PrajatvkannadaPrajatvkannada
  • Home
  • ಬೆಂಗಳೂರು
  • ಜಿಲ್ಲೆ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಲೈಫ್ ಸ್ಟೈಲ್
  • ಚಲನಚಿತ್ರ
  • ಕ್ರೀಡೆ
  • ಗ್ಯಾಲರಿ
  • ವಿಡಿಯೋ
  • ಜೋತಿಷ್ಯ

Subscribe to Updates

Get the latest creative news from FooBar about art, design and business.

What's Hot

ಭಾರತೀಯ ಅಮೆರಿಕನ್ ನಟಿಗೆ ರಾಷ್ಟ್ರೀಯ ಪದಕ ನೀಡಿದ ಬೈಡನ್

March 23, 2023

ಅಧ್ಯಕ್ಷ ಪುಟಿನ್ ಟೀಕಿಸಿ ಹಾಡಿದ್ದ ರಷ್ಯಾದ ಪಾಪ್ ತಾರೆ ಸಾವು

March 23, 2023

ಯುಗಾದಿ ಹಬ್ಬದಂದು ಗುಡ್ ನ್ಯೂಸ್ ನೀಡಿದ ಲವ್ ಬರ್ಡ್: `ಲವ್ ಮಾಕ್ಟೈಲ್‌ 3′ ಕೆಲಸ ಆರಂಭ

March 23, 2023
Facebook Twitter Instagram
Thursday, March 23
Facebook Instagram YouTube
PrajatvkannadaPrajatvkannada
Demo
  • Home
  • ಬೆಂಗಳೂರು
  • ಜಿಲ್ಲೆ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಲೈಫ್ ಸ್ಟೈಲ್
  • ಚಲನಚಿತ್ರ
  • ಕ್ರೀಡೆ
  • ಗ್ಯಾಲರಿ
  • ವಿಡಿಯೋ
  • ಜೋತಿಷ್ಯ
PrajatvkannadaPrajatvkannada
Home » ಬ್ರಹ್ಮೋಸ್ ಕ್ಷಿಪಣಿ ಆಕಸ್ಮಿಕ ಉಡಾವಣೆ ಕುರಿತು ಜಂಟಿ ತನಿಖೆಗೆ ಆಗ್ರಹಿಸಿದ ಪಾಕಿಸ್ತಾನ
ಅಂತರಾಷ್ಟ್ರೀಯ Prajatv KannadaBy Prajatv KannadaMarch 11, 2023

ಬ್ರಹ್ಮೋಸ್ ಕ್ಷಿಪಣಿ ಆಕಸ್ಮಿಕ ಉಡಾವಣೆ ಕುರಿತು ಜಂಟಿ ತನಿಖೆಗೆ ಆಗ್ರಹಿಸಿದ ಪಾಕಿಸ್ತಾನ

Facebook Twitter WhatsApp Reddit Email Telegram
Share
Facebook Twitter WhatsApp LinkedIn Email

ಇಸ್ಲಾಮಾಬಾದ್‌: ಸೂಪರ್‌ ಸಾನಿಕ್ ಬ್ರಹ್ಮೋಸ್ ಕ್ಷಿಪಣಿಯನ್ನು ಭಾರತವು ತನ್ನತ್ತ ಉಡಾಯಿಸಿದ ಘಟನೆಯ ಬಗ್ಗೆ ಜಂಟಿ ತನಿಖೆ ನಡೆಯಬೇಕು ಎಂದು ಪಾಕಿಸ್ತಾನವು ಪುನರುಚ್ಚರಿಸಿದೆ. ಒಂದು ವರ್ಷದ ಹಿಂದೆ ನಡೆದ ಘಟನೆಯ ಕುರಿತು ಭಾರತದಿಂದ ಸಮಂಜಸ ಪ್ರತಿಕ್ರಿಯೆಯನ್ನು ಪಾಕಿಸ್ತಾನ ಕೇಳಿದೆ.

2022ರ ಮಾರ್ಚ್‌ 9ರಂದು ರಾಜಸ್ಥಾನದ ಸೂರತ್‌ಗಢದಿಂದ ಆಕಸ್ಮಿಕವಾಗಿ ಉಡಾವಣೆಗೊಂಡಿದ್ದ ಬ್ರಹ್ಮೋಸ್ ಕ್ಷಿಪಣಿ ಪಾಕಿಸ್ತಾನದ ಭೂಪ್ರದೇಶದಲ್ಲಿ ಅಪ್ಪಳಿಸಿತ್ತು. ಘಟನೆಗೆ ಒಂದು ವರ್ಷ ತುಂಬಿದ ಹಿನ್ನೆಲೆಯಲ್ಲಿ ಪಾಕಿಸ್ತಾನದ ವಿದೇಶಾಂಗ ಕಚೇರಿ ಹೇಳಿಕೆ ಬಿಡುಗಡೆ ಮಾಡಿದೆ.

ನಿರ್ದಿಷ್ಟ ಕಾರ್ಯಾಚರಣೆ ವಿಧಾನದಲ್ಲಿ ಉಂಟಾದ ಅಚಾತುರ್ಯದಿಂದ ಕ್ಷಿಪಣಿ ಆಕಸ್ಮಿಕವಾಗಿ ಉಡಾವಣೆಗೊಂಡು ಪಾಕಿಸ್ತಾನದಲ್ಲಿ ಬಿದ್ದಿತ್ತು. ತನಿಖೆ ವೇಳೆ ಅಧಿಕಾರಿಗಳ ತಪ್ಪು ಸಾಬೀತಾದ ಹಿನ್ನೆಲೆಯಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತವು ವಾಯುಪಡೆಯ ಮೂವರು ಅಧಿಕಾರಿಗಳನ್ನು ಆಗಸ್ಟ್‌ನಲ್ಲಿ ವಜಾ ಮಾಡಿತ್ತು.

‘ಈ ಗಂಭೀರ ಘಟನೆಯ ಸುತ್ತಲಿನ ಸತ್ಯಾಸತ್ಯತೆಗಳನ್ನು ಕಂಡು ಹಿಡಿಯಲು ಜಂಟಿ ತನಿಖೆ ನಡೆಯಬೇಕೆಂಬ ಪಾಕಿಸ್ತಾನದ ಬೇಡಿಕೆಯನ್ನು ಭಾರತ ಸರ್ಕಾರ ಒಂದು ವರ್ಷ ಕಳೆದರೂ ಒಪ್ಪಿಕೊಂಡಿಲ್ಲ. ಭಾರತವು ತನ್ನ ಆಂತರಿಕ ವಿಚಾರಣೆಯನ್ನೂ ಪಾಕಿಸ್ತಾನದೊಂದಿಗೆ ಹಂಚಿಕೊಂಡಿಲ್ಲ’ ಎಂದು ಪಾಕಿಸ್ತಾನದ ವಿದೇಶಾಂಗ ಕಚೇರಿ ಹೇಳಿದೆ.

‘ಆಂತರಿಕ ವಿಚಾರಣೆಯನ್ನು ಭಾರತ ಏಕಪಕ್ಷೀಯವಾಗಿ ಮತ್ತು ತರಾತುರಿಯಲ್ಲಿ ಮುಚ್ಚಿಹಾಕಿದೆ. ಇದು ಭಾರತವು ತನ್ನ ಕಾರ್ಯತಂತ್ರದ ಅಸ್ತ್ರಗಳನ್ನು ನಿರ್ವಹಿಸುತ್ತಿರುವ ರೀತಿಯ ಬಗ್ಗೆ ಗಂಭೀರವಾದ ಪ್ರಶ್ನೆಗಳನ್ನು ಎತ್ತಲು ಕಾರಣವಾಗಿದೆ. ಈ ಬೇಜವಾಬ್ದಾರಿ ಘಟನೆಯ ಜಂಟಿ ತನಿಖೆಗಾಗಿ ಪಾಕಿಸ್ತಾನವು ತನ್ನ ಬೇಡಿಕೆಯನ್ನು ಪುನರುಚ್ಚರಿಸುತ್ತದೆ’ ಎಂದು ವಿದೇಶಾಂಗ ತಿಳಿಸಿದೆ.

‘ಸುರಕ್ಷತಾ ಶಿಷ್ಟಾಚಾರಗಳು ಮತ್ತು ಕ್ಷಿಪಣಿಗಳ ಉಡಾವಣೆಗೆ ಸಂಬಂಧಿಸಿದ ಸುರಕ್ಷತೆಗಳ ಬಗ್ಗೆ ನಮಗಿರುವ ಪ್ರಶ್ನೆಗಳಿಗೆ ಭಾರತದ ಕಡೆಯಿಂದ ಸಮಂಜಸ ಪ್ರತಿಕ್ರಿಯೆ ಮತ್ತು ಸ್ಪಷ್ಟೀಕರಣವನ್ನು ನಾವು ನಿರೀಕ್ಷಿಸುತ್ತೇವೆ’ ಎಂದು ಪಾಕಿಸ್ತಾನ ಹೇಳಿದೆ.

Share. Facebook Twitter WhatsApp Pinterest LinkedIn Tumblr Telegram Email

Related Posts

ಭಾರತೀಯ ಅಮೆರಿಕನ್ ನಟಿಗೆ ರಾಷ್ಟ್ರೀಯ ಪದಕ ನೀಡಿದ ಬೈಡನ್

March 23, 2023

ಅಧ್ಯಕ್ಷ ಪುಟಿನ್ ಟೀಕಿಸಿ ಹಾಡಿದ್ದ ರಷ್ಯಾದ ಪಾಪ್ ತಾರೆ ಸಾವು

March 23, 2023

ಯುಗಾದಿ ಹಬ್ಬದಂದು ₹ 78,800 ಕೋಟಿ ಗಾತ್ರದ ಬಜೆಟ್ ಮಂಡಿಸಿದ ಕೇರ್ಜಿ ಸರ್ಕಾರ

March 22, 2023

ಉಕ್ರೇನ್‌ಗೆ ಭೇಟಿ ನೀಡಿದ ಜಪಾನ್‌ ಪ್ರಧಾನಿ ಕಿಶಿದಾ: ಝೆಲೆನ್‌ಸ್ಕಿ ಜತೆ ಮಾತುಕತೆ

March 22, 2023

ಪಾಕಿಸ್ತಾನದಲ್ಲಿ 6.5 ತೀವ್ರತೆಯ ಭೂಕಂಪ: 12 ಮಂದಿ ನಿಧನ, 100ಕ್ಕೂ ಅಧಿಕ ಜನರಿಗೆ ಗಾಯ

March 22, 2023

Rishi Sunak: ಇಂಗ್ಲಿಷ್ ಪರೀಕ್ಷಾ ಹಗರಣ: ಕ್ರಮ ಕೈಗೊಳ್ಳುವಂತೆ ಪ್ರಧಾನಿಗೆ ಒತ್ತಾಯಿಸಿದ ಭಾರತೀಯ ವಿದ್ಯಾರ್ಥಿಗಳು

March 22, 2023
Stay In Touch
  • Facebook
  • Instagram
  • YouTube
© 2023 Prajatvkannada . Designed by Prajatvkannada .
  • Home
  • ಬೆಂಗಳೂರು
  • ಜಿಲ್ಲೆ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಲೈಫ್ ಸ್ಟೈಲ್
  • ಚಲನಚಿತ್ರ
  • ಕ್ರೀಡೆ
  • ಗ್ಯಾಲರಿ
  • ವಿಡಿಯೋ
  • ಜೋತಿಷ್ಯ

Type above and press Enter to search. Press Esc to cancel.