PrajatvkannadaPrajatvkannada
  • Home
  • ಬೆಂಗಳೂರು
  • ಜಿಲ್ಲೆ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಲೈಫ್ ಸ್ಟೈಲ್
  • ಚಲನಚಿತ್ರ
  • ಕ್ರೀಡೆ
  • ಗ್ಯಾಲರಿ
  • ವಿಡಿಯೋ
  • ಜೋತಿಷ್ಯ

Subscribe to Updates

Get the latest creative news from FooBar about art, design and business.

What's Hot

Shilpa Shetty: ಸತ್ಯವತಿಯಾಗಿ ಸ್ಯಾಂಡಲ್ವುಡ್ಗೆ ಎಂಟ್ರಿಕೊಟ್ಟ ನಟಿ ಶಿಲ್ಪಾ ಶೆಟ್ಟಿ

March 22, 2023

ತಮಿಳುನಾಡಿನ ಪಟಾಕಿ ಗೋದಾಮಿನಲ್ಲಿ ಭಾರಿ ಸ್ಫೋಟ: 7 ನಿಧನ

March 22, 2023

ಕೋವಿಡ್ ಪ್ರಕರಣ ಸಂಖೆ ಹೆಚ್ಚಳ: ಮೋದಿಯಿಂದ ಉನ್ನತ ಮಟ್ಟದ ಸಭೆ

March 22, 2023
Facebook Twitter Instagram
Wednesday, March 22
Facebook Instagram YouTube
PrajatvkannadaPrajatvkannada
Demo
  • Home
  • ಬೆಂಗಳೂರು
  • ಜಿಲ್ಲೆ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಲೈಫ್ ಸ್ಟೈಲ್
  • ಚಲನಚಿತ್ರ
  • ಕ್ರೀಡೆ
  • ಗ್ಯಾಲರಿ
  • ವಿಡಿಯೋ
  • ಜೋತಿಷ್ಯ
PrajatvkannadaPrajatvkannada
Home » ಶೃಂಗೇರಿ ಕೊಡಲಿ ಮಠದ ಆಸ್ತಿ ಅಕ್ರಮವಾಗಿ ಮಾರಾಟ: ಭಕ್ತರಿಂದ ಗಂಭೀರ ಆರೋಪ
ಜಿಲ್ಲೆ Prajatv KannadaBy Prajatv KannadaMarch 8, 2023

ಶೃಂಗೇರಿ ಕೊಡಲಿ ಮಠದ ಆಸ್ತಿ ಅಕ್ರಮವಾಗಿ ಮಾರಾಟ: ಭಕ್ತರಿಂದ ಗಂಭೀರ ಆರೋಪ

Facebook Twitter WhatsApp Reddit Email Telegram
Share
Facebook Twitter WhatsApp LinkedIn Email

ಧಾರವಾಡ: ಶೃಂಗೇರಿ ಕೊಡಲಿ ಮಠದ ಪೀಠಾಧಿಪತಿ ವಿದ್ಯಾವಿನಯ ವಿದ್ಯಾರಣ್ಯ ಸ್ವಾಮೀಜಿ ಅವರು ಮಠದ ಆಸ್ತಿಯನ್ನು ಅಕ್ರಮವಾಗಿ ಮಾರಾಟ ಮಾಡಿದ್ದಾರೆ ಎಂಬ ಗಂಭೀರ ಆರೋಪವನ್ನು ಮಠದ ಭಕ್ತ ಅಮೃತೇಶ್ವರ ಮಹಾರಾಜರು ಮಾಡಿದ್ದಾರೆ.

ಧಾರವಾಡದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಧಾರವಾಡ, ಗದಗ ಸೇರಿದಂತೆ ರಾಜ್ಯದ ಇತರ ಕಡೆಗಳಲ್ಲಿರುವ ಮಠಕ್ಕೆ ಸೇರಿದ ಆಸ್ತಿಯನ್ನು ಮಾರಾಟ ಮಾಡಲಾಗಿದೆ.

ಶಿವಮೊಗ್ಗ ಜಿಲ್ಲೆಯ ಕೊಡಲಿ ಶೃಂಗೇರಿ ಮಹಾಸಂಸ್ಥಾನದಲ್ಲಿ ಆಡಳಿತ ವ್ಯವಸ್ಥೆ ಹದಗೆಟ್ಟಿದೆ. ಜಗದ್ಗುರು ಶಂಕರಾಚಾರ್ಯರಿಂದ ಸ್ಥಾಪಿತವಾದ ಮಠದ ಅಭಿವೃದ್ಧಿಗೆ ಹಿನ್ನಡೆಯಾಗುತ್ತಿದೆ ಎಂದರು.

ಮಠದ ಆಸ್ತಿಯನ್ನು ಅಕ್ರಮವಾಗಿ ಮಾರಾಟ ಮಾಡುತ್ತಿರುವ ವಿದ್ಯಾವಿನಯ ವಿದ್ಯಾರಣ್ಯ ಸ್ವಾಮೀಜಿ ಅವರನ್ನು ಕೆಳಗಿಳಿಸಿ ನೂತನ ಪೀಠಾಧಿಪತಿಯನ್ನು ನೇಮಕ ಮಾಡಬೇಕು. ಈ ಮಠ ಚಿತ್ರದುರ್ಗ, ದಾವಣಗೆರೆ, ಹಾನಗಲ್, ಗದಗ, ಊದಗಟ್ಟಿ ಸೇರಿದಂತೆ ಇತರ ಕಡೆ ಹಲವಾರು ಶಾಖಾ ಮಠಗಳನ್ನು ಹೊಂದಿದೆ. ಈ ಮಠಕ್ಕೆ ರಾಜ್ಯದಾದ್ಯಂತ ಭಕ್ತರು ನೀಡಿದ 36 ಎಕರೆ ಜಮೀನು ಇದೆ. ಪ್ರಸ್ತುತ ಪೀಠಾಧಿಪತಿ ಈ ಆಸ್ತಿಯನ್ನು ಮಾರಾಟ ಮಾಡುತ್ತಿದ್ದಾರೆ. ಪೀಠಾಧಿಪತಿ ಮಠದಲ್ಲಿ ಇರದೇ ನಾಪತ್ತೆಯಾಗಿದ್ದಾರೆ. ಮಠದಲ್ಲಿ ನಿತ್ಯ ಪೂಜೆ, ಅನುಷ್ಠಾನ ಮತ್ತು ಭೋಜನ ವ್ಯವಸ್ಥೆಯಲ್ಲಿ ವ್ಯತ್ಯಾಸ ಆಗುತ್ತಿದೆ. ಭಕ್ತರಿಗೆ, ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ ಎಂದರು.

ಈ ಮಠದ ಅವ್ಯವಸ್ಥೆಯನ್ನು ಸರಿಪಡಿಸಲು ಇತ್ತೀಚೆಗೆ ಪ್ರಮೋದ ಮುತಾಲಿಕ್ ನೇತೃತ್ವದಲ್ಲಿ ಭಕ್ತರು ಸಭೆ ನಡೆಸಿದ್ದರು. ಸಭೆಯಲ್ಲಿ ತಾತ್ಕಾಲಿಕ ಮಂಡಳಿ ರಚನೆ ಮಾಡಲಾಗಿತ್ತು. ಅದರನ್ವಯ ಮಠಕ್ಕೆ ಹೊಸ ಪೀಠಾಧಿಪತಿಯನ್ನು ನೇಮಕ ಮಾಡಬೇಕು. ವಿದ್ಯಾವಿನಯ ವಿದ್ಯಾರಣ್ಯ ಸ್ವಾಮೀಜಿ ಸ್ವಯಂ ಪ್ರೇರಣೆಯಿಂದ ಕೆಳಗಿಳಿಯಬೇಕು. ಈಗಾಗಲೇ ಈ ಪೀಠಾಧಿಪತಿಗಳು ಗದಗ ಜಿಲ್ಲೆಯ ವೆಂಕಟಾಪುರ ಹಾಗೂ ಧಾರವಾಡದಲ್ಲಿನ ಮಠದ ಆಸ್ತಿಯನ್ನು ಮಾರಾಟ ಮಾಡಿದ್ದಾರೆ ಎಂದರು.

Share. Facebook Twitter WhatsApp Pinterest LinkedIn Tumblr Telegram Email

Related Posts

Ugadi 2023: ಹೊಸ ಸಂವತ್ಸರದ ಮೊದಲ ಬೇಸಾಯಕ್ಕೆ ಸಿದ್ಧತೆ; ರೈತರಲ್ಲಿ ಹೊಸ ಹುರುಪು

March 22, 2023

ಚುನಾವಣಾ ಗಿಮಿಕ್: ಬಿಜೆಪಿ ಶಾಸಕನಿಂದ ಮುಸ್ಲಿಂ ಟೋಪಿ ಧರಿಸಿ ಮಸೀದಿ ನಿರ್ಮಾಣಕ್ಕೆ ಭೂಮಿಪೂಜೆ

March 22, 2023

Rape attempt: ಮನೆ ಮುಂದೆ ನಿಂತಿದ್ದ ವಿವಾಹಿತೆ ಮೇಲೆ ಅತ್ಯಾಚಾರಕ್ಕೆ ಯತ್ನ: ಆರೋಪಿಗಳಿಗಾಗಿ ಶೋಧ

March 22, 2023

ಲಾರಿ ಡಿಕ್ಕಿ – ಹೆದ್ದಾರಿಯಲ್ಲಿ ಚಲ್ಲಾಪಿಲ್ಲಿಯಾದ ಏಳು ಲಕ್ಷ ಮೌಲ್ಯದ ಮದ್ಯ

March 22, 2023

ರಾಜ್ಯ ರಾಜಕಾರಣದಲ್ಲಿ ನಾಯಕತ್ವ ಬದಲಾವಣೆ: ಮುನ್ಸೂಚನೆ ನೀಡಿದ ಬೊಂಬೆ ಭವಿಷ್ಯ

March 22, 2023

ಮನೆಮನೆಗೆ ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ : ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಿಂದ ವಿತರಣೆ

March 22, 2023
Stay In Touch
  • Facebook
  • Instagram
  • YouTube
© 2023 Prajatvkannada . Designed by Prajatvkannada .
  • Home
  • ಬೆಂಗಳೂರು
  • ಜಿಲ್ಲೆ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಲೈಫ್ ಸ್ಟೈಲ್
  • ಚಲನಚಿತ್ರ
  • ಕ್ರೀಡೆ
  • ಗ್ಯಾಲರಿ
  • ವಿಡಿಯೋ
  • ಜೋತಿಷ್ಯ

Type above and press Enter to search. Press Esc to cancel.