ವಿಜಯಪುರ: ಈಶ್ವರಪ್ಪ ನಡೆಯ ಬಗ್ಗೆ ಬಿಜೆಪಿ ರಾಜ್ಯ ಉಸ್ತುವಾರಿ ಸಾಫ್ಟ್ ಕಾರ್ನರ್ ಮಾತುಗಳಾನ್ನಾಡಿದ್ದಾರೆ. ಈಶ್ವರಪ್ಪನವರು ನಮ್ಮ ಪಕ್ಷದ ಮುಖಂಡರಾಗಿದ್ದರು. ಪಕ್ಷಕ್ಕಾಗಿ ಅವರು ಸಾಕಷ್ಟು ಸಂಘರ್ಷ ಮಾಡಿದ್ದಾರೆ. ಈಶ್ವರಪ್ಪನವರಿಗೆ ದುಃಖ ವಾಗಿರಬಹುದು, ಆದರೆ ಬಿಜೆಪಿ ಕಾರ್ಯಕರ್ತರಿಗೆ ದುಃಖವಾಗಿಲ್ಲ,
ಈಶ್ವರಪ್ಪನವರಿಗೆ ಈಶ್ವರ ಒಳ್ಳೆಯ ಬುದ್ದಿ ಕೊಡಲಿ ಎಂದಷ್ಟೇ ನಾವು ಹೇಳಬಹುದು ಆದ್ದರಿಂದ ಇದಕ್ಕಿಂತ ಹೆಚ್ಚಿಗೆ ನಾನೇನು ಹೇಳುವದಿಲ್ಲ ಎಂದರು. ಸಾಫ್ಟ್ ಆಗಿಯೇ ಈಶ್ವರ ಬಂಡಾಯದ ಬಗ್ಗೆ ಬಿಜೆಪಿ ರಾಜ್ಯ ಚುನಾವಣಾ ಉಸ್ತುವಾರಿ ರಾಧಾಮೋಹನ್ ದಾಸ್ ಅಸಮಾಧಾನ ಹೊರಹಾಕಿದರು.