ಹುಬ್ಬಳ್ಳಿ, : 8 ಲಕ್ಷ ರೂ. ಮೌಲ್ಯದ ಬಂಗಾರ ಮತ್ತು ಬೆಳ್ಳಿಯನ್ನು ವಾಪಸ್ ನೀಡುವ ಮೂಲಕ ಆಟೋ ಚಾಲಕರೊಬ್ಬರು ಮಾನವೀಯತೆ ಮೆರೆದಿರುವಂತಹ ಘಟನೆ ನಗರದಲ್ಲಿ ನಡೆದಿದೆ. ಹುಬ್ಬಳ್ಳಿಯ ನಾಗರಾಜ್ ಎನ್ನುವವರ ಆಟೋದಲ್ಲಿ ನಗರದ ಗೋಕುಲ ಬಸ್ ನಿಲ್ದಾಣದಿಂದ ಹೊಸುರ ಬಸ್ ನಿಲ್ದಾಣದವರೆಗೆ ಮೂವರು ಪ್ರಯಾಣ ಮಾಡಿದ್ದಾರೆ. ಈ ವೇಳೆ ಆಟೋದಿಂದ ಇಳಿಯುವಾಗ ಗಡಿಬಿಡಿಯಲ್ಲಿ ಧಾರವಾಡದ ನಿಸ್ಸಾಮುದ್ದೀನ್ ಕಾಲೋನಿ ಮಹಿಳೆಯೊಬ್ಬರು ತಮ್ಮ ಬ್ಯಾಗ್ನ್ನು ಆಟೋದಲ್ಲಿ ಬಿಟ್ಟು ಹೋಗಿದ್ದಾರೆ.
ಹೀಗೆ ಪ್ರಯಾಣಿಕರು ಬಿಟ್ಟು ಹೋದ ಬ್ಯಾಗ್ನಲ್ಲಿ 4 ತೊಲೆ ಬಂಗಾರ, 16 ತೊಲೆ ಬೆಳ್ಳಿ ಹಾಗೂ ಮನೆಯ ದಾಖಲಾತಿಗಳು ಇವೆ. ಪ್ರಯಾಣಿಕರು ಬ್ಯಾಗ್ ಬಿಟ್ಟು ಹೋಗಿರುವುದನ್ನು ಗಮನಿಸಿದ ಆಟೋ ಚಾಲಕ ಹುಬ್ಬಳ್ಳಿಯ ಗೋಕುಲ ಠಾಣೆಯ ಪೊಲೀಸರು, ಆಟೋ ಚಾಲಕರ ಸಮ್ಮುಖದಲ್ಲಿ ಪ್ರಯಾಣಿಕರಿಗೆ ಬ್ಯಾಗ್ ವಾಪಸ್ ನೀಡಿದ್ದಾರೆ. ಆ ಮೂಲಕ ಆಟೋ ಚಾಲಕ ನಾಗರಾಜ್ ಮಾನವೀಯತೆ ಮೆರೆದಿದ್ದಾರೆ. ಸದ್ಯ ನಾಗರಾಜ್ ಅವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದ್ದು, ಆಟೋ ಚಾಲಕನ ಮಾನವೀಯತೆಗೆ ಪೊಲೀಸರು ಕೂಡ ಸನ್ಮಾನ ಮಾಡಿದ್ದಾರೆ.
ಅಟೋದಲ್ಲಿಯೇ ಇದ್ದ ಬ್ಯಾಗ್;
8 ಲಕ್ಷ ರೂ. ಮೌಲ್ಯದ ಬಂಗಾರ ಮತ್ತು ಬೆಳ್ಳಿಯನ್ನು ಬಿಟ್ಟು ಹೋಗಿದ್ದರು.ಮನೆಗೆ ಹೋಗಿ ನೋಡಿದಾಗ ಬ್ಯಾಗ್ ಇರಲಿಲ್ಲ. ಇದರಿಂದಾಗಿ ಆತಂಕಗೊಂಡಿದ್ದಧಾರವಾಡದ ನಿಸ್ಸಾಮುದ್ದೀನ್ ಕಾಲೋನಿ ಮಹಿಳೆಯೊಬ್ಬರು ಸಾಕಷ್ಟು ಹುಡುಕಾಟ ನಡೆಸಿದರು.ಆದರೆ 24 ಗಂಟೆಗಳು ಆಗಿದ್ದರು ಸಹ ಚಿನ್ನಾಭರಣಗಳ ಬ್ಯಾಗ್ ಸಿಕ್ಕಿರಲಿಲ್ಲ.
ನಂತರ ಶ್ರೀ ಸಿದ್ಧಾರೂಢ ಮಠ, ಹಳೆ ಬಸ್ ನಿಲ್ದಾಣ, ಹೊಸ ಬಸ್ ನಿಲ್ದಾಣ, ರೈಲು ನಿಲ್ದಾಣ ಹೀಗೆ ಎಲ್ಲ ಕಡೆ ಹುಡುಕಲಾಯಿತು. ನಂತರ ಇದರ ಜೊತೆಗೆ ೩೩ ವಿವಿಧ ಕಡೆಗಳಲ್ಲಿ ಸಿಸಿ ಟಿವಿವಳನ್ನ ಪರಿಶೀಲನೆ ಸಹ ಮಾಡಲಾಯಿತು. ಆದರೆ ಚಿನ್ನಾಭರಣ ಬ್ಯಾಗ್ ಅಟೋ ಸೀಟ್ ಹಿಂದುಗಡೆ ಇತ್ತು. ಅಟೊ ಚಾಲಕ ನೋಡಿ ಪೊಲೀಸರಿಗೆ ಒಪ್ಪಿಸಿದರು.