ಮೈಸೂರು:- ಮುಂದಿನ ಒಕ್ಕಲಿಗರ ನಾಯಕ ನಾನೇ ಎಂದು DCM ಡಿಕೆಶಿ ಶಿವಕುಮಾರ್ ಹೇಳಿದ್ದಾರೆ. ಮಂಡ್ಯ ಲೋಕಸಭಾ ಕ್ಷೇತ್ರದ ಎನ್ಡಿಎ ಅಭ್ಯರ್ಥಿ ಹೆಚ್ಡಿ ಕುಮಾರಸ್ವಾಮಿಯವರು ಎರಡು ಬಾರಿ ಮುಖ್ಯಮಂತ್ರಿಯಾದರು. ಹೆಚ್.ಡಿ. ದೇವೇಗೌಡ ಅವರು ದೇಶದ ಪ್ರಧಾನಿಯಾದರು. ನಾನು ನಿಮ್ಮೂರಿನ ಅಳಿಯ, ನನಗೂ ದೊಡ್ಡ ಜವಾಬ್ದಾರಿ ಇದೆ. ಇಲ್ಲಿ ರಕ್ಷಣೆ ಇಲ್ಲ, ನಾಯಕತ್ವದ ಸಮಸ್ಯೆ ಇದೆ. ಸ್ವಲ್ಪ ದಿನ ಅಷ್ಟೆ. ನೀವು ತಲೆಕೆಡಿಸಿಕೊಳ್ಳಲು ಹೋಗಬೇಡಿ, ನೀವು ಎಲ್ಲರೂ ನಮ್ಮ ಬೆಂಬಲಕ್ಕೆ ನಿಲ್ಲಬೇಕು. ಎನ್ನುವ ಮೂಲಕ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಒಕ್ಕಲಿಗರ ಮತಗಳನ್ನು ತಮ್ಮತ್ತ ಸೆಳೆಯುವ ಪ್ರಯತ್ನ ಮಾಡಿದರು. ಜೊತೆಗೆ ಮುಂದಿನ ದಿನಗಳಲ್ಲಿ ಒಕ್ಕಲಿಗ ಸಮಾಜದ ನಾಯಕ ಮತ್ತು ಮುಖ್ಯಮಂತ್ರಿಯಾಗುವ ಸುಳಿವನ್ನು ನೀಡಿದರು.
ನಾಯಕತ್ವ ವಿಚಾರದಲ್ಲಿ ನಮ್ಮ ಸಮಾಜದವರಿಗೆ ಸ್ವಲ್ಪ ಸಮಸ್ಯೆ ಆಗಿದೆ. ಈಗ ಸಚಿವ ವೆಂಕಟೇಶ್, ಹರೀಶ್ಗೌಡ ಮುಂದಾಳತ್ವ ವಹಿಸಿದ್ದಾರೆ. ಹೆಚ್ಡಿ ಕುಮಾರಸ್ವಾಮಿ ಪುಟ್ಟರಾಜುಗೆ ಟಿಕೆಟ್ ಕೊಡುತ್ತೇನೆಂದು ಚಾಕಲೇಟ್ ಕೊಟ್ಟರು. ನಾವೇನು ಮಾಡಲ್ಲ, ಬಿಜೆಪಿಗರೇ ಅವರನ್ನು ಮುಗಿಸುತ್ತಾರೆ. ಒಕ್ಕಲಿಗರು ದರಿದ್ರ ಮಾತಾಡ್ತಾರೆಂದು ಜನ ಮಾತಾಡಿಕೊಳ್ಳುತ್ತಿದ್ದಾರೆ ಎಂದರು.
ನಾನು ಅಪ್ಪ-ಅಮ್ಮನಿಗೆ ಹುಟ್ಟಿಲ್ಲ ಅಂಥ ಹೆಚ್ಡಿ ಕುಮಾರಸ್ವಾಮಿ ಹೇಳಿದರು. ನನ್ನ ತಾಯಿಯನ್ನೇ ಕರೆದುಕೊಂಡು ಹೋಗಿ ಅವರ ಮುಂದೆ ಕೂರಿಸಿದೆ. ಆಗ ಕ್ಷಮೆ ಕೇಳಿದರು. ಬಾಯಿ ಇದೆ ಅಂಥ ಏನು ಬೇಕಾದ್ರೂ ಮಾತಾಡಬಹುದಾ? ನಾನು ಸಮಾಜಕ್ಕೆ ಹೆದರುತ್ತೇನೆ, ಇಂಥವರಿಗೆ ಹೆದರಲ್ಲ. ಇಂಥವರಿಗೆ ಹೆದರುವ ಮಗ ಅಲ್ಲ ಎಂದ ಎಂದು ವಾಗ್ದಾಳಿ ಮಾಡಿದರು.