ಬಾಗಲಕೋಟೆ: ಬಾಗಲಕೋಟೆ ಲೋಕಸಭಾ ಕ್ಷೇತ್ರದಲ್ಲಿ ದಿನದಿಂದ ದಿನಕ್ಕೆ ಬಿಸಿಲಿನ ಕಾವು ಏರುತ್ತಿದೆ. ಅದರೊಂದಿಗೆ ಚುನಾವಣಾ ಪ್ರಚಾರದ ಅಬ್ಬರವೂ ರಂಗೇರುತ್ತಿದೆ. ಕೈ ಅಭ್ಯರ್ಥಿ ಸಂಯುಕ್ತ ಪಾಟೀಲ್ ಅವರು ಎಲ್ಲಾ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಭರ್ಜರಿ ಪ್ರಚಾರ ಕೈಗೊಂಡಿದ್ದಾರೆ. ಅವರಿಗೆ ಶಾಸಕ ಹೆಚ್ ವೈ ಮೇಟಿ,ಮಹಿಳೆ ಜಿಲ್ಲಾಧ್ಯಕ್ಕೆ ರಕ್ಷಿತಾ ಈಟಿ ಸೇರಿ ಹಲವ್ರು ಸಾಥ್ ನೀಡಿದ್ರು. ಬಾಗಲಕೋಟೆ ನಗರದ ವಿದ್ಯಾಗಿರಿ, ಬಿಟಿಡಿಎ ಏರಿಯಾಗಳಲ್ಲಿ ಮನೆ ಮನೆಗೆ ತೆರಳಿ ಮತಯಾಚನೆ ನಡೆಸಿದರು.
ನಂತರ ಈ ಸಂದರ್ಭದಲ್ಲಿ ಶಾಸಕರಾದ ಶ್ರೀ ಎಚ್ ವೈ ಮೇಟಿ, ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷರಾದ ರಕ್ಷಿತಾ ಈಟಿ, ಪಕ್ಷದ ಮುಖಂಡರು ಹಾಗೂ ನೂರಾರು ಕಾರ್ಯಕರ್ತರು ಸಾಥ್ ನೀಡಿದರು. ಬಾಗಲಕೋಟೆ ಮತಕ್ಷೇತ್ರ ವ್ಯಾಪ್ತಿಯ ರಾಂಪೂರ ಗ್ರಾಮಕ್ಕೆ ತೆರಳಿದಾಗ ಮರಳುಸಿದ್ದೇಶ್ವವರ ಮಠದ ಧರ್ಮದರ್ಶಿಗಳಾದ ರಾಮಸ್ವಾಮಿ ಮಹಾರಾಜರು ಸಂಯುಕ್ತ ಪಾಟೀಲ್ಗೆ ಶಾಲ್ ಹೊದಿಸಿ ಸನ್ಮಾನಿಸಿ ಗೆದ್ದು ಬನ್ನಿ ಎಂದು ಆಶೀರ್ವದಿಸಿದ್ರು. ಅಲ್ಲಿಂದ ಹೊಸೂರು ಗ್ರಾಮಕ್ಕೆ ತೆರಳುವ ಮಾರ್ಗ ಮಧ್ಯೆ ಹಲವಾರು ಮಹಿಳೆಯರು ಕೈ ಅಭ್ಯರ್ಥಿ ಸಂಯುಕ್ತಗೆ ಶಾಲ್, ಹೂವಿನ ಹಾರ ಹಾಕಿ ಸನ್ಮಾನಿಸಿ ಗೌರವಿಸಿದ್ರು.