಿರಲಿಲ್ಲ, ಅದರೆ ನಾನು ಸೋತರೂ ನನ್ನ ಕಾರ್ಯಕರ್ತರು ಸೋಲಬಾರದು ಎಂದು ಮಾಜಿ ಸಚಿವ ಡಾ.ಕೆ.ಸುಧಾಕರ್‌ ಹೇಳಿದರು. ಅಧಿಕಾರದಲ್ಲಿದ್ದಾಗ ಸಾಕಷ್ಟು ಅಭಿವೃದ್ಧಿ ಹಾಗೂ ಕೆಲಸ ಕಾರ್ಯಗಳನ್ನು ಮಾಡಿದ್ದೇವೆ. ಅದನ್ನು ನೆನಪಿನಲ್ಲಿಟ್ಟುಕೊಂಡು ಮತ ಹಾಕುತ್ತಾರೆಂಬ ನಿರೀಕ್ಷೆಯಲ್ಲಿದ್ದೆ. ಆದರೆ ಅವರ ನಿರ್ಣಯವೇ ಬೇರೆ ರೀತಿ ಪರಿವರ್ತನೆಯಾಗಿದೆ ಎಂದರು. ಕೋವಿಡ್‌ ಸಂದರ್ಭದಲ್ಲಿ ಕೇಂದ್ರ ಸರಕಾರದಿಂದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು 5 ಕೆಜಿ ಅಕ್ಕಿ ಜತೆಗೆ ಖರೀದಿ ಕಲ್ಯಾಣ ಯೋಜನೆ ಅಡಿ ಉಚಿತವಾಗಿ ಇನ್ನು 5 ಕೆಜಿ ಅಕ್ಕಿಯನ್ನು ಕೊಟ್ಟಿದ್ದೇವೆ. ಆದರೆ ಕಾಂಗ್ರೆಸ್‌ ಸರಕಾರವು 10 ಕೆಜಿ ಅಕ್ಕಿ ಕೊಡುತ್ತೇವೆ ಎಂದು ಹೇಳಿದ ಮಾತನ್ನು ನಂಬಿದ್ದೀರಾ. ಆದರೆ ಸತತ ಎರಡೂವರೆ ವರ್ಷ ನಮ್ಮ ಸರಕಾರ 10 ಕೆಜಿ ಅಕ್ಕಿಯನ್ನು ಕೊಟ್ಟಿದೆ. ಅದರೆ ನೀವು ಯಾಕೆ ನಮ್ಮ ಮೇಲೆ ನಂಬಿಕೆ ಇಡಲಿಲ್ಲ ಎಂದು ಪ್ರಶ್ನಿಸಿದರು. ಕೋವಿಡ್‌ ಸಮಯದಲ್ಲಿ ನನ್ನ ಕ್ಷೇತ್ರ ಜನತೆಗೆ ಯಾವುದೇ ರೀತಿ ತೊಂದರೆಯಾಗಬಾರದೆಂದು…

Read More

ಬೆಂಗಳೂರು: ಸೋದರ ಸಂಬಂಧಿಗಳ ನಡುವೆ ನಡೆದ ಜಗಳ ಕೊಲೆಯಲ್ಲಿ ಅಂತ್ಯವಾದ ಘಟನೆ ನಗರದ ಗೋಪಾಲಪುರದಲ್ಲಿ ನಡೆದಿದೆ. ಸೋನು‌ (35) ಕೊಲೆಯಾದ ವ್ಯಕ್ತಿ. ಈ ಹಿಂದೆ ಮೃತನ ಸಹೋದರ ಅಕ್ರಮ್ ಜೊತೆ ಫಾರೂಕ್ ಜಗಳ ಮಾಡಿಕೊಂಡಿದ್ದ. ಈ ವೇಳೆ ಅಕ್ರಮ್, ಫಾರೂಕ್​ ಪತ್ನಿ ವಿಚಾರವಾಗಿ ಅವಾಚ್ಯ ಶಬ್ದದಿಂದ ನಿಂದಿಸಿದ್ದ. ಬಳಿಕ ಜಗಳ ಹೆಚ್ಚಾಗಿದ್ದು, ಮಾವ ರಿಯಾಜ್ ಗಲಾಟೆ ತಡೆಯಲು ಎಂಟ್ರಿ ಕೊಟ್ಟಿದ್ದನು. ಈ ವೇಳೆ ಗೋಪಾಲಪುರದ ಗುಜುರಿ ಅಂಗಡಿಗೆ ಸಂಧಾನ ಮಾಡುಲು ಕರೆಸಿದ್ದ ವೇಳೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ.

Read More

ಬೆಂಗಳೂರು: ತಕ್ಕಡಿ ಮಾತ್ರ ಅಲ್ಲ ಸ್ಪೀಕರ್ ಪೀಠವೇ ನಿನ್ನೆ ವಾಲಿತ್ತು ಎಂದು ನಿಲುವಳಿ ಪ್ರಸ್ತಾವನೆ ವೇಳೆ ಶಾಸಕ ಆರ್. ಅಶೋಕ್ ಹೇಳಿದರು. ಆರ್​​. ಅಶೋಕ್ ಮಾತಿಗೆ ಸಭಾಪತಿ ಯು ಟಿ ಖಾದರ್​​​ ತಕ್ಕಡಿಯೂ ಸರಿ ಇದೆ, ಪೀಠವೂ ಸರಿ ಇದೆ, ನೋಡುವವರ ಕಣ್ಣುಗಳು ಸರಿ ಇರಬೇಕು ಅಷ್ಟೇ ಎಂದು ತಿರುಗೇಟು ನೀಡಿದರು. ಐದು ಗ್ಯಾರಂಟಿಗಳನ್ನು ಕೊಡುತ್ತೇವೆ ಎಂದು ಹೇಳಿದ್ರು. ನಮ್ಮ ಸರ್ಕಾರ ಬಂದ 24 ಗಂಟೆಯಲ್ಲಿ ಮನೆಬಾಗಿಲಿಗೆ ಗ್ಯಾರಂಟಿಗಳು ಅಂದ್ರು. ಚುನಾವಣೆ ಸಂಧರ್ಭದಲ್ಲಿ ಕಾಂಗ್ರೆಸ್‌ ಜನರಿಗೆ ಆಮಿಷ ಒಡ್ಡಿದ್ರು. ಪ್ರತಿ ಕುಟುಂಬದ ಮಹಿಳೆಗೆ ಉಚಿತ ಬಸ್ ಪಾಸ್ ಅಂದ್ರು. ಆಮೇಲೆ ಎಸಿ ಬಸ್ ಗಳಲ್ಲಿ ಇಲ್ಲ ಅಂತಾ ಹೇಳ್ತಿದ್ದಾರೆ ಎಂದರು. ಅವಾಗ ಸಿಎಂ ಸಿದ್ದರಾಮಯ್ಯ ಅವರು ರಾಮಲಿಂಗಾರೆಡ್ಡಿ ಅವರೇ ನಿಮಗೂ,ಹೆಂಡ್ತಿಗೂ ಫ್ರೀ ಅಂದ್ರು. ರಾಜಹಂಸದಲ್ಲೂ ಫ್ರೀ ಅಂದ್ರು ಆವೇಳೆ ರಾಮಲಿಂಗಾರೆಡ್ಡಿ ಅವರು ಹೇಳಿದ್ರು ಆ ಬಸ್ ಗಳಲ್ಲಿ ಇಲ್ಲಾ ಸರ್. ಆ ಬಸ್ ಗಳಲ್ಲಿ ಅವಕಾಶ ಕೊಟ್ರೆ ಎಲ್ಲಾರೂ ನುಗ್ಗುತ್ತಾರೆ ಅಂದ್ರು. ಆ…

Read More