ತೆಲುಗು ಸಿನಿಮಾ ರಂಗದಲ್ಲಿ ಪೋಷಕ ನಟಿಯಾಗಿ ಖ್ಯಾತಿ ಘಳಿಸಿರುವ ನಟಿ ಸುರೇಖಾ ವಾಣಿ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟೀವ್ ಆಗಿರುತ್ತಾರೆ. ಮಗಳು ಸುಪ್ರೀತಾ ಜೊತೆ ಇನ್ಸ್ಟಾ, ಯೂಟ್ಯೂಬ್ನಲ್ಲಿ ವಿಡಿಯೋ ಪೋಸ್ಟ್ ಮಾಡುತ್ತಿರುವ ನಟಿ ಇತ್ತೀಚೆಗೆ ನಟನೆಯಿಂದ ದೂರ ಉಳಿದಿದ್ದಾರೆ. ಇದೀಗ ಮಗಳು ಸುಪ್ರೀತಾ ತಾಯಿಗೆ ಮತ್ತೆ ಮದುವೆ ಮಾಡಲು ನಿರ್ಧರಿಸಿದ್ದಾರೆ.
ಕಿರುತೆರೆ ನಿರ್ದೇಶಕ ಸುರೇಶ್ ತೇಜಾ ಜೊತೆ ಸುರೇಖಾ ವಾಣಿ ಮದುವೆ ಆಗಿದ್ದರು. ದಂಪತಿಗೆ ಮಗಳು ಇದ್ದಾಳೆ. ಆದರೆ 2019ರಲ್ಲಿ ಅನಾರೋಗ್ಯ ಸಮಸ್ಯೆಯಿಂದ ಸುರೇಶ್ ತೇಜಾ ಕೊನೆಯುಸಿರೆಳೆದರು. ಬಳಿಕ ತಾಯಿ- ಮಗಳು ಜೀವನ ಸಾಗಿಸುತ್ತಿದ್ದಾರೆ. ಸಾಕಷ್ಟು ಬಾರಿ ನಮ್ಮ ತಾಯಿಗೆ ಮತ್ತೊಂದು ಮದುವೆ ಮಾಡಬೇಕು ಎಂದು ಸುಪ್ರೀತಾ ಯೋಚಿಸಿದ್ದಾರೆ.
ತೆಲುಗು ಚಿತ್ರರಂಗಕ್ಕೆ ಆಕ್ಟೀವ್ ಆಗಿರುವ ಸುಪ್ರೀತ ಇತ್ತೀಚೆಗೆ ಸಂದರ್ಶನವೊಂದರಲ್ಲಿ ತಾಯಿಗೆ ಮತ್ತೊಂದು ಮದುವೆ ಮಾಡುವ ಬಗ್ಗೆ ಮಾತನಾಡಿದ್ದಾರೆ. ಈಗ ಹುಡುಗರು ನಮ್ಮ ತಾಯಿಯನ್ನು ಮದುವೆ ಆಗಲು ಒಪ್ಪಲ್ಲ, ಅಂಕಲ್ ಆಗಿದ್ದರೂ ಸರಿ. ಅವರನ್ನು ಚೆನ್ನಾಗಿ ನೋಡಿಕೊಳ್ಳುವವರು ಸಿಕ್ಕರೆ ಮದುವೆ ಮಾಡಿಸಲು ಅಭ್ಯಂತರವಿಲ್ಲ ಎಂದಿದ್ದಾರೆ.
ನಿಮ್ಮ ತಾಯಿಯ 2ನೇ ಮದುವೆಯನ್ನು ಯಾವಾಗ ನಿರೀಕ್ಷಿಸಬಹುದು ಎನ್ನುವ ಪ್ರಶ್ನೆಗೆ ಉತ್ತರಿಸಿದ ಸುಪ್ರೀತಾ, ಆಕೆ ಯಾವಾಗ ಓಕೆ ಅಂದ್ರೆ ಆಗ ಮದುವೆ. ಹುಡುಗರು ಸಿದ್ಧರಿಲ್ಲದಿದ್ದರೆ ಅಂಕಲ್ಸ್ ಆಗಿದ್ದರೂ ಪರವಾಗಿಲ್ಲ. ನಮ್ಮ ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳಬೇಕು. ಆರ್ಥಿಕವಾಗಿ ಸಬಲರಾಗಿರಬೇಕು, ಟಾಕ್ಸಿಕ್ ಇರಬಾರದು. ನಮ್ಮ ತಾಯಿಯನ್ನು ಚೆನ್ನಾಗಿ ನೋಡುಕೊಳ್ಳುವವರಾದರೆ ನನಗೆ ಸಂತೋಷ ಎಂದಿದ್ದಾರೆ.
ತಮ್ಮ ಮದುವೆ ಬಗ್ಗೆ ಪ್ರತಿಕ್ರಿಯಿಸಿದ ಸುಪ್ರೀತಾ , ಲವ್ ಮ್ಯಾರೇಜ್ ಆಗಿದ್ದರೂ ಆರೇಂಜ್ ಮ್ಯಾರೇಜ್ ಆದರೂ ಅಮ್ಮ ಹೇಳಿದವರನ್ನು ಮದುವೆ ಆಗುತ್ತೇನೆ, ಆದರೆ ಅದಕ್ಕೆ ಇನ್ನು ಬಹಳ ಸಮಯ ಇದೆ ನೋಡೋಣ ಎಂದಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟೀವ್ ಆಗಿರುವ ಸುಪ್ರೀತಾ ಅದರಿಂದ ಬರುವ ಸಾಕಷ್ಟು ಹಣವನ್ನು ಪ್ರವಾಸಕ್ಕಾಗಿ ಬಳಸುತ್ತಾರಂತೆ. ತಂದೆ ತೀರಿಕೊಂಡ ಸಮಯದಲ್ಲಿ ನಾನು ಹೊರಗೆ ಮಾತ್ರೆ ತರಲು ಹೋದರೆ ಅದರ ಬಗ್ಗೆಯೂ ಕೆಟ್ಟದಾಗಿ ಕಾಮೆಂಟ್ ಮಾಡಿದ್ದರು. ತಂದೆ ತೀರಿಕೊಂಡ ನೋವಿಲ್ಲ, ಹೇಗೆ ಸುತ್ತಾಡುತ್ತಿದ್ದಾರೆ ಎಂದಿದ್ದರು. ನಮ್ಮ ನೋವು ನಮಗೆ ಗೊತ್ತು ಎಂದು ನೋವು ತೋಡಿಕೊಂಡಿದ್ದಾರೆ.
ತಾಯಿ ಮಗಳಿಗೆ ಹಣ ಎಲ್ಲಿಂದ ಬರುತ್ತದೆ. ಹೇಗೆ ಸಂಪಾದಿಸುತ್ತಾರೆ. ಯಾವಾಗಲೂ ಟ್ರಿಪ್ ಅಂತ ಊರೂರು ಸುತ್ತುತ್ತಾರೆ ಹೀಗೆ ಏನೇನೊ ಕಾಮೆಂಟ್ ಮಾಡುತ್ತಾರೆ. ನಮ್ಮ ಬಳಿ ಹಣ ಇಲ್ಲ ಅಂತ ಯಾರು ಹೇಗಿದ್ದು? ಇರುವ ಹಣದಲ್ಲಿ, ಗಳಿಸಿದ ಹಣದಲ್ಲಿ ಪ್ರವಾಸಕ್ಕೆ ಹೋಗುತ್ತೇವೆ. ಅದರಲ್ಲಿ ತಪ್ಪೇನು? ಎಂದು ಪ್ರಶ್ನೆ ಮಾಡಿದ್ದಾರೆ.