PrajatvkannadaPrajatvkannada
  • Home
  • ಬೆಂಗಳೂರು
  • ಜಿಲ್ಲೆ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಲೈಫ್ ಸ್ಟೈಲ್
  • ಚಲನಚಿತ್ರ
  • ಕ್ರೀಡೆ
  • ಗ್ಯಾಲರಿ
  • ವಿಡಿಯೋ
  • ಜೋತಿಷ್ಯ

Subscribe to Updates

Get the latest creative news from FooBar about art, design and business.

What's Hot

ಓಲಾ ಶೇರಿಂಗ್, ಉಬರ್ ಪೂಲಿಂಗ್‌ʼಗೆ ಅವಕಾಶ ನೀಡಲು ಸಂಸದರ ಪಟ್ಟು: ಕೆರಳಿದ ಖಾಸಗಿ ಸಾರಿಗೆ ಚಾಲಕರು

October 2, 2023

BMTC ನೌಕರರಿಗೆ ಗುಡ್ ನ್ಯೂಸ್: ಡಿಪೋಗಳಲ್ಲೇ ಊಟ ತಿಂಡಿ ಒದಗಿಸುವ ಕ್ಯಾಂಟೀನ್‌ ಆರಂಭ!

October 2, 2023

ಗಾಂಧಿಜೀ ಅವರ ಕನಸಾದ ಸ್ವಚ್ಛ ಭಾರತ ಕನಸನ್ನ ನನಸು ಮಾಡಬೇಕಿದೆ: ಗ್ರಾ.ಪಂ.ಅಧ್ಯಕ್ಷ ಅಶೋಕ್

October 2, 2023
Facebook Twitter Instagram
Monday, October 2
Facebook Instagram YouTube
PrajatvkannadaPrajatvkannada
Demo
  • Home
  • ಬೆಂಗಳೂರು
  • ಜಿಲ್ಲೆ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಲೈಫ್ ಸ್ಟೈಲ್
  • ಚಲನಚಿತ್ರ
  • ಕ್ರೀಡೆ
  • ಗ್ಯಾಲರಿ
  • ವಿಡಿಯೋ
  • ಜೋತಿಷ್ಯ
PrajatvkannadaPrajatvkannada
Home » Madal Arrest: ಬಂಧನದ ಬೆನ್ನಲ್ಲೇ ಎದೆ ನೋವು ಎಂದು ಮಾಡಾಳ್‌ ವಿರೂಪಾಕ್ಷಪ್ಪ ಹೈಡ್ರಾಮಾ
ಬೆಂಗಳೂರು Prajatv KannadaBy Prajatv KannadaMarch 28, 2023

Madal Arrest: ಬಂಧನದ ಬೆನ್ನಲ್ಲೇ ಎದೆ ನೋವು ಎಂದು ಮಾಡಾಳ್‌ ವಿರೂಪಾಕ್ಷಪ್ಪ ಹೈಡ್ರಾಮಾ

Facebook Twitter WhatsApp Reddit Email Telegram
Share
Facebook Twitter WhatsApp LinkedIn Email

ಬೆಂಗಳೂರು: ಮಾಡಾಳ್‌ ವಿರೂಪಾಕ್ಷಪ್ಪ ಜಾಮೀನು ಅರ್ಜಿ ವಜಾ ಬೆನ್ನಲ್ಲೇ ಲೋಕಾಯುಕ್ತ ಪೊಲೀಸರು ಚನ್ನಗಿರಿ ಶಾಸಕರನ್ನು ಬಂಧಿಸಿದ್ದಾರೆ. ಲೋಕಾಯುಕ್ತ ಪೊಲೀಸರಿಂದ ಬಂಧಿತರಾದ ಶಾಸಕ ಮಾಡಾಳ್‌ ವಿರೂಪಾಕ್ಷಪ್ಪ ಅವರು, ನಾನು ಹೃದ್ರೋಗಿಯಾಗಿದ್ದು, ತೀವ್ರ ಎದೆ ನೋವು ಬರುತ್ತಿದೆ ಎಂದು ಹೈಡ್ರಾಮಾ ಮಾಡಿದರು.

ಹೀಗಾಗಿ ಅವರನ್ನು ಬೌರಿಂಗ್‌ ಆಸ್ಪತ್ರೆಯ ತುರ್ತು ಚಿಕಿತ್ಸೆ ವಿಭಾಗದಲ್ಲಿಆರೋಗ್ಯ ತಪಾಸಣೆ ನಡೆಸಲಾಯಿತು. ಬಳಿಕ ಪೊಲೀಸರು ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಕೊಠಡಿಯಲ್ಲಿಊಟ ಸೇವಿಸಲು ಅವರಿಗೆ ವ್ಯವಸ್ಥೆ ಮಾಡಿದರು. ನಂತರ ಲೋಕಾಯುಕ್ತ ಕಚೇರಿಗೆ ಕರೆದೊಯ್ದು ವಿಚಾರಣೆ ನಡೆಸಿದರು.

ಬಂಧನ ವೇಳೆ ಏನೇನಾಯ್ತು?

  • ಸಂಜೆ 4 ಗಂಟೆಯಿಂದಲೇ ಟೋಲ್‌ನಲ್ಲಿಬೀಡುಬಿಟ್ಟಿದ್ದ 20 ಹೆಚ್ಚು ಲೋಕಾಯುಕ್ತ ಪೊಲೀಸರಿದ್ದ ತಂಡ
  • ಐದಕ್ಕೂ ಹೆಚ್ಚು ವಾಹನಗಳಲ್ಲಿಆಗಮಿಸಿದ್ದ ಲೋಕಾಯುಕ್ತ ಪೊಲೀಸರು
  • ಕ್ಯಾತ್ಸಂದ್ರ ಟೋಲ್‌ ಬಳಿ ನಿರಂತರವಾಗಿ ವಾಹನ ತಪಾಸಣೆ
  • ತುಮಕೂರು ಕಡೆಯಿಂದ ಬೆಂಗಳೂರಿಗೆ ಹೋಗುವ ವಾಹನಗಳ ತಪಾಸಣೆ
  • ಸಂಜೆ 6.58ಕ್ಕೆ ಬಿಳಿ ಬಣ್ಣದ ಇನ್ನೋವಾ ಕಾರಿನಲ್ಲಿಸಿಕ್ಕಿಬಿದ್ದ ಮಾಡಾಳ್‌
  • ಮಾಡಾಳ್‌ ಸೇರಿ ನಾಲ್ವರು ಬೆಂಗಳೂರು ಕಡೆಗೆ ತೆರಳುತ್ತಿದ್ದರು
  • ಲೋಕಾಯುಕ್ತ ಟೀಂ ಕಾರು ತಡೆಯುತ್ತಿದ್ದಂತೆ, ‘‘ನಾನು ಈಗಾಗಲೇ ಮಾತನಾಡಿದ್ದೇನೆ,’’ ಎಂದ ಮಾಡಾಳ್‌
  • ‘‘ಇಲ್ಲಸರ್‌, ನಮಗೆ ಮೇಲಿಂದ ಆಡರ್‌ ಆಗಿದೆ,’’ ಎಂದ ಲೋಕಾಯುಕ್ತ ಅಧಿಕಾರಿ
  • ‘‘ಕೂಡಲೇ ನಮ್ಮ ಜೊತೆ ಬನ್ನಿ,’’ ಎಂದು ಕಾರಿನ ಮುಂದಿನ ಸೀಟ್‌ನಲ್ಲಿ ಕುಳಿತ ಅಧಿಕಾರಿ
  • ಕಾರಿನಲ್ಲಿ ಬೆಂಗಳೂರು ಕಡೆಗೆ ಕರೆದೊಯ್ದ ಲೋಕಾಯುಕ್ತ ಅಧಿಕಾರಿಗಳು

ಸಾಕ್ಷ್ಯ ಸಂಗ್ರಹಕ್ಕೆ ಬಂಧನ ಅಗತ್ಯ ಎಂದ ನ್ಯಾಯಪೀಠ
ಸೋಮವಾರ ಬೆಳಗ್ಗೆ ಜಾಮೀನು ವಿಚಾರಣೆ ಸಂದರ್ಭದಲ್ಲಿ ನ್ಯಾಯಪೀಠ ‘‘ಮೊದಲ ಆರೋಪಿ ಮಾಡಾಳ್‌ ವಿರೂಪಾಕ್ಷಪ್ಪ ಸೂಚನೆ ಇಲ್ಲದೆ ದೂರುದಾರರು 2ನೇ ಆರೋಪಿಯನ್ನು ಭೇಟಿಯಾಗುವ ಹಾಗೂ ಲಂಚಕ್ಕೆ ಬೇಡಿಕೆ ಇಡುವ, ಲಂಚ ಸ್ವೀಕರಿಸುವ ಸನ್ನಿವೇಶವೇ ಉದ್ಭವಿಸುವುದಿಲ್ಲ. ಪೊಲೀಸರು ಕೆಎಸ್‌ಡಿಎಲ್‌ ಸಿಬ್ಬಂದಿ ಮತ್ತಿತರ ಅಧಿಕಾರಿಗಳು ಸೇರಿ ಹಲವರಿಂದ ಸಾಕ್ಷಿಗಳನ್ನು ಸಂಗ್ರಹಿಸಬೇಕಿದೆ ಎಂದು ಹೇಳಿದೆ.

ತನಿಖಾಧಿಕಾರಿಗಳು ಅರ್ಜಿದಾರರ ಕುಟುಂಬ ಸದಸ್ಯರ ಹೇಳಿಕೆ ದಾಖಲಿಸಿಕೊಂಡಿದ್ದಾರೆ. ಆರೋಪಿಯ ಕೊಠಡಿಯಲ್ಲಿದ್ದ ಹಣ ಜಪ್ತಿ ಮಾಡಿದ್ದಾರೆ. ಆದರೆ, ಆರೋಪಿಯ ಮೊಬೈಲ್‌ನಿಂದ ಕರೆಗಳ ಮಾಹಿತಿ ಹಾಗೂ ವಾಟ್ಸ್‌ಆ್ಯಪ್‌ ಸಂದೇಶ ಸಂಗ್ರಹಿಸಲು ಸಾಧ್ಯವಾಗಿಲ್ಲ. ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸದಿದ್ದರೆ ಪೊಲೀಸರಿಗೆ ಸೂಕ್ತ ಸಾಕ್ಷ್ಯ ಸಂಗ್ರಹಿಸಲು ಸಾಧ್ಯವಾಗುವುದಿಲ್ಲ ಎಂದು ಅಭಿಪ್ರಾಯಪಟ್ಟಿದೆ.

ಆರ್ಥಿಕ ಅಪರಾಧ ಪ್ರಕರಣಗಳಲ್ಲಿ ಪೊಲೀಸರು ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸುವ ಅವಶ್ಯಕತೆ ಇರುತ್ತದೆಂದು ಚಿದಂಬರಂ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ಹೇಳಿದೆ. ಅರ್ಜಿದಾರರ ವಿರುದ್ಧದ ಆರೋಪಗಳು ನೇರ ಆರ್ಥಿಕ ಅಪರಾಧಕ್ಕೆ ಸಂಬಂಧಿಸಿದ್ದಲ್ಲವಾದರೂ, ಕೆಎಸ್‌ಡಿಎಲ್‌ ಸರಕಾರಿ ಒಡೆತನದ ಸಾರ್ವಜನಿಕ ಸಂಸ್ಥೆಯಾಗಿದೆ ಎಂದು ನ್ಯಾಯಾಲಯ ಹೇಳಿದೆ.

ಕಚ್ಚಾ ವಸ್ತು ಪೂರೈಸುವ ಕಂಪನಿಗಳು ಟೆಂಡರ್‌ ಪಡೆಯಲು ಕೋಟ್ಯಂತರ ರೂ. ಲಂಚದ ರೂಪದಲ್ಲಿನೀಡಿದಾಗ, ಆ ಕಂಪನಿಗಳಿಂದ ಗುಣಮಟ್ಟದ ಕಚ್ಚಾ ವಸ್ತುಗಳನ್ನು ನಿರೀಕ್ಷಿಸಲು ಸಾಧ್ಯವಿಲ್ಲ. ಕೆಟಿಟಿಪಿ ಕಾಯಿದೆ ಅನುಸಾರ ಪ್ರಕ್ರಿಯೆ ನಡೆಸುತ್ತಿರುವುದಾಗಿ ಬಿಂಬಿಸಿಕೊಂಡು ಲಂಚ ಕೊಟ್ಟವರಿಗೆ ಟೆಂಡರ್‌ ನೀಡುವುದರಿಂದ, ಆನ್‌ಲೈನ್‌ ಮೂಲಕ ನಡೆಸಿದ ಸಾರ್ವಜನಿಕ ಹರಾಜು ಪ್ರಕ್ರಿಯೆಯು ಜನರ ಕಣ್ಣೊರೆಸಲು ನಡೆಸಿದ ಖಾಲಿ ಔಪಚಾರಿಕತೆಯಾಗಿ ಉಳಿಯಲಿದೆ ಎಂದು ಹೈಕೋರ್ಟ್‌ ಹೇಳಿದೆ.

 

Demo
Share. Facebook Twitter WhatsApp Pinterest LinkedIn Tumblr Telegram Email

Related Posts

ಓಲಾ ಶೇರಿಂಗ್, ಉಬರ್ ಪೂಲಿಂಗ್‌ʼಗೆ ಅವಕಾಶ ನೀಡಲು ಸಂಸದರ ಪಟ್ಟು: ಕೆರಳಿದ ಖಾಸಗಿ ಸಾರಿಗೆ ಚಾಲಕರು

October 2, 2023

BMTC ನೌಕರರಿಗೆ ಗುಡ್ ನ್ಯೂಸ್: ಡಿಪೋಗಳಲ್ಲೇ ಊಟ ತಿಂಡಿ ಒದಗಿಸುವ ಕ್ಯಾಂಟೀನ್‌ ಆರಂಭ!

October 2, 2023

ಗಾಂಧಿಜೀ ಅವರ ಕನಸಾದ ಸ್ವಚ್ಛ ಭಾರತ ಕನಸನ್ನ ನನಸು ಮಾಡಬೇಕಿದೆ: ಗ್ರಾ.ಪಂ.ಅಧ್ಯಕ್ಷ ಅಶೋಕ್

October 2, 2023

ದಕ್ಷಿಣ ಒಳನಾಡಿನ ಕೆಲ ಭಾಗಗಳಲ್ಲಿ ಜೋರು ಮಳೆಯಾಗುವ ಸಾಧ್ಯತೆ!

October 2, 2023

ಶಿವಮೊಗ್ಗ ಗಲಭೆ: ಗೃಹ ಸಚಿವ ಪರಮೇಶ್ವರ್​​ ಬೇಜವಾಬ್ದಾರಿ ಹೇಳಿಕೆ ನೀಡಿದ್ದಾರೆ: ಆರ್.‌ ಅಶೋಕ್‌ ಕಿಡಿ!

October 2, 2023

ವಿಮಾನದಲ್ಲಿ ಎಮರ್ಜೆನ್ಸಿ ಬಾಗಿಲು ತೆಗೆಯಲು ಯತ್ನಿಸಿದವನ ಬಂಧನ: ವಿಡಿಯೋ ವೈರಲ್

October 2, 2023
Stay In Touch
  • Facebook
  • Instagram
  • YouTube
© 2023 Prajatvkannada . Designed by Prajatvkannada .
  • Home
  • ಬೆಂಗಳೂರು
  • ಜಿಲ್ಲೆ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಲೈಫ್ ಸ್ಟೈಲ್
  • ಚಲನಚಿತ್ರ
  • ಕ್ರೀಡೆ
  • ಗ್ಯಾಲರಿ
  • ವಿಡಿಯೋ
  • ಜೋತಿಷ್ಯ

Type above and press Enter to search. Press Esc to cancel.