Prajatvkannada
  • Home
  • ಬೆಂಗಳೂರು
  • ಜಿಲ್ಲೆ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಲೈಫ್ ಸ್ಟೈಲ್
  • ಚಲನಚಿತ್ರ
  • ಕ್ರೀಡೆ
  • ಗ್ಯಾಲರಿ
  • ವಿಡಿಯೋ
  • ಜೋತಿಷ್ಯ

Subscribe to Updates

Get the latest creative news from FooBar about art, design and business.

What's Hot

ಮತದಾರರ ಪಟ್ಟಿ ಸೇರ್ಪಡೆ; ಡಿ. 2, 3 ರಂದು ವಿಶೇಷ ನೋಂದಣಿ ಅಭಿಯಾನ

December 1, 2023

ಇಂದು ವಿಶ್ವ ಏಡ್ಸ್ ದಿನ: ಇದರ ಇತಿಹಾಸ ಮತ್ತು ಮಹತ್ವ ತಿಳಿಯೋಣ!

December 1, 2023

SSLC & 2nd PUC ಪರೀಕ್ಷೆಯ ತಾತ್ಕಾಲಿಕ ವೇಳಾಪಟ್ಟಿ ಪ್ರಕಟ

December 1, 2023
Facebook Twitter Instagram
Saturday, December 2
Facebook Instagram YouTube
PrajatvkannadaPrajatvkannada
Demo
  • Home
  • ಬೆಂಗಳೂರು
  • ಜಿಲ್ಲೆ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಲೈಫ್ ಸ್ಟೈಲ್
  • ಚಲನಚಿತ್ರ
  • ಕ್ರೀಡೆ
  • ಗ್ಯಾಲರಿ
  • ವಿಡಿಯೋ
  • ಜೋತಿಷ್ಯ
Prajatvkannada
Home » ‘RRR’ ಚಿತ್ರತಂಡದಲ್ಲಿ ಕಿರಿಕ್? ಕ್ಷಮೆ ಕೇಳಿದ ‘ನಾಟು ನಾಟು..’ ಗಾಯಕ ಕಾಲ ಭೈರವ
ಚಲನಚಿತ್ರ Prajatv KannadaBy Prajatv KannadaMarch 18, 2023

‘RRR’ ಚಿತ್ರತಂಡದಲ್ಲಿ ಕಿರಿಕ್? ಕ್ಷಮೆ ಕೇಳಿದ ‘ನಾಟು ನಾಟು..’ ಗಾಯಕ ಕಾಲ ಭೈರವ

Facebook Twitter WhatsApp Reddit Email Telegram
Share
Facebook Twitter WhatsApp LinkedIn Email

ರಾಜಮೌಳಿ ನಿರ್ದೇಶನದ ಜ್ಯೂನಿಯರ್ ಎನ್ ಟಿ ಆರ್ ಹಾಗೂ ರಾಮ್ ಚರಣ್ ತೇಜಾ ನಟನೆಯ  ತೆಲುಗಿನ ಆರ್ ಆರ್ ಆರ್ ಸಿನಿಮಾದ ‘ನಾಟು ನಾಟು..’ ಹಾಡಿಗೆ ಆಸ್ಕರ್ ಪ್ರಶಸ್ತಿ ಲಭಿಸಿದ್ದು ಚಿತ್ರತಂಡ ಖುಷಿಯ ಅಲೆಯಲ್ಲಿ ತೇಲಾಡುತ್ತಿದೆ.  ಆದರೆ ‘ಆರ್​ಆರ್​ಆರ್​’ ಚಿತ್ರ ತಂಡದಲ್ಲಿ ಏನೋ ಬಿರುಕು ಇದೆ ಎಂಬ ಅನುಮಾನ ಮೂಡಿದೆ. ಅದಕ್ಕೆ ಸಾಕ್ಷಿ ಎಂಬಂತೆ ಕೆಲವು ಘಟನೆಗಳು ನಡೆಯುತ್ತಿದೆ. ‘ನಾಟು ನಾಟು..’ ಗಾಯಕರಲ್ಲಿ ಒಬ್ಬರಾದ ಕಾಲ ಭೈರವ ಇದೀಗ ಬಹಿರಂಗವಾಗಿ ಕ್ಷಮೆ ಕೇಳಿದ್ದಾರೆ.

‘ಆಸ್ಕರ್​’ ಪ್ರಶಸ್ತಿ ಸಮಾರಂಭದಲ್ಲಿ ಭಾಗಿ ಆಗಲು ‘ಆರ್​ಆರ್​ಆರ್’ ತಂಡದ ಸದಸ್ಯರು ಅಮೆರಿಕಕ್ಕೆ ತೆರಳಿದ್ದರು. ಈಗ ವಾಪಸ್​ ಬಂದಿರುವ ಅವರು ಸೋಶಿಯಲ್​ ಮೀಡಿಯಾದಲ್ಲಿ ತಮ್ಮ ಮಾತುಗಳನ್ನು ಹಂಚಿಕೊಂಡಿದ್ದಾರೆ. ಕಾಲ ಭೈರವ ಅವರು ಇತ್ತೀಚೆಗೆ ಟ್ವೀಟ್​ ಮಾಡಿದ್ದು, ತಮಗೆ ಸಹಾಯ ಮಾಡಿದ ಎಲ್ಲರಿಗೂ ಧನ್ಯವಾದ ಅರ್ಪಿಸಿದ್ದಾರೆ. ಆದರೆ ಆ ಟ್ವೀಟ್​ನಲ್ಲಿ ಜೂನಿಯರ್​ ಎನ್​ಟಿಆರ್​ ಮತ್ತು ರಾಮ್​ ಚರಣ್​ ಹೆಸರನ್ನು ಕಾಲ ಭೈರವ ಪ್ರಸ್ತಾಪಿಸಿಲ್ಲ. ಇದು ಅಭಿಮಾನಿಗಳ ಕೋಪಕ್ಕೆ ಕಾರಣ ಆಗಿದೆ.

‘ನಾಟು ನಾಟು..’ ಹಾಡಿನಲ್ಲಿ ಜೂನಿಯರ್​ ಎನ್​ಟಿಆರ್​ ಮತ್ತು ರಾಮ್​ ಚರಣ್​ ಅವರು ಬಿಂದಾಸ್​ ಆಗಿ ಡ್ಯಾನ್ಸ್​ ಮಾಡಿದ್ದಾರೆ. ಹಾಡು ಜನಪ್ರಿಯ ಆಗಿರುವುದರಲ್ಲಿ ಅವರ ಕೊಡುಗೆಯನ್ನು ನಿರ್ಲಕ್ಷಿಸುವಂತಿಲ್ಲ. ಆದರೆ ಕಾಲ ಭೈರವ ಅವರು ತಮ್ಮ ಟ್ವೀಟ್​ನಲ್ಲಿ ಈ ಸ್ಟಾರ್​ ನಟರ ಹೆಸರನ್ನು ಕೈ ಬಿಟ್ಟಿರುವುದು ಅಭಿಮಾನಿಗಳಿಗೆ ಸರಿ ಎನಿಸಿಲ್ಲ. ಹಾಗಾಗಿ ಅವರನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ.

‘ಜೂನಿಯರ್​ ಎನ್​ಟಿಆರ್​ ಮತ್ತು ರಾಮ್​ ಚರಣ್​ ಅವರ ಕೊಡುಗೆ ಏನೂ ಇಲ್ಲವೇ?’ ಎಂದು ನೆಟ್ಟಿಗರು ಖಾರವಾಗಿ ಪ್ರಶ್ನಿಸಿದ್ದಾರೆ. ಟ್ರೋಲ್​ ಆದ ಬಳಿಕ ಕಾಲ ಭೈರವ ಅವರು ಎಚ್ಚೆತ್ತುಕೊಂಡಿದ್ದಾರೆ. ‘ಆಸ್ಕರ್​ ವೇದಿಕೆಯಲ್ಲಿ ಪರ್ಫಾರ್ಮ್​ ಮಾಡಲು ಸಹಾಯ ಮಾಡಿದವರ ಹೆಸರನ್ನು ಮಾತ್ರ ನಾನು ಪ್ರಸ್ತಾಪಿಸಿದ್ದೆ. ಹಾಡಿಗೆ ಜೂನಿಯರ್​ ಎನ್​ಟಿಆರ್​ ಮತ್ತು ರಾಮ್​ ಚರಣ್​ ಅವರ ಕೊಡುಗೆ ಖಂಡಿತವಾಗಿಯೂ ಇದೆ. ನನ್ನ ಪೋಸ್ಟ್​ಯನ್ನು ತಪ್ಪಾಗಿ ಅರ್ಥೈಸಲಾಗಿದೆ. ನಾನು ಕ್ಷಮೆ ಕೇಳುತ್ತೇನೆ’ ಎಂದು ಕಾಲ ಭೈರವ ಟ್ವೀಟ್​ ಮಾಡಿ ಕ್ಷಮೆ ಯಾಚಿಸಿದ್ದಾರೆ.

Demo
Share. Facebook Twitter WhatsApp Pinterest LinkedIn Tumblr Telegram Email

Related Posts

ಖ್ಯಾತ ಹಿರಿಯ ನಟಿ ಆರ್.ಸುಬ್ಬಲಕ್ಷ್ಮಿ ವಿಧಿವಶ!

December 1, 2023

ತಮ್ಮ ನೆಚ್ಚಿನ ನಟ ಶಂಕರ್ ನಾಗ್ ಅವರಿಗೆ ಪ್ರಶಸ್ತಿ ಅರ್ಪಿಸಿದ ರಿಷಬ್ ಶೆಟ್ಟಿ

November 29, 2023

ನಟಿ ಲೀಲಾವತಿ ಆರೋಗ್ಯ ವಿಚಾರಿಸಿದ ನಟ ಶಿವಣ್ಣ

November 28, 2023

ಪ್ರೀತಿಸಿದ ಯುವಕನ ಜೊತೆ ಪೂಜಾ ಗಾಂಧಿ ಮದುವೆ.. ನಾಳೆ ಕನ್ನಡಿಗನ ಕೈ ಹಿಡಿಯಲಿದ್ದಾರೆ ‘ಮುಂಗಾರು’ ಮಳೆ ನಟಿ

November 28, 2023

ಉಗ್ರ ರೂಪದಲ್ಲಿ ದರ್ಶನ ಕೊಟ್ಟ ರಿಷಭ್ ಶೆಟ್ಟಿ: ಕಾಂತಾರ 2 ಫಸ್ಟ್ ಝಲಕ್ ಮೈ ಜುಂಮೆನಿಸುವ ರೂಪ!

November 27, 2023

‘ದಿ ಡಾರ್ಕ್ ವೆಬ್’ ಸಿನೆಮಾ ಶೀರ್ಷಿಕೆ ಅನಾವರಣಗೊಳಿಸಿದ ನಟ ವಸಿಷ್ಠ ಸಿಂಹ

November 26, 2023
Stay In Touch
  • Facebook
  • Instagram
  • YouTube
© 2023 Prajatvkannada . Designed by Prajatvkannada .
  • Home
  • ಬೆಂಗಳೂರು
  • ಜಿಲ್ಲೆ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಲೈಫ್ ಸ್ಟೈಲ್
  • ಚಲನಚಿತ್ರ
  • ಕ್ರೀಡೆ
  • ಗ್ಯಾಲರಿ
  • ವಿಡಿಯೋ
  • ಜೋತಿಷ್ಯ

Type above and press Enter to search. Press Esc to cancel.