ಬೆಂಗಳೂರು : ಬಿಲ್ಲವ, ಈಡಿಗ ಸಮಾವೇಶದಲ್ಲಿ ನಾನು ಹೇಳಿದ ಮಾತಿಗೆ ಬದ್ಧನಾಗಿದ್ದೇನೆ. ಕಾದು ನೋಡಿ ರಾಜಕಾರಣ ಏನೇನು ಆಗುತ್ತದೆ ಎಂದು ಹಿರಿಯ ಕಾಂಗ್ರೆಸ್ ಮುಖಂಡ ಬಿಕೆ ಹರಿಪ್ರಸಾದ್ ಹೇಳಿದರು. ಬೆಂಗಳೂರಿನಲ್ಲಿ ಮಾತನಾಡಿದ ಅವರು, ” ಅಸಮಾಧಾನದ ಬಗ್ಗೆ ನಾನು ಮಾತನಾಡುವುದಿಲ್ಲ. ಆದರೆ, ಶುಕ್ರವಾರ ನಾನು ಹೇಳಿದ್ದು ನಿಜ ಒಪ್ಪಿಕೊಳ್ಳುತ್ತೇನೆ ” ಎಂದರು.
” ನಾನು ಒಂದು ಸರಿ ಹೇಳಿದ ಮಾತು ವಾಪಾಸ್ ತಗೆದುಕೊಳ್ಳೋದಿಲ್ಲ. ನಾನು ಹೇಳಿದ ಮಾತಿಗೆ ಬದ್ದನಾಗಿರುತ್ತೇನೆ. ನಾನು ಹೇಳದ ಮೇಲೆ ನನ್ನ ಮಾತಲ್ಲ. ಹಾಗಿದ್ದರೂ,ನಾನು ಹೇಳಿದ ಮೇಲೆ ನನ್ನ ಮಾತಿಗೆ ಬದ್ದನಾಗಿರುತ್ತೇನೆ ” ಎಂದರು.
ಕ್ಯಾಮೆರಾ ಇರಲಿಲ್ಲ ಎಂದು ಮಾತಾಡಿದ್ದೇನೆ
ಶುಕ್ರವಾರ ಸಭೆಗೆ ಕರೆದಿದ್ದರು ಹೋಗಿದ್ದೆ ಅಷ್ಟೇ. ಅಲ್ಲಿ ಕ್ಯಾಮೆರಾಗಳು ಇರಲಿಲ್ಲ ಮಾತಾಡಿದ್ದೇನೆ. ಕ್ಯಾಮೆರಾಗಳು ಇದ್ದಿದ್ದರೆ ಮಾತಾಡುತ್ತಿರಲಿಲ್ಲ. ನಾವು ಹಿಂದುಳಿದವರು ಅಷ್ಟೆಲ್ಲಾ ಗಮನಿಸಿಲ್ಲ. ಯಾರೋ ವಿಡಿಯೋವನ್ನು ಹಾಕಿರುತ್ತಾರೆ” ಎಂದು ಹೇಳಿದರು.
ಏನಂದಿದ್ದರು ಬಿ.ಕೆ ಹರಿಪ್ರಸಾದ್?
ಬೆಂಗಳೂರಿನ ಖಾಸಗಿ ಹೋಟೆಲ್ನಲ್ಲಿ ಈಡಿಗ, ಬಿಲ್ಲವ, ದೀವರ ಮುಖಂಡರ ಸಭೆಯಲ್ಲಿ ಮಾತನಾಡಿದ್ದ ಬಿಕೆ ಹರಿಪ್ರಸಾದ್, ಪರೋಕ್ಷವಾಗಿ ಸಿಎಂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದರು. ನನಗೆ ಸಿಎಂ ಮಾಡುವುದು ಗೊತ್ತಿದೆ. ಅವರನ್ನು ಅಧಿಕಾರದಿಂದ ಕೆಳಕ್ಕೆ ಇಳಿಸುವುದು ಗೊತ್ತಿದೆ ಎಂದು ಬಿ.ಕೆ ಹರಿಪ್ರಸಾದ್ ಹೇಳಿಕೆ ನೀಡಿದ್ದರು.